ಮಾನ್ಯ ಪ್ರಧಾನಿ ನರೇಂದ್ರ ಮೋದಿ 2 ದಿನಗಳ ರಾಜ್ಯ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದರು. ಪ್ರಧಾನಿ ಅವರು ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ವಿಮಾನದ ಮೂಲಕ ಯಲಹಂಕ ವಾಯು ನೆಲೆಗೆ ಬಂದಿಳಿದ ಮೋದಿ ಅವರು, ರಸ್ತೆ ಮಾರ್ಗವಾಗಿ IIScಗೆ ತೆರಳಿ, ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ್ದಾರೆ.
IIScಗೆ ತೆರಳುವ ಮಾರ್ಗ ಕಾರ್ಯಕರ್ತರು ಹರ್ಷದಿಂದ ಮೋದಿ, ಮೋದಿ ಎನ್ನುವ ಜೈಕಾರ ಹಾಕಿದ್ದಾರೆ. ಇದರಿಂದ ಸಂತೋಷಗೊಂಡ ಪ್ರಧಾನಿ, ಮಾರ್ಗ ಮಧ್ಯೆ ಮೇಖ್ರಿ ಸರ್ಕಲ್ ಬಳಿ ಕಾರು ನಿಲ್ಲಿಸಿ ಬಿಜೆಪಿ ಕಾರ್ಯಕರ್ತರಿಗೆ ಕೈಬೀಸಿ ಅಲ್ಲಿರುವ ಜನರಿಗೆ ನಮಸ್ಕರಿಸಿ ದ್ದಾರೆ. ಇದು ಕಾರ್ಯಕರ್ತರನ್ನು ಮತ್ತಷ್ಟು ಪುಳಕಗೊಳಿಸಿದೆ.
ನಮೋ ನಮಃ ಘೋಷಣೆ ಕೂಗಿದರು. ಇನ್ನು ನಂತರ IIScಗೆ ಆಗಮನಿಸಿದ ಪ್ರಧಾನಿ ಮೋದಿ, ಮೆದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ್ದಾರೆ.