Friday, October 4, 2024
Friday, October 4, 2024

ತಾಳಿ ಕಟ್ಟೋ ಶುಭವೇಳೆ ತಾಳಿ ತಾಳಿ ಎಂದು ಮದುವೆ ತಡೆದ ವಧು

Date:

ವಿವಾಹ ಎಂಬುದು ಪ್ರತಿಯೊಬ್ಬ ಜೀವನದ ಪ್ರಮುಖ ಘಟ್ಟ. ಹೆಣ್ಣು-ಗಂಡು ಹಾಗೂ ಅವರ ಕುಟುಂಬಗಳು ಪರಸ್ಪರ ಒಪ್ಪಿ ವಿವಾಹ ನಿಗದಿಮಾಡಲಾಗುತ್ತದೆ. ವಿವಾಹ ದ ದಿನ ಮನೆಮಂದಿಗೆಲ್ಲಾ ಸಂತೋಷ ಪಡುವ ಒಂದು ಹಬ್ಬದ ಹಾಗೆ. ಆದರೆ ಕೆಲವೊಂದು ಮದುವೆಗಳು ಅರ್ಧದಲ್ಲಿ ನಿಂತುಹೋಗುವ ಅದೆಷ್ಟು ಪ್ರಸಂಗಗಳನ್ನು ನಾವು ಕೇಳಿರುತ್ತೇವೆ. ಅದೇ ರೀತಿ ಇನ್ನೊಂದು ಮದುವೆ ಇನ್ನೇನು ವರ ತಾಳಿ ಕಟ್ಟುವ ವೇಳೆಗೆ ತನಗೆ ಮದುವೆ ಬೇಡ ಎಂದು ವಧು ವರನಿಗೆ ತಿಳಿಸಿದ್ದಾಳೆ. ಈ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಸುಮಾರು 4 ತಿಂಗಳ ಹಿಂದೆ ಈ ಜೋಡಿಗೆ ನಿಶ್ಚಿತಾರ್ಥವಾಗಿತ್ತು. ಪರಸ್ಪರ ಹೆಣ್ಣು,ಗಂಡು ಒಪ್ಪಿಗೆಯ ಮೇರೆಗೆ ವಿವಾಹ ನಿಶ್ಚಿತವಾಗಿತ್ತು. ಆದರೆ ಈಗ ವಧು ತನಗೆ ಮದುವೆ ಬೇಡ ಎಂದು ವರನಿಗೆ ತಿಳಿಸಿದ್ದಾಳೆ. ತನಗೆ ಇನ್ನೊಂದು ಪ್ರಪೋಸಲ್ ಇಷ್ಟವಾಗಿದೆ ಎಂದು ಕೂಡ ತಿಳಿಸಿದ್ದಾಳೆ ಎನ್ನಲಾಗುತ್ತಿದೆ.

ವರಹ ಬ್ರಹ್ಮಾವರದ ವರಾಗಿದ್ದಾರೆ. ಈತ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ವಧು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಎಲ್ಲಾ ಕಾರ್ಯಕ್ರಮಗಳು ಮುಗೀತು ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟಬೇಕು ಎಂದು ತಯಾರಿ ನಡೆಯುವಷ್ಟರಲ್ಲಿ ತನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಮದುವೆಗೆ ಸುಮಾರು 1000 ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಈಗ ಮದುವೆ ಬೇಡವೆಂದು ಅರ್ಧದಲ್ಲಿ ಮುರಿದುಬಿದ್ದಿದೆ.

ಬ್ರಹ್ಮಾವರ ಪೊಲೀಸರು ಆಗಮಿಸಿ ಎರಡೂ ಮನೆಯವರು ಖರ್ಚಿನ ಸಮಪಾಲು ಹಾಕಲು ಒಪ್ಪುವುದರಿಂದ ಪ್ರಕರಣ ಮುಕ್ತಾಯಗೊಂಡಿದೆ.

ಕೊನೆ ಕ್ಷಣದಲ್ಲಿ ವಧು ತನಗೆ ಮದುವೆ ಬೇಡ ಎಂದು ಹೇಳಿ ಮದುವೆ ಕಾರ್ಯಕ್ರಮಕ್ಕೆ ಅಂತ್ಯ
ಹಾಡಿದ್ದಾಳೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...