Saturday, June 27, 2026
Saturday, June 27, 2026

ಇನ್ನುಮುಂದೆ ಶಿವಮೊಗ್ಗ ಎಲ್ಲಾ ವಿಚಾರದಲ್ಲೂ ಶಾಂತಿಯಿಂದಿರುತ್ತದೆ- ಈಶ್ವರಪ್ಪ

Date:

ಇನ್ನು ಮುಂದೆ ಶಿವಮೊಗ್ಗ ನಗರವು ಎಲ್ಲಾ ವಿಚಾರದಲ್ಲಿ ಶಾಂತಿಯುತವಾಗಿಯೇ ಇರುತ್ತದೆ ಎಂದು ನಿನ್ನೆ ಹಿಂದೂ ಮಹಾಸಭಾ ಗಣಪತಿಯ ಶಾಂತಿಯುತ ವಿಸರ್ಜನೆ ಮೆರವಣಿಗೆ ನಡೆದಿರುವ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ಕಿಡಿಗೇಡಿಗಳು ಶಿವಮೊಗ್ಗದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ನಡೆಸಿದ್ದರು. ಸರಿಯಾದ ಬುದ್ದಿಯನ್ನ ರಾಜ್ಯ ಸರ್ಕಾರದಿಂದ ಕಲಿಸಿಯಾಗಿದೆ.‌ ಅವರು ಸರಿಯಾದ ಬುದ್ದಿ ಕಲಿತಿದ್ದಾರೆ ಎಂದು ಭಾವಿಸುತ್ತೇನೆ. ಹಿರಿಯರು ಸಾಕಷ್ಟು ಬುದ್ದಿ ಹೇಳಿದ ಪರಿಣಾಮ ಶಿವಮೊಗ್ಗದಲ್ಲಿ ಶಾಂತಿ ಕಾಪಾಡಿದ್ದಾರೆ ಎಂದು ಹೇಳಿದರು.

ನಗರದ ಇತಿಹಾಸದಲ್ಲಿ ನಿನ್ನೆ ನಡೆದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಭಾರಿ ವೈಭವದಿಂದ ನಡೆದಿದೆ. ಎಲ್ಲಾ ವೃತ್ತದಲ್ಲಿ ಮತ್ತು ಗಣಪತಿ ವಿಸರ್ಜನೆ ಆಗುವ ವರೆಗೂ ನನ್ನ ಜೀವನದಲ್ಲಿ ಯುವಕರು, ಯುವತಿಯರು, ಮಹಿಳೆಯರು ಸೇರಿದ್ದು ನೋಡೇ ಇಲ್ಲ. ಇನ್ನು ಮುಂದೆ ಶಿವಮೊಗ್ಗ ಶಾಂತಿಯುತವಾಗಿರುತ್ತದೆ. ಮುಂದೆ ನಗರದಲ್ಲಿ ಏನೇ ನಡೆದರೂ ಶಾಂತಿಯುತವಾಗಿರುತ್ತದೆ ಎಂದು ತಿಳಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ರೈತರು ಬರಗಾಲ ಎದುರಿಸಲು ಅಧಿಕಾರಿಗಳು ನೆರವಾಗಿ: ಬಿ.ವೈ.ರಾಘವೇಂದ್ರ

B.Y. Raghavendra ಕಳೆದ ಏಪ್ರಿಲ್, ಮೇ ಮಾಹೆಯಲ್ಲಿ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ...

ವ್ಯಕ್ತಿ ನಾಪತ್ತೆಯಾಗಿ 26ವರ್ಷದ ನಂತರ ಠಾಣೆಯಲ್ಲಿ ದಾಖಲೆಯಾದ ಪ್ರಕರಣದ ಮಾಹಿತಿ

ಮಾಳೂರು ಪೊಲೀಸ್ ಠಾಣೆಯಲ್ಲಿ ತಡವಾಗಿ ದಾಖಲಾದ ದೂರಿನ್ವಯ 26 ವರ್ಷಗಳ ಹಿಂದೆ...

Department of Social Welfare ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ‌ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯಿಂದ 2026-27 ನೇ ಸಾಲಿನಲ್ಲಿ ಭಾರತ ಸರ್ಕಾರದ ಪರಿಶಿಷ್ಟ...