Wednesday, July 8, 2026
Wednesday, July 8, 2026

ಕೀವ್ ನ ಪ್ರತೀ ಸಣ್ಣಭಾಗವನ್ನೂ ರಕ್ಷಿಸುತ್ತೇವೆ- ಮೇಯರ್ ವಿಟಾಲಿ

Date:

ರಷ್ಯಾದ ಮುಂದೆ ಮಂಡಿಯೂರುವುದಕ್ಕಿಂತ ಸಾಯುವುದೇ ಲೇಸು ಎಂದು ಕೀವ್ ಮೇಯರ್ ಹೇಳಿದ್ದಾರೆ.

ಕೀವ್ ನಗರದ ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ ಸುತ್ತುವರಿದಿದ್ದ ರಷ್ಯಾದ ಸೈನ್ಯವನ್ನು ಹಿಮ್ಮೆಟ್ಟಿಸಿರುವುದಾಗಿ ಕೀವ್ ನಗರದ ಮೇಯರ್ ತಿಳಿಸಿದ್ದಾರೆ.

ಉಕ್ರೇನ್ ರಾಜಧಾನಿಯನ್ನ ರಷ್ಯಾಗೆ ಒಪ್ಪಿಸಲ್ಲ. ಬದಲಾಗಿ ಇಲ್ಲಿನ ಪ್ರತಿ ಕಟ್ಟಡವನ್ನು ರಕ್ಷಣೆ ಮಾಡುವುದಾಗಿ ಮೇಯರ್ ವಿಟಾಲಿ ಕ್ಲಿಟ್ಸ್ಚ್ ಕೊ ಪ್ರತಿಜ್ಞೆ ಮಾಡಿದರು. ಕೀವ್ ನಗರದ ಉತ್ತರ ಮತ್ತು ಪೂರ್ವ ಹೊರವಲಯದಲ್ಲಿ ರಷ್ಯಾ ಯುದ್ಧಕ್ಕಿಳಿದಿತ್ತು. ಇದೀಗ ಕೀವ್ ನಮ್ಮ ತೆಕ್ಕೆಯಲ್ಲಿ ಸುರಕ್ಷಿತವಾಗಿದೆ. ಈಗಾಗಲೇ ಸಣ್ಣ ನಗರಗಳಾದ ಮಕರಿವ್ ಮತ್ತು ಇರ್ಪಿನ್ ಉಕ್ರೇನ್ ಸೇನೆಯಿಂದ ರಕ್ಷಿಸಲ್ಪಟ್ಟಿದೆ ಎಂದಿದ್ದಾರೆ.

ಕಳೆದ ಫೆಬ್ರವರಿ 28 ರಂದು ರಷ್ಯಾ ಸೇನಾ ಪಡೆ ಕೀವ್ ಹೊರ ವಲಯಗಳವರೆಗೆ ನುಗ್ಗಿ ಬಂದಿತ್ತು. ಅದ್ರೆ ತಿಂಗಳು ಕಳೆದ್ರೂ ರಷ್ಯಾ ಕೀವ್ ನಗರವನ್ನ ವಶಕ್ಕೆ ಪಡೆಯಲು ವಿಫಲವಾಗಿದ್ದು, ಉಕ್ರೇನ್ ಪಡೆ ಹೊಡೆದೋಡಿಸಿದೆ. ರಾಜಧಾನಿ ಕೀವ್ ಉಕ್ರೇನ್ ಹೃದಯದಂತಿದ್ದು, ಇದನ್ನ ತನ್ನ ತೆಕ್ಕೆಗೆ ಪಡೆಯಲು ರಷ್ಯಾ ಹವಣಿಸುತ್ತಿದೆ. ಆದರೆ ಈ ಯತ್ನದಲ್ಲಿ ವಿಫಲವಾಗಿದ್ದು, ಕೀವ್ ನಗರದ ಪ್ರತಿ ಕಟ್ಟಡ, ಪ್ರತಿ ರಸ್ತೆ , ಪ್ರತಿ ಸಣ್ಣ ಭಾಗವನ್ನೂ ನಾವು ಉಳಿಸಿಕೊಳ್ಳಲು ಹೋರಾಡುವುದಾಗಿ ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಚ್ ಕೊ ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...