Thursday, August 13, 2026
Thursday, August 13, 2026

ಈಚಿನ ನೀರಾವರಿ ಯೋಜನೆಗಳ ರೂವಾರಿ ದೇವೇಗೌಡರು- ರೇವಣ್ಣ

Date:

ರಾಜ್ಯದ ಜನರಿಗೆ ಕುಡಿಯುವ ನೀರು ಒದಗಿಸಲು ಹಾಗೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆಗ್ರಹಿಸಿ ಜೆಡಿಎಸ್ನಿಂದ ಹಮ್ಮಿಕೊಂಡಿದ್ದ ಜನತಾ ಜಲಧಾರೆ ರಥಯಾತ್ರೆ ನಿನ್ನೆ ಚಾಲನೆ ದೊರಕಿದೆ.

ಇಂದು ಜನತಾ ಜಲಧಾರೆ ರಥಯಾತ್ರೆಗೆ ಭದ್ರಾವತಿಯ ಭದ್ರಾ ಜಲಾಶಯದಲ್ಲಿ ಎಚ್ .ಡಿ .ರೇವಣ್ಣ ಅವರು ಚಾಲನೆ ನೀಡಿದ್ದಾರೆ.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಹೆಚ್.ಡಿ. ರೇವಣ್ಣ ಅವರು,ರಾಜ್ಯದ ಲ್ಲಿ ಇರುವ ಎಲ್ಲಾ ನೀರಾವರಿ ಯೋಜನೆಗಳಿಗೆ ಅದಕ್ಕೆ ಒತ್ತುಕೊಟ್ಟ ವ್ಯಕ್ತಿ ಯಾರಾದರೂ ಇದ್ದರೆ ಅದು ನಮ್ಮ ತಂದೆ ಎನ್ನುವುದಕ್ಕಿಂತಲೂ ಅದು ದೇವೇಗೌಡರು. 1983 ರಲ್ಲಿ ದೇವೇಗೌಡರು ನೀರಾವರಿ ಸಚಿವರಾದ ಆರು ವರ್ಷದಲ್ಲಿ, ನೀರಾವರಿ ಅಭಿವೃದ್ಧಿಗೆ ಮಾಡಿದ ಹಣ 900 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದನ್ನು
50 ವರ್ಷದ ರಾಷ್ಟ್ರೀಯ ಕಾಂಗ್ರೆಸ್ ಒಪ್ಪುತ್ತದೆಯೋ ಇಲ್ಲವೋ ಎಂದು ನೀವೇ ಹೇಳಿ ಎಂದು ಹೇಳಿದರು.

50ವರ್ಷ ಆಡಳಿತದಲ್ಲಿರುವ ಕಾಂಗ್ರೆಸ್ 200 ಕೋಟಿ ರೂಪಾಯಿ ಖರ್ಚು ಮಾಡಿಲ್ಲ. ಅದೇ ದೇವೇಗೌಡರು ಅಧಿಕಾರಕ್ಕೆ ಬಂದ ಆರು ವರ್ಷದಲ್ಲಿ 900 ಕೋಟಿ ರೂಪಾಯಿ ನೀರಾವರಿ ಅಭಿವೃದ್ಧಿ ಕಾರ್ಯಕ್ರಮಗಳು ಖರ್ಚು ಮಾಡಿದ್ದಾರೆ. ಅದೇ ರೀತಿ ದೇವೇಗೌಡರು, ಮುಖ್ಯಮಂತ್ರಿಗಳಾಗಿದ್ದಾಗ ಸುಮಾರು 2000 ಕೋಟಿ ರೂಪಾಯಿ ಹಣ.ಖರ್ಚು ಮಾಡಿದ್ದಾರೆ. ಪ್ರಧಾನಮಂತ್ರಿಯಾಗಿ ಇಡೀ ರಾಷ್ಟ್ರದಲ್ಲಿ ಇಂದು ನೀರಾವರಿ ಯೋಜನೆಗಳಿಗೆ ಪ್ರತಿವರ್ಷ 18000 ಕೋಟಿ ಹಣ ಬರಬೇಕಾಗಿದ್ದರೆ ಅದು ಸನ್ಮಾನ್ಯ ದೇವೇಗೌಡರಿಗೆ ಸಲ್ಲುತ್ತದೆ ಎಂದು ದೇವೇಗೌಡರ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿ ದರು.

ಇಂದು ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದರು, ನಮ್ಮ ನೀರಾವರಿ ಯೋಜನೆಗಳನ್ನು ಯಾರಿಂದಲೂ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಎಪ್ಪತ್ತೈದು ವರ್ಷಗಳು ಆದರೂ ಕೂಡ ಕಾಂಗ್ರೆಸ್ ಇದುವರೆಗೂ ನೀರಾವರಿ ಯೋಜನೆಗಳ ಕೈಗೊಂಡಿಲ್ಲ ಎಂದು ತಿಳಿಸಿದರು.

ದೇವೇಗೌಡರು ನೀರಾವರಿ ಅಧಿಕಾರದಿಂದ ಇಳಿದ ಮೇಲೆ ಈ ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ನೀರಾವರಿ ಮಂತ್ರಿಗಳಾಗಿದ್ದರು.ದೇವೇಗೌಡರು ನೀರಾವರಿ ಯೋಜನೆಗಳಿಗೆ ಅನೇಕ ಕೊಡುಗೆ ನೀಡಿದ್ದಾರೆ ಎಂದು ಅವರ ಪಕ್ಷಗಳು ತಿಳಿಸಬೇಕೆಂದರು.

ನಮ್ಮ ಕುಮಾರಸ್ವಾಮಿಯವರು ಜಲಧಾರೆ ಕಾರ್ಯಕ್ರಮದ ಮೂಲಕ ಯಾವ ಸಂಕಲ್ಪ ಮಾಡಿದ್ದಾರೆ. ನನಗೆ ಪೂರ್ಣ ಅಧಿಕಾರ ಕೊಡಿ 5 ವರ್ಷದ ಒಳಗೆ ಎಲ್ಲಾ ಕಾರ್ಯಕ್ರಮಗಳು ಮಾಡುತ್ತೇನೆ. ಇಲ್ಲವಾದರೆ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಕುಮಾರಸ್ವಾಮಿಯವರು ಸಂಕಲ್ಪ ಮಾಡಿದ್ದಾರೆ ಎಂದು ಹೆಚ್. ಡಿ.ರೇವಣ್ಣ ಅವರು ಹೇಳಿದರು.

ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ಮೇಲೆ ಸುಮಾರು 48 ತಾಲೂಕು ಕೇಂದ್ರಗಳಲ್ಲಿ ಪಿಯು ಕಾಲೇಜು ಗಳಿರಲಿಲ್ಲ. ಅವರು ಅಧಿಕಾರಕ್ಕೆ ಬಂದ ಮೇಲೆ ಸುಮಾರು 190 ಪ್ರಥಮ ದರ್ಜೆ ಕಾಲೇಜು ನಿರ್ಮಿಸಲಾಯಿತು. ಅದೇ ರೀತಿ 1400 ಹೈಸ್ಕೂಲ್ ಗಳು, 600 ಪಿಯು ಕಾಲೇಜುಗಳು ಸ್ಥಾಪಿಸಲಾಗಿದೆ. ಇವುಗಳು ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ನೀಡಿದ ಕೊಡುಗೆಗಳಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾರದ ಅಪ್ಪಾಜಿಗೌಡ, ಮಾಜಿ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯನಾಯಕ್, ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಶ್ರೀಕಾಂತ್ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...