ವಿವಾಹ ಎಂಬುದು ಪ್ರತಿಯೊಬ್ಬ ಜೀವನದ ಪ್ರಮುಖ ಘಟ್ಟ. ಹೆಣ್ಣು-ಗಂಡು ಹಾಗೂ ಅವರ ಕುಟುಂಬಗಳು ಪರಸ್ಪರ ಒಪ್ಪಿ ವಿವಾಹ ನಿಗದಿಮಾಡಲಾಗುತ್ತದೆ. ವಿವಾಹ ದ ದಿನ ಮನೆಮಂದಿಗೆಲ್ಲಾ ಸಂತೋಷ ಪಡುವ ಒಂದು ಹಬ್ಬದ ಹಾಗೆ. ಆದರೆ ಕೆಲವೊಂದು ಮದುವೆಗಳು ಅರ್ಧದಲ್ಲಿ ನಿಂತುಹೋಗುವ ಅದೆಷ್ಟು ಪ್ರಸಂಗಗಳನ್ನು ನಾವು ಕೇಳಿರುತ್ತೇವೆ. ಅದೇ ರೀತಿ ಇನ್ನೊಂದು ಮದುವೆ ಇನ್ನೇನು ವರ ತಾಳಿ ಕಟ್ಟುವ ವೇಳೆಗೆ ತನಗೆ ಮದುವೆ ಬೇಡ ಎಂದು ವಧು ವರನಿಗೆ ತಿಳಿಸಿದ್ದಾಳೆ. ಈ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಸುಮಾರು 4 ತಿಂಗಳ ಹಿಂದೆ ಈ ಜೋಡಿಗೆ ನಿಶ್ಚಿತಾರ್ಥವಾಗಿತ್ತು. ಪರಸ್ಪರ ಹೆಣ್ಣು,ಗಂಡು ಒಪ್ಪಿಗೆಯ ಮೇರೆಗೆ ವಿವಾಹ ನಿಶ್ಚಿತವಾಗಿತ್ತು. ಆದರೆ ಈಗ ವಧು ತನಗೆ ಮದುವೆ ಬೇಡ ಎಂದು ವರನಿಗೆ ತಿಳಿಸಿದ್ದಾಳೆ. ತನಗೆ ಇನ್ನೊಂದು ಪ್ರಪೋಸಲ್ ಇಷ್ಟವಾಗಿದೆ ಎಂದು ಕೂಡ ತಿಳಿಸಿದ್ದಾಳೆ ಎನ್ನಲಾಗುತ್ತಿದೆ.
ವರಹ ಬ್ರಹ್ಮಾವರದ ವರಾಗಿದ್ದಾರೆ. ಈತ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ವಧು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಎಲ್ಲಾ ಕಾರ್ಯಕ್ರಮಗಳು ಮುಗೀತು ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟಬೇಕು ಎಂದು ತಯಾರಿ ನಡೆಯುವಷ್ಟರಲ್ಲಿ ತನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಮದುವೆಗೆ ಸುಮಾರು 1000 ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಈಗ ಮದುವೆ ಬೇಡವೆಂದು ಅರ್ಧದಲ್ಲಿ ಮುರಿದುಬಿದ್ದಿದೆ.
ಬ್ರಹ್ಮಾವರ ಪೊಲೀಸರು ಆಗಮಿಸಿ ಎರಡೂ ಮನೆಯವರು ಖರ್ಚಿನ ಸಮಪಾಲು ಹಾಕಲು ಒಪ್ಪುವುದರಿಂದ ಪ್ರಕರಣ ಮುಕ್ತಾಯಗೊಂಡಿದೆ.
ಕೊನೆ ಕ್ಷಣದಲ್ಲಿ ವಧು ತನಗೆ ಮದುವೆ ಬೇಡ ಎಂದು ಹೇಳಿ ಮದುವೆ ಕಾರ್ಯಕ್ರಮಕ್ಕೆ ಅಂತ್ಯ
ಹಾಡಿದ್ದಾಳೆ.