Tuesday, August 25, 2026
Tuesday, August 25, 2026

ರಷ್ಯ ಉಕ್ರೇನ್ ಕದನ ವಿರಾಮಕ್ಕೆ ವಿಶ್ವಸಂಸ್ಥೆ ಮಧ್ಯಸ್ಥಿಕೆ

Date:

ನಾಗರಿಕರನ್ನು ಸುರಕ್ಷಿತವಾಗಿ ಯುದ್ಧಭೂಮಿಯಿಂದ ಹೊರ ಕರೆತರಬೇಕಾಗಿದೆ. ಇದಕ್ಕಾಗಿ ಕದನವಿರಾಮ ಘೋಷಣೆ ಅಗತ್ಯ. ಆದ್ದರಿಂದ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರ ಭೇಟಿಗೆ ವಿಶ್ವಸಂಸ್ಥೆ ಮುಖ್ಯಸ್ಥ ಆಂಟನಿಯೋ ಗುಟೆರೆಸ್ ಅವರು ಮುಂದಾಗಿದ್ದಾರೆ.

ಏ.26ಕ್ಕೆ ಮಾಸ್ಕೊಗೆ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸರ್ಗೆ ಲಾವೋವ್ ಜೊತೆಗೆ ಮಾತುಕತೆ ನಡೆಸುವರು. ಉಕ್ರೇನ್ ಮೇಲೆ ರಷ್ಯಾದ ಆಲ್ ಔಟ್ ಸಮರವನ್ನು ಕೊನೆಗೊಳಿಸುವುದಕ್ಕೆ ಈ ಪ್ರಯತ್ನ ಒಂದು ಮೆಟ್ಟಿಲಾದೀತು ಎಂಬ ಆಶಾವಾದವನ್ನು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.

ಏ.28ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಮತ್ತು ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಜೊತೆಗೆ ಮಾತುಕತೆ ನಡೆಸುವರು. ಇಲ್ಲಿ, ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳ ಪ್ರತಿನಿಧಿಗಳಿಗೆ ಮಾನವೀಯ ನೆರವು ವಿಸ್ತರಿಸುವುದಕ್ಕೆ ಸೂಚನೆ ನೀಡಲಿದ್ದಾರೆ.

ಪೂರ್ವ ಉಕ್ರೇನ್ ಮೇಲೆ ದಾಳಿ ತೀವ್ರಗೊಳಿಸಿದ ರಷ್ಯಾ ಪಡೆಗೆ ಅಲ್ಲಿಂದ ಪ್ರತಿರೋಧ ಹೆಚ್ಚಾಗಿದೆ. ಆದ್ದರಿಂದ ಡೊನ್​ಬಾಸ್ ಪ್ರಾಂತ್ಯ ವಶಪಡಿಸುವ ಅದರ ಇರಾದೆ ವಿಳಂಬವಾಗಿದೆ. ಶನಿವಾರ ಈ ದಾಳಿ ತೀವ್ರಗೊಂಡಿದೆ ಎಂದು ಉಕ್ರೇನ್ ಮಾಧ್ಯಮಗಳು ವರದಿ ಮಾಡಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...