ಕೊರೋನಾ ಮಹಾಮಾರಿಯ ನಡುವೆ ಹೊಸದಾಗಿ ಟೊಮೇಟೊ ಜ್ವರ ಭೀತಿ ಎಲ್ಲೆಡೆ ಹೆಚ್ಚಳವಾಗಿದೆ.
ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಟೊಮೆಟೊ ಜ್ವರದ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಎಲ್ಲಾ ಕಡೆ ಭಯ ಇನ್ನೂ ಹೆಚ್ಚಾಗಿದೆ.
ಸುಮಾರು 5 ವರ್ಷದೊಳಗಿನ ಮಕ್ಕಳು ಈ ಜ್ವರದಿಂದ ಬಳಲುತ್ತಿದ್ದಾರೆ. ಈ ಕಾಯಿಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಆದರೆ, ಇದನ್ನು ನಿಯಂತ್ರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಡೆಂಗ್ಯೂ ಅಥವಾ ಚಿಕೂನ್ಗುನ್ಯಾ ಇದಕ್ಕೆ ಕಾರಣ ಎಂದು ಹಲವು ತಜ್ಞರು ತಿಳಿಸಿದ್ದಾರೆ.
ರೋಗ ಅಪಾಯಕಾರಿಯಾಗದಂತೆ ಆರೋಗ್ಯ ಇಲಾಖೆ ಜಾಗೃತಿ ಅಭಿಯಾನ ನಡೆಸುತ್ತಿದೆ. ಈ ರೋಗವು ಮುಖ್ಯವಾಗಿ ಕೇರಳದಲ್ಲಿ ಹೆಚ್ಚಾಗಿ ಹರಡಿದೆ.
ಆದರೆ ದೇಶದ ಆರೋಗ್ಯ ಸಚಿವಾಲಯ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಚಿವಾಲಯದ ಮೂಲಗಳು ಹೇಳಿದಂತೆ, ಇತರ ರಾಜ್ಯಗಳು ಸಹ ಅಲರ್ಟ್ ಆಗುವುದು ಅಗತ್ಯವಾಗಿದೆ. ಅದರಲ್ಲೂ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ.
ಅಂತರವನ್ನು ಕಾಪಾಡಿಕೊಳ್ಳುವುದು. ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು. ಹೆಚ್ಚಿನ ನೀರನ್ನು ಕುಡಿಯಬೇಕು. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.