Sunday, December 7, 2025
Sunday, December 7, 2025

ಗುಜರಾತ್ ಟೈಟನ್ಸ್ ಗೆ ಬ್ರೇಕ್ ಹಾಕಿದ ಹೈದ್ರಾಬಾದ್

Date:

ಕೇನ್ ವಿಲಿಯಮ್ಸನ್ ಅರ್ಧಶತಕ/ಸನ್ರೈಸರ್ಸ್ ಹೈದರಾಬಾದ್ ಗೆ 8 ವಿಕೆಟ್ ಗಳ ಜಯ ಲಭಿಸುವಂತೆ ಮಾಡಿತು.

ನಾಯಕ ಕೇನ್ ವಿಲಿಯಮ್ಸನ್ (57) ಹಾಗೂ ಅಭಿಷೇಕ್ ಶರ್ಮಾ (42) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 15ನೇ ಆವೃತ್ತಿಯ 21ನೇ ಪಂದ್ಯದಲ್ಲಿ ಗುಜರಾತ್ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿತು ತಂಡಕ್ಕಿದು ಸತತ ಎರಡನೇ ಜಯ. ಹಿಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧವೂ 8 ವಿಕೆಟ್ ಗಳ ಗೆಲುವು ಕಂಡಿತ್ತು .


ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಗುಜರಾತ್ ಟೈಟನ್ಸ್. ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 162 ರನ್ ಬಾರಿಸಿತು. ಪ್ರತಿಯಾಗಿ ಸನ್ರೈಸರ್ಸ್ ಹೈದರಾಬಾದ್ 19.1 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 168 ರನ್ ಬಾರಿಸಿ ಗೆದ್ದು ಬೀಗಿತು. ಈ ಮೂಲಕ ಆರಂಭಿಕ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಟೈಟನ್ಸ್ ಗೆ ಸೋಲಿನ ರುಚಿ ತೋರಿಸಿಕೊಟ್ಟಿತು. ಎಸ್ ಆರ್ ಎಚ್ ಪರ ನಿಕೋಲಸ್ ಪೂರನ್ 18 ಎಸೆತಗಳಿಗೆ 34 ರನ್ ಚಚ್ಚಿ ಔಟಾಗದೆ ಉಳಿದರೆ, ರಾಹುಲ್ ತ್ರಿಪಾಠಿ 17 ರನ್ ಬಾರಿಸಿ ಗಾಯದಿಂದ ನಿವೃತ್ತಿಯನ್ನು ಪಡೆದರು.

ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಪ್ರದರ್ಶನ ನಿರಾಶಾದಾಯಕವಾಗಿತ್ತು.
ಗಿಲ್ ,ಹಿ೦ದಿನ ಪಂದ್ಯದಲ್ಲಿ 4 ರನ್ ಗಳ ಕೊರತೆಯಿಂದ ಶತಕ ವಂಚಿತರಾಗಿದ್ದರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಿಲ್ ಸೋಮವಾರ ಏಳು ರನ್ಗಳಿಗೆ ಆಟ ಮುಗಿಸಿದರು. ಭುವನೇಶ್ವರ್ ಕುಮಾರ್ ಎಸೆತದಲ್ಲಿ ರಾಹುಲ್ ತ್ರಿಪಾಠಿ ಹಿಡಿದ ಐಪಿಎಲ್ ನ ಅದ್ಭುತ ಕ್ಯಾಚ್ ಗೆ ಗಿಲ್ ಬಲಿಯಾದರು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮ್ಯಾಥ್ಯು ವೇಡ್ (19) ಪ್ರದರ್ಶನವು ಗಮನ ಸೆಳೆಯಲಿಲ್ಲ. ಬಳಿಕ ಆಡಲು ಬಂದ ಸಾಯಿ ಸುದರ್ಶನ್ 11 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ 64 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಪಾಂಡ್ಯ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಡೇವಿಡ್ ಮಿಲ್ಲರ್ (12) ರನ್ ಗಳಿಗೆ ಪೆವಿಲಿಯನ್ ಸೇರಿದರು. ಪಾಂಡ್ಯ ಜೊತೆ ಸೇರಿದ ಅಭಿನವ್ 21 ಎಸೆತಗಳಲ್ಲಿ 5 ಫೋರ್ ಹಾಗೂ ಒಂದು ಸಿಕ್ಸರ್ ಸಮೇತ 35 ರನ್ ಬಾರಿಸಿದರು. ಇವರಿಬ್ಬರ ಜೊತೆಯಾಟ ದಿಂದ ತಂಡದ ರನ್ ಗಳಿಕೆ ಗ್ರಾಫ್ ಮೇಲಕ್ಕೇರಿತು. ತೇವತಿಯ ಆರು ರನ್ ಗಳ ಕೊಡುಗೆ ಕೊಟ್ಟರೆ, ಎದುರಾಳಿ ತಂಡದ ಬೌಲರ್ ಗಳು 22 ರನ್ ಗಳನ್ನು ಉದಾರವಾಗಿ ನೀಡಿದರು ಎಸ್ ಆರ್ ಎಚ್ ಪರ ಭುವನೇಶ್ವರ್ ಕುಮಾರ್ 37 ರನ್ ಗಳಿಗೆ ಎರಡು ವಿಕೆಟ್ ಪಡೆದರೆ, ನಟರಾಜನ್ 34 ರನ್ ಗಳಿಗೆ ಎರಡು ವಿಕೆಟ್ ಗಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...