ಮುಂಬೈನ ಆರೋಹಿ ಸಂಗೀತ ಮಹೋತ್ಸವದಲ್ಲಿ ಶಿವಮೊಗ್ಗದ ನೌಶಾದ್ ಮತ್ತು ನಿಶಾದ್ ಹರ್ಲಾಪುರ್ ಸಹೋದರರ ಸಂಗೀತ ಕಾರ್ಯಕ್ರಮ ಏ.8 ಮತ್ತು 9 ರಂದು ನಡೆಯಲಿದೆ. ದೇಶದ ಶ್ರೇಷ್ಠ ಹಿಂದೂಸ್ತಾನಿ ಸಂಗೀತ ಮಹೋತ್ಸವದ 20ನೇ ವರ್ಷದ ಆರೋಹಿ ಸಂಗೀತ ಸಮ್ಮೇಳನ ಇದಾಗಿದ್ದು, ಹರ್ಲಾಪುರ್ ಸಹೋದರರು ಇದರಲ್ಲಿ ಹಾಡಲಿದ್ದಾರೆ.
ಪ್ರಖ್ಯಾತ ತಬಲಾ ವಾದಕರಾದ ಯಶವಂತ್ ವೈಷ್ಣವ್, ಹರ್ಮೋನಿಯಂ ಅನ್ನು ಅಭಿನವ್ ರಾಂವಡೆ ನುಡಿಸಲಿದ್ದಾರೆ. ಪಂಚಮ್ ನಿಷಾದ್ ಎಂಬ ಸಂಸ್ಥೆ ಈ ಸಮ್ಮೇಳನವನ್ನು ಆಯೋಜಿಸಿದೆ.