ಭಾರತೀಯ ರಿಸರ್ವ್ ಬ್ಯಾಂಕ್ ಕರ್ನಾಟಕದ ಸಹಕಾರಿ ಬ್ಯಾಂಕ್ ವಿರುದ್ಧ ಪ್ರಮುಖ ಕ್ರಮ ಕೈಗೊಂಡಿದೆ.
ಬಾಗಲಕೋಟೆಯಲ್ಲಿರುವ ಮುಧೋಳ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಪರವಾನಗಿಯನ್ನು ಆರ್ಬಿಐ ರದ್ದುಗೊಳಿಸಿದೆ. ಈ ಆದೇಶ ಜೂನ್ 8ರಿಂದ ಜಾರಿಗೆ ಬಂದಿದೆ.
ಆರ್ಬಿಐನ ಈ ಕ್ರಮದ ನಂತರ ಮುಧೋಳ ಸಹಕಾರಿ ಬ್ಯಾಂಕ್ಗೆ ಠೇವಣಿ ಮರುಪಾವತಿ ಮತ್ತು ನಗದು ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.
ಪರವಾನಗಿ ರದ್ದುಗೊಳಿಸುವುದಾಗಿ ಘೋಷಿಸಿರುವ ಆರ್ಬಿಐ ಮುಧೋಳ ಕೋ-ಆಪರೇಟಿವ್ ಬ್ಯಾಂಕ್ಗೆ ಸಾಕಷ್ಟು ಬಂಡವಾಳ ಮತ್ತು ಆದಾಯದ ನಿರೀಕ್ಷೆಗಳಿಲ್ಲ ಎಂದು ಹೇಳಿದೆ. ಬ್ಯಾಂಕ್ ತನ್ನ ಪ್ರಸ್ತುತ ಹಣಕಾಸಿನ ಸ್ಥಿತಿಯೊಂದಿಗೆ ತನ್ನ ಅಸ್ತಿತ್ವದಲ್ಲಿರುವ ಠೇವಣಿದಾರರಿಗೆ ಪೂರ್ಣಪ್ರಮಾಣದ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಆರ್ಬಿಐ ಪ್ರಕಟಣೆಯಲ್ಲಿ ಹೇಳಿದೆ