ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯವೂ ಒಂದಲ್ಲ ಒಂದು ದರೋಡೆ ಪ್ರಕರಣಗಳನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತವೆ..
ಆದರೆ, ತೀರ್ಥಹಳ್ಳಿಯ ಹೊರಬೈಲಿನಲ್ಲಿ ನಡೆದಿರುವ ಘಟನೆ ಬಗ್ಗೆ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗ್ತೀರಾ…
ಚಿನ್ನಕ್ಕೋಸ್ಕರ ಮನೆ ದರೋಡೆ ನಡೆಸಿರುವುದನ್ನು ಕೇಳಿರುತ್ತೇವೆ… ಆದರೆ, ಈ ಸ್ಟೋರಿಲಿ ಸ್ವಲ್ಪ ಡಿಫ್ರೆಂಟ್ ಆಗಿ ಚಿನ್ನಕ್ಕೋಸ್ಕರ ತೀರ್ಥಹಳ್ಳಿಯ ಹೊರಬೈಲಿನ ಸ್ಮಶಾನದ ಚಿತಾ ಭಸ್ಮ ವನ್ನು ಕಳ್ಳರು ಹೊತ್ತೊಯ್ದ ಘಟನೆ ನಡೆದಿದೆ…
ಕಳೆದ ಮೂರು ದಿನದ ಹಿಂದೆ ಹೊರಬೈಲಿನ ಗಂಗಾಧರೇಶ್ವರ ಸ್ಮಶಾನದಲ್ಲಿ ಮಹಿಳೆಯೊಬ್ಬರ ಶವ ಸಂಸ್ಕಾರ ಮಾಡಲಾಗಿತ್ತು… ಇದಾದ ನಂತರ ಮೂರನೇ ದಿನ ಚಿತಾ ಭಸ್ಮ ಸಂಗ್ರಹಿಸಲು ಬಂದ ಕುಟುಂಬಸ್ಥರಿಗೆ ದೊಡ್ಡ ಶಾಕ್ ಎದುರಾಗಿತ್ತು.. ಅದೇನು ಅಂದ್ರೆ ಅಲ್ಲಿದ್ದ ಚಿತಾ ಭಸ್ಮವೇ ಮಂಗ ಮಾಯವಾಗಿತ್ತು…
ಆಶ್ಚರ್ಯ ಅಂದ್ರೆ ಚಿತಾಭಸ್ಮವನ್ನು ಕದ್ದ ಕಳ್ಳರು ಕೆಲವು ಮೂಳೆಗಳನ್ನು ಅಲ್ಲೇ ಇಟ್ಟು ಹೋಗಿದ್ದಾರೆ. ಶವದ ಮೇಲಿದ್ದ ಬಂಗಾರ, ಬೆಳ್ಳಿ ಗೋಸ್ಕರ ಚಿತಾಭಸ್ಮವನ್ನು ಕದ್ದುಯ್ದಿದ್ದಾರೆ ಇಂದು ಶಾಂತಿಸಲಾಗಿದೆ…
ಭೂಮಿಯ ಮೇಲೆ ಅನೇಕ ವಿಸ್ಮಯಗಳು ನಡೆಯುತ್ತಲೇ ಇರುತ್ತದೆ… ಅದೇ ರೀತಿ ಮನುಷ್ಯನ ಕೆಲವೊಂದು ಪ್ರಸಂಗವನ್ನು ನೋಡಿದಾಗ ನಾವು ವಿಚಿತ್ರ ನಗೆಬಿರಬೇಕಾಗುತ್ತದೆ…
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
