Saturday, December 6, 2025
Saturday, December 6, 2025

ಇನ್ನುಮುಂದೆ ಶಿವಮೊಗ್ಗ ಎಲ್ಲಾ ವಿಚಾರದಲ್ಲೂ ಶಾಂತಿಯಿಂದಿರುತ್ತದೆ- ಈಶ್ವರಪ್ಪ

Date:

ಇನ್ನು ಮುಂದೆ ಶಿವಮೊಗ್ಗ ನಗರವು ಎಲ್ಲಾ ವಿಚಾರದಲ್ಲಿ ಶಾಂತಿಯುತವಾಗಿಯೇ ಇರುತ್ತದೆ ಎಂದು ನಿನ್ನೆ ಹಿಂದೂ ಮಹಾಸಭಾ ಗಣಪತಿಯ ಶಾಂತಿಯುತ ವಿಸರ್ಜನೆ ಮೆರವಣಿಗೆ ನಡೆದಿರುವ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ಕಿಡಿಗೇಡಿಗಳು ಶಿವಮೊಗ್ಗದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ನಡೆಸಿದ್ದರು. ಸರಿಯಾದ ಬುದ್ದಿಯನ್ನ ರಾಜ್ಯ ಸರ್ಕಾರದಿಂದ ಕಲಿಸಿಯಾಗಿದೆ.‌ ಅವರು ಸರಿಯಾದ ಬುದ್ದಿ ಕಲಿತಿದ್ದಾರೆ ಎಂದು ಭಾವಿಸುತ್ತೇನೆ. ಹಿರಿಯರು ಸಾಕಷ್ಟು ಬುದ್ದಿ ಹೇಳಿದ ಪರಿಣಾಮ ಶಿವಮೊಗ್ಗದಲ್ಲಿ ಶಾಂತಿ ಕಾಪಾಡಿದ್ದಾರೆ ಎಂದು ಹೇಳಿದರು.

ನಗರದ ಇತಿಹಾಸದಲ್ಲಿ ನಿನ್ನೆ ನಡೆದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಭಾರಿ ವೈಭವದಿಂದ ನಡೆದಿದೆ. ಎಲ್ಲಾ ವೃತ್ತದಲ್ಲಿ ಮತ್ತು ಗಣಪತಿ ವಿಸರ್ಜನೆ ಆಗುವ ವರೆಗೂ ನನ್ನ ಜೀವನದಲ್ಲಿ ಯುವಕರು, ಯುವತಿಯರು, ಮಹಿಳೆಯರು ಸೇರಿದ್ದು ನೋಡೇ ಇಲ್ಲ. ಇನ್ನು ಮುಂದೆ ಶಿವಮೊಗ್ಗ ಶಾಂತಿಯುತವಾಗಿರುತ್ತದೆ. ಮುಂದೆ ನಗರದಲ್ಲಿ ಏನೇ ನಡೆದರೂ ಶಾಂತಿಯುತವಾಗಿರುತ್ತದೆ ಎಂದು ತಿಳಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...