Thursday, October 3, 2024
Thursday, October 3, 2024

ಪಟ್ಟು ಬಿಡದ ರಷ್ಯ ಸೆಡ್ಡು ಹೊಡೆಯುತ್ತಿರುವ ಉಕ್ರೇನ್

Date:

ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ಮಾರಿಯುಪೋಲ್ ನಗರವನ್ನು ರಷ್ಯಾ ಪಡೆಗಳು ಸುತ್ತುವರೆದಿವೆ. ಉಕ್ರೇನ್‌ ಸೈನಿಕರಿಗೆ ಶರಣಾಗುವಂತೆ ಮತ್ತೊಂದು ಸೂಚನೆಯನ್ನು ರಷ್ಯಾ ರವಾನಿಸಿದೆ.

ಮಾರಿಯುಪೋಲ್‌ ನಗರದ ಸುತ್ತಲೂ ರಷ್ಯಾ ಹೆಚ್ಚಿನ ಪಡೆಗಳನ್ನು ನಿಯೋಜನೆ ಮಾಡಿದೆ. ಈ ಮೂಲಕ ಇಂದು ದಾಳಿಯನ್ನು ತೀವ್ರಗೊಳಿಸುವ ಸೂಚನೆಯನ್ನು ರಷ್ಯಾ ನೀಡಿದೆ.

ಮತ್ತೊಂದು ಕಡೆ ಉಕ್ರೇನ್‌ಗೆ ವಾಯು ರಕ್ಷಣಾ ವ್ಯವಸ್ಥೆ, ಯುದ್ಧವಿಮಾನ ಸೇರಿದಂತೆ ವಿವಿಧ ಉಪಕರಣಗಳನ್ನು ಅಮೆರಿಕ, ಬ್ರಿಟನ್ ಸೇರಿದಂತೆ ವಿವಿಧ ದೇಶಗಳು ಪೂರೈಕೆ ಮಾಡುತ್ತಿವೆ.

ನಿನ್ನೆ ಸಹ ರಷ್ಯಾ ಸೈನಿಕರು ಉಕ್ರೇನ್ ಹೋರಾಟಗಾರರಿಗೆ ಶಸ್ತ್ರಾಸ್ತ್ರ ಕೆಳಗಿಡುವಂತೆ ಸೂಚನೆ ನೀಡಿದ್ದರು.ನಂತರ ಮಾರಿಯುಪೋಲ್‌ ನಗರದ ಮೇಲೆ ದಾಳಿಯನ್ನು ಸ್ಥಗಿತಗೊಳಿಸಲಾಗಿತ್ತು.

ಇಂದು ಮಧ್ಯಾಹ್ನ 2 ಗಂಟೆಯೊಳಗೆ ಉಕ್ರೇನ್ ಸೈನಿಕರು ಶರಣಾಗಬೇಕು ಎಂದು ರಷ್ಯಾಪಡೆಗಳು ಮತ್ತೊಂದು ಗಡುವು ನೀಡಿವೆ. ಈ ವಾರ ರಷ್ಯಾ,ಉಕ್ರೇನ್ ಯುದ್ಧ ನಿರ್ಣಾಯಕಘಟ್ಟ ತಲುಪುವ ಎಲ್ಲಾ ಸೂಚನೆಗಳು ಸಿಗುತ್ತಿವೆ.

ಇನ್ನೂ ಉಕ್ರೇನ್‌ನ ಡೋನ್ಬಾಸ್ ನಗರ ಆಕ್ರಮಿಸಿಕೊಳ್ಳಲು ರಷ್ಯಾ ಪ್ರಯತ್ನ ನಡೆಸಿದೆ. ನಿನ್ನೆಯಿಂದ ಈ ನಗರದ ಮೇಲೆ ರಷ್ಯಾ ದಾಳಿ ಆರಂಭಿಸಿದೆ. ಕಲ್ಲಿದ್ದಲು ಮತ್ತು ಉಕ್ಕು ಉತ್ಪಾದನೆ ಮಾಡುವ ಪ್ರಮುಖ ನಗರ ಇದಾಗಿದೆ.

ಬಂದರು ನಗರವಾಗಿರುವ ಮಾರಿಯುಪೋಲ್‌ನಲ್ಲಿಯೂ ಉಕ್ಕು ತಯಾರಿಕಾ ಘಟಕವಿದೆ. ಆದ್ದರಿಂದ ರಷ್ಯಾ ಪಡೆಗಳು ಆ ನಗರ ಸುತ್ತುವರೆದು ಅದನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿವೆ.

ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿ ದಾಳಿಯನ್ನು ಆರಂಭಿಸಿತ್ತು. ಮೊದಲೇ ಮಾರಿಯುಪೋಲ್‌ನ ನಗರಕ್ಕೆ ಹೋಗುವ ರಸ್ತೆಗಳನ್ನು ರಷ್ಯಾ ಪಡೆಗಳು ತಮ್ಮ ವಶಕ್ಕೆ ಪಡೆದಿದ್ದವು. ಇದರಿಂದಾಗಿ ನಗರಕ್ಕೆ ಆಹಾರ, ನೀರು ಪೂರೈಕೆಗೆ ತೊಂದರೆಯಾಗಿತ್ತು.

ರಷ್ಯಾ ದಾಳಿಯಿಂದ ಈ ನಗರದಲ್ಲಿ ಇದುವರೆಗೂ ಸುಮಾರು 20 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ರಷ್ಯಾದ ದಾಳಿ ತೀವ್ರವಾಗುತ್ತಿದ್ದಂತೆಯೇ ಉಕ್ರೇನ್‌ಗೆ ಅಮೆರಿಕ ಸೇರಿದಂತೆ ವಿವಿಧ ದೇಶಗಳ ಬೆಂಬಲವೂ ಕೂಡ ಹೆಚ್ಚಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...