ನಿನ್ನೆ ಭಾನುವಾರ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಅಭಿಮಾನಿಗಳಿಗೆ ಮ್ಯಾಚ್ ನಡೆಯದೇ ಇರುವುದರಿಂದ ಬೇಸರಕ್ಕೆ ಕಾರಣವಾಗಿದೆ.ಈ ಬೇಸರದ ನಡುವೆ ಕರ್ನಾಟಕದ ರಾಜ್ಯ ಕ್ರಿಕೆಟ್ ಸಂಸ್ಥೆ ಬೆಳ್ಳಿ ರೇಖೆ ಮೂಡಿಸಿದೆ.
ಅದೇನು ಅಂದ್ರೇ, ಕೆಎಸ್ ಸಿಎ ಅಂಗಳದಲ್ಲಿ ಇದೇ ಪಂದ್ಯ ಇನ್ನೋಮ್ಮೆ ಆಡಲಾಗುತ್ತದೆ ಎಂದು ಯೋಚಿಸಿದ್ದರೆ ಅದು ತಪ್ಪು.
ಕೆಎಸ್ ಸಿಎ ಅಭಿಮಾನಿಗಳಿಗೆ ಟಿಕೆಟ್ ಹಣದ ಶೇ.50 ರಷ್ಟನ್ನು ನೀಡುವುದಾಗಿ ತಿಳಿಸಿದೆ.
ಇನ್ನು ಒಂದೇ ಒಂದು ಎಸೆತ ಆಗದೇ ಇದ್ದಿದ್ದರೆ ಟಿಕೆಟ್ ಹಣ ಸಂಪೂರ್ಣ ನೀಡಲಾಗುತ್ತಿತ್ತು. ಒಂದು ವೇಳೆ ಒಂದೇ ಒಂದು ಎಸೆತ ಎಸೆದರೂ ಹಣ ನೀಡಲಾಗುವುದಿಲ್ಲ ಎಂದು ಮೊದಲೇ ಸೂಚಿಸಲಾಗಿರುತ್ತದೆ.
ಅದರಂತೆ ಭಾನುವಾರ 3.3 ಓವರ್ ಗಳ ಪಂದ್ಯ ನಡೆದಿದೆ.
ನಿಯಮಗಳ ಅನ್ವಯ ಹಣ ಹಿಂತಿರಿಗಿಸುವ ಅಗತ್ಯವಿಲ್ಲ. ಆದರೆ,ರಾಜ್ಯ ಕ್ರಿಕೆಟ್ ಸಂಸ್ಥೆ ಹಣ ಕೊಟ್ಟು ಟಿಕೆಟ್ ಪಡೆದ ಅಭಿಮಾನಿಗಳಿಗೆ ಶೇ.50 ರಷ್ಟು ಹಣವನ್ನು ನೀಡುವುದಾಗಿ ತಿಳಿಸಿದೆ.