ಗಲಭೆ ಪೀಡಿತ ಹುಬ್ಬಳ್ಳಿ ಸಹಜ ಸ್ಥಿತಿಯತ್ತ ಮರಳಿದೆ. ಗಲಭೆಯ ಮಾಸ್ಟರ್ ಮೈಂಡ್ ಎಂದೇ ಹೇಳಲಾಗಿರೋ ವಸೀಂ ಪಠಾಣ್ ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದೇ ವೇಳೆ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಯುವಕನ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಹುಬ್ಬಳ್ಳಿ ಗಲಭೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಾ ಸಾಗಿದೆ. ಗಲಭೆಯಲ್ಲಿ ಎಐಎಂಐಎಂ ಪಾತ್ರ ಇದೆ ಎಂದು ಹೇಳುತ್ತಿರುವಾಗಲೇ ಸಂಘಟನೆಯೊಂದರ ಹೆಸರೂ ತಳಕು ಹಾಕಿಕೊಂಡಿದೆ.
ಮುಂಬೈ ಮೂಲದ ರಝಾ ಅಕಾಡೆಮಿಯೂ ಗಲಭೆ ಕೃತ್ಯದಲ್ಲಿ ಷಡ್ಯಂತ್ರ ರೂಪಿಸಿತ್ತು ಅನ್ನೋ ಮಾತು ಕೇಳಿ ಬಂದಿದೆ. ಇದಕ್ಕೆ ಪುಷ್ಟಿ ನೀಡೋ ರೀತಿಯಲ್ಲಿ ಬಂಧಿತ ವಸೀಂ ಪಠಾಣ್, ತೌಫೆಲ್ ಮುಲ್ಲಾ ರಝಾ ಅಕಾಡೆಮಿಯ ಮುಖಂಡರು. ಏನಾದರೂ ನೆಪ ಸಿಕ್ಕರೆ ಗಲಭೆ ಸೃಷ್ಟಿಸೋ ಪ್ಲ್ಯಾನ್ ನಲ್ಲಿದ್ದ ಇವರಿಗೆ ಯುವಕನೋರ್ವ ಹಾಕಿದ ವಿವಾದಾತ್ಮಕ ಪೋಸ್ಟ್ ಪ್ರಚೋದನೆ ಕೊಟ್ಟಿದೆ.