ಲೋಕಸಭೆಯಲ್ಲಿ ಸೋನಿಯಾ ಗಾಂಧಿ ಅವರು ಸರ್ಕಾರವು ಕೊರೋನ ಕಾರಣ ತಡೆದಿದ್ದ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ
ಪುನರಾರಂಭಿಸಲು ಮನವಿ ಮಾಡಿದ್ದಾರೆ.
ಮೂರು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಎದೆಹಾಲುಣಿಸುವ ತಾಯಂದಿರಿಗೆ ಬಿಸಿಯೂಟ ಲಭ್ಯವಾಗುವಂತೆ ಸರ್ಕಾರ ಮಾಡಬೇಕೆಂದು ಅವರು ಕೋರಿದ್ದಾರೆ.
ಮಕ್ಕಳೇ ದೇಶದ ಭವಿಷ್ಯ ಅವರಿಗೆ ಪುಷ್ಠಿಕರ ಆಹಾರ ನೀಡುವುದೂ ಅವಶ್ಯ ಎಂಬ ಹಿನ್ನೆಲೆಯಲ್ಲಿ
ಮಾತನಾಡಿದ ಅವರು
ಪ್ರಸ್ತುತ ಬಿಸಿಯೂಟ ನಿಲ್ಲಿಸಬಾರದು ಮತ್ತೆ ಬೇಗ ಮುಂದುವರೆಯಲಿ ಎಂಬ ಸೋನಿಯಾ ಅವರ ಕಾಳಜಿ ಸಾಮಾಜಿಕವಾಗಿ ಗಮನ ಸೆಳೆದಿದೆ ಎನ್ನಬಹುದು.