Friday, March 14, 2025
Friday, March 14, 2025

ಉದಯಪುರ ಹತ್ಯೆ ಬಗ್ಗೆ ಪ್ರಮುಖ ಮುಸ್ಲೀಂ ಸಂಘಟನೆಗಳಿಂದ ಖಂಡನೆ

Date:

ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ನಂತರ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಕ್ರೂರ ಹತ್ಯೆಯನ್ನು ಎಲ್ಲಾ ಸಮುದಾಯಗಳು ಮತ್ತು ಹತ್ತಾರು ಸಂಘಟನೆಗಳು ಖಂಡಿಸಿವೆ. ಈ ಕೃತ್ಯವನ್ನು ಯಾರೂ ಬೆಂಬಲಿಸಿಲ್ಲ. ರಾಜ್ಯದ ಅನೇಕ ಪ್ರಜ್ಞಾವಂತ ನಾಗರಿಕರು ಮತ್ತು ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಲು ಕೊಡುಗೆ ನೀಡುವಂತೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

ದ್ವೇಷ ಮತ್ತು ಹಿಂಸಾಚಾರವನ್ನು ಹರಡುವ ಮೂಲಕ ಕೋಮು ವಾತಾವರಣವನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಲಾಗಿದೆ.

ಉದಯಪುರದಲ್ಲಿ ಸಂಭವಿಸಿದ ಹತ್ಯೆ ಸಹಿಸಿಕೊಳ್ಳುವಂತಹದ್ದಲ್ಲ. ನಾವು ಇದನ್ನು ಬಲವಾಗಿ ಖಂಡಿಸುತ್ತೇವೆ. ಇಸ್ಲಾಂನಲ್ಲಿ ಇಂತಹ ಘಟನೆಗಳಿಗೆ ಜಾಗವಿಲ್ಲ. ಇಸ್ಲಾಂ ಶಾಂತಿ ಮತ್ತು ನೆಮ್ಮದಿಯ ಧರ್ಮವಾಗಿದೆ ಎಂದು ರೆಹಮಾನ್ ಖಾಸ್ಮಿ ಹೇಳಿದರು. ಇಂತಹ ಘಟನೆಗಳಿಗೆ ಕಾರಣರಾದವರು ಕಿಡಿಗೇಡಿಗಳು ಮತ್ತು ಇಸ್ಲಾಂ ಧರ್ಮವನ್ನು ದೂಷಿಸುವ ಜನರು. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಅವರು ಶಾಂತಿ ಕಾಪಾಡುವಂತೆ ದೇಶವಾಸಿಗಳಿಗೆ ಮನವಿ ಮಾಡಿದರು.

ಉದಯಪುರದಲ್ಲಿ ನಡೆದ ಘಟನೆ ದುರದೃಷ್ಟಕರ ಎಂದು ರಾಜಸ್ಥಾನದ ಮುಖ್ಯ ಖಾಜಿ ಖಾಲಿದ್ ಉಸ್ಮಾನಿ ಬಣ್ಣಿಸಿದ್ದಾರೆ. ಕೇವಲ ಗಡ್ಡ ಬಿಟ್ಟರೆ, ಟೋಪಿ ಹಾಕುವುದರಿಂದ ಮುಸಲ್ಮಾನರಾಗುವುದಿಲ್ಲ, ಇಂತಹ ಘಟನೆ ಅತ್ಯಂತ ಅಸಹ್ಯಕರ. ಇದು ಇಡೀ ರಾಜ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಘಟನೆಗಳನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಮಾನವೀಯತೆಯೇ ದೊಡ್ಡ ವಿಚಾರ. ಇಸ್ಲಾಂ ನಮಗೆ ಇಂತಹ ಕೃತ್ಯವನ್ನು ಮಾಡಲು ಕಲಿಸುವುದಿಲ್ಲ. ಅಂತಹ ಮುಸ್ಲಿಮರನ್ನು ನಾವು ಬಹಿಷ್ಕರಿಸುತ್ತೇವೆ ಎಂದು ಹೇಳಿದರು. ಇಂಥವರು ನಮ್ಮ ಧರ್ಮಕ್ಕೆ ಮಾನಹಾನಿ ಮಾಡುತ್ತಾರೆ ಎಂದೂ ಕಿಡಿ ಕಾರಿದ್ದಾರೆ.

ಮುಸ್ಲಿಮ್ ಕೌನ್ಸಿಲ್ ಸಂಸ್ಥಾನದ ರಾಜ್ಯಾಧ್ಯಕ್ಷ ಯೂನಸ್ ಚೋಪ್ದಾರ್ ಮಾತನಾಡಿ, ಉದಯಪುರ ಘಟನೆ ಖಂಡನೀಯ. ಇಂತಹ ಘಟನೆನ್ನು ಸಹಿಸಲು ಸಾಧ್ಯವೇ ಇಲ್ಲ. ಹಾಗೆ ಮಾಡುವ ಯಾರಾದರೂ ಕಠಿಣ ಶಿಕ್ಷೆಗೆ ಅರ್ಹರು. ಪರಮ ಕರುಣಾಮಯಿ ಭಗವಂತನ ಹೆಸರಿನಲ್ಲಿ ಯಾರೊಬ್ಬರ ಪ್ರಾಣ ತೆಗೆಯುವುದು ಇಸ್ಲಾಂನಲ್ಲಿ ಸ್ವೀಕಾರಾರ್ಹವಲ್ಲ. ಮುಸ್ಲಿಂ ಕೌನ್ಸಿಲ್ ರಾಜ್ಯದ ಸಾಮಾನ್ಯ ಜನರಿಗೆ ಶಾಂತಿ ಮತ್ತು ಸೌಹಾರ್ದತೆಗಾಗಿ ವಿನಂತಿಸಿದೆ. ಇದರೊಂದಿಗೆ ದೇಶದಲ್ಲಿ ಕೋಮು ವಾತಾವರಣ ನಿರಂತರವಾಗಿ ಹದಗೆಡುತ್ತಿದೆ ಎಂದು ಯೂನಸ್ ಚೌಕಿದಾರ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿ ಮೌನ ವಹಿಸಿರುವುದು ಹುದ್ದೆಯ ಘನತೆಗೆ ವಿರುದ್ಧವಾಗಿದೆ ಎಂದೂ ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...

Senior Chamber International Organization ಪುಷ್ಪ ಎಸ್ ಶೆಟ್ಟಿಅವರಿಗೆ ‌ಸೀನಿಯರ್ ಚೇಂಬರ್ ಉನ್ನತ ಪ್ರಶಸ್ತಿ

Senior Chamber International Organization ಬ್ರಹ್ಮಾವರದಲ್ಲಿ ನಡೆದ ಸೀನಿಯರ್ ಚೇಂಬರ್ ಇಂಟರ್...

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...