Monday, August 24, 2026
Monday, August 24, 2026

ಪಟ್ಟು ಬಿಡದ ರಷ್ಯ ಸೆಡ್ಡು ಹೊಡೆಯುತ್ತಿರುವ ಉಕ್ರೇನ್

Date:

ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ಮಾರಿಯುಪೋಲ್ ನಗರವನ್ನು ರಷ್ಯಾ ಪಡೆಗಳು ಸುತ್ತುವರೆದಿವೆ. ಉಕ್ರೇನ್‌ ಸೈನಿಕರಿಗೆ ಶರಣಾಗುವಂತೆ ಮತ್ತೊಂದು ಸೂಚನೆಯನ್ನು ರಷ್ಯಾ ರವಾನಿಸಿದೆ.

ಮಾರಿಯುಪೋಲ್‌ ನಗರದ ಸುತ್ತಲೂ ರಷ್ಯಾ ಹೆಚ್ಚಿನ ಪಡೆಗಳನ್ನು ನಿಯೋಜನೆ ಮಾಡಿದೆ. ಈ ಮೂಲಕ ಇಂದು ದಾಳಿಯನ್ನು ತೀವ್ರಗೊಳಿಸುವ ಸೂಚನೆಯನ್ನು ರಷ್ಯಾ ನೀಡಿದೆ.

ಮತ್ತೊಂದು ಕಡೆ ಉಕ್ರೇನ್‌ಗೆ ವಾಯು ರಕ್ಷಣಾ ವ್ಯವಸ್ಥೆ, ಯುದ್ಧವಿಮಾನ ಸೇರಿದಂತೆ ವಿವಿಧ ಉಪಕರಣಗಳನ್ನು ಅಮೆರಿಕ, ಬ್ರಿಟನ್ ಸೇರಿದಂತೆ ವಿವಿಧ ದೇಶಗಳು ಪೂರೈಕೆ ಮಾಡುತ್ತಿವೆ.

ನಿನ್ನೆ ಸಹ ರಷ್ಯಾ ಸೈನಿಕರು ಉಕ್ರೇನ್ ಹೋರಾಟಗಾರರಿಗೆ ಶಸ್ತ್ರಾಸ್ತ್ರ ಕೆಳಗಿಡುವಂತೆ ಸೂಚನೆ ನೀಡಿದ್ದರು.ನಂತರ ಮಾರಿಯುಪೋಲ್‌ ನಗರದ ಮೇಲೆ ದಾಳಿಯನ್ನು ಸ್ಥಗಿತಗೊಳಿಸಲಾಗಿತ್ತು.

ಇಂದು ಮಧ್ಯಾಹ್ನ 2 ಗಂಟೆಯೊಳಗೆ ಉಕ್ರೇನ್ ಸೈನಿಕರು ಶರಣಾಗಬೇಕು ಎಂದು ರಷ್ಯಾಪಡೆಗಳು ಮತ್ತೊಂದು ಗಡುವು ನೀಡಿವೆ. ಈ ವಾರ ರಷ್ಯಾ,ಉಕ್ರೇನ್ ಯುದ್ಧ ನಿರ್ಣಾಯಕಘಟ್ಟ ತಲುಪುವ ಎಲ್ಲಾ ಸೂಚನೆಗಳು ಸಿಗುತ್ತಿವೆ.

ಇನ್ನೂ ಉಕ್ರೇನ್‌ನ ಡೋನ್ಬಾಸ್ ನಗರ ಆಕ್ರಮಿಸಿಕೊಳ್ಳಲು ರಷ್ಯಾ ಪ್ರಯತ್ನ ನಡೆಸಿದೆ. ನಿನ್ನೆಯಿಂದ ಈ ನಗರದ ಮೇಲೆ ರಷ್ಯಾ ದಾಳಿ ಆರಂಭಿಸಿದೆ. ಕಲ್ಲಿದ್ದಲು ಮತ್ತು ಉಕ್ಕು ಉತ್ಪಾದನೆ ಮಾಡುವ ಪ್ರಮುಖ ನಗರ ಇದಾಗಿದೆ.

ಬಂದರು ನಗರವಾಗಿರುವ ಮಾರಿಯುಪೋಲ್‌ನಲ್ಲಿಯೂ ಉಕ್ಕು ತಯಾರಿಕಾ ಘಟಕವಿದೆ. ಆದ್ದರಿಂದ ರಷ್ಯಾ ಪಡೆಗಳು ಆ ನಗರ ಸುತ್ತುವರೆದು ಅದನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿವೆ.

ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿ ದಾಳಿಯನ್ನು ಆರಂಭಿಸಿತ್ತು. ಮೊದಲೇ ಮಾರಿಯುಪೋಲ್‌ನ ನಗರಕ್ಕೆ ಹೋಗುವ ರಸ್ತೆಗಳನ್ನು ರಷ್ಯಾ ಪಡೆಗಳು ತಮ್ಮ ವಶಕ್ಕೆ ಪಡೆದಿದ್ದವು. ಇದರಿಂದಾಗಿ ನಗರಕ್ಕೆ ಆಹಾರ, ನೀರು ಪೂರೈಕೆಗೆ ತೊಂದರೆಯಾಗಿತ್ತು.

ರಷ್ಯಾ ದಾಳಿಯಿಂದ ಈ ನಗರದಲ್ಲಿ ಇದುವರೆಗೂ ಸುಮಾರು 20 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ರಷ್ಯಾದ ದಾಳಿ ತೀವ್ರವಾಗುತ್ತಿದ್ದಂತೆಯೇ ಉಕ್ರೇನ್‌ಗೆ ಅಮೆರಿಕ ಸೇರಿದಂತೆ ವಿವಿಧ ದೇಶಗಳ ಬೆಂಬಲವೂ ಕೂಡ ಹೆಚ್ಚಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...

D. Devaraj Arasu ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.

D. Devaraj Arasu  1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದ್ದು,...