Monday, June 23, 2025
Monday, June 23, 2025

ಕೀವ್ ನ ಪ್ರತೀ ಸಣ್ಣಭಾಗವನ್ನೂ ರಕ್ಷಿಸುತ್ತೇವೆ- ಮೇಯರ್ ವಿಟಾಲಿ

Date:

ರಷ್ಯಾದ ಮುಂದೆ ಮಂಡಿಯೂರುವುದಕ್ಕಿಂತ ಸಾಯುವುದೇ ಲೇಸು ಎಂದು ಕೀವ್ ಮೇಯರ್ ಹೇಳಿದ್ದಾರೆ.

ಕೀವ್ ನಗರದ ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ ಸುತ್ತುವರಿದಿದ್ದ ರಷ್ಯಾದ ಸೈನ್ಯವನ್ನು ಹಿಮ್ಮೆಟ್ಟಿಸಿರುವುದಾಗಿ ಕೀವ್ ನಗರದ ಮೇಯರ್ ತಿಳಿಸಿದ್ದಾರೆ.

ಉಕ್ರೇನ್ ರಾಜಧಾನಿಯನ್ನ ರಷ್ಯಾಗೆ ಒಪ್ಪಿಸಲ್ಲ. ಬದಲಾಗಿ ಇಲ್ಲಿನ ಪ್ರತಿ ಕಟ್ಟಡವನ್ನು ರಕ್ಷಣೆ ಮಾಡುವುದಾಗಿ ಮೇಯರ್ ವಿಟಾಲಿ ಕ್ಲಿಟ್ಸ್ಚ್ ಕೊ ಪ್ರತಿಜ್ಞೆ ಮಾಡಿದರು. ಕೀವ್ ನಗರದ ಉತ್ತರ ಮತ್ತು ಪೂರ್ವ ಹೊರವಲಯದಲ್ಲಿ ರಷ್ಯಾ ಯುದ್ಧಕ್ಕಿಳಿದಿತ್ತು. ಇದೀಗ ಕೀವ್ ನಮ್ಮ ತೆಕ್ಕೆಯಲ್ಲಿ ಸುರಕ್ಷಿತವಾಗಿದೆ. ಈಗಾಗಲೇ ಸಣ್ಣ ನಗರಗಳಾದ ಮಕರಿವ್ ಮತ್ತು ಇರ್ಪಿನ್ ಉಕ್ರೇನ್ ಸೇನೆಯಿಂದ ರಕ್ಷಿಸಲ್ಪಟ್ಟಿದೆ ಎಂದಿದ್ದಾರೆ.

ಕಳೆದ ಫೆಬ್ರವರಿ 28 ರಂದು ರಷ್ಯಾ ಸೇನಾ ಪಡೆ ಕೀವ್ ಹೊರ ವಲಯಗಳವರೆಗೆ ನುಗ್ಗಿ ಬಂದಿತ್ತು. ಅದ್ರೆ ತಿಂಗಳು ಕಳೆದ್ರೂ ರಷ್ಯಾ ಕೀವ್ ನಗರವನ್ನ ವಶಕ್ಕೆ ಪಡೆಯಲು ವಿಫಲವಾಗಿದ್ದು, ಉಕ್ರೇನ್ ಪಡೆ ಹೊಡೆದೋಡಿಸಿದೆ. ರಾಜಧಾನಿ ಕೀವ್ ಉಕ್ರೇನ್ ಹೃದಯದಂತಿದ್ದು, ಇದನ್ನ ತನ್ನ ತೆಕ್ಕೆಗೆ ಪಡೆಯಲು ರಷ್ಯಾ ಹವಣಿಸುತ್ತಿದೆ. ಆದರೆ ಈ ಯತ್ನದಲ್ಲಿ ವಿಫಲವಾಗಿದ್ದು, ಕೀವ್ ನಗರದ ಪ್ರತಿ ಕಟ್ಟಡ, ಪ್ರತಿ ರಸ್ತೆ , ಪ್ರತಿ ಸಣ್ಣ ಭಾಗವನ್ನೂ ನಾವು ಉಳಿಸಿಕೊಳ್ಳಲು ಹೋರಾಡುವುದಾಗಿ ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಚ್ ಕೊ ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...