Friday, December 19, 2025
Friday, December 19, 2025

ಮುಗಿಯದ ಯುದ್ಧ ಮಾನವೀಯ ದೃಷ್ಟಿ ಕೊರತೆಯ ಪುಟಿನ್

Date:

ಯೂಕ್ರೇನ್ ಮೇಲೆ ರಷ್ಯಾ ಫೆ.24ರಂದು ದಾಳಿ ಆರಂಭಿಸಿದ್ದು, ಒಂದು ತಿಂಗಳು ಪೂರ್ಣವಾಗಿದೆ. ಮೂರನೇ ವಿಶ್ವ ಸಮರದ ಆತಂಕ ಸೃಷ್ಟಿಸಿರುವ ಈ ಯುದ್ಧ ಇನ್ನೂ ಮುಂದುವರಿದಿದೆ. ಯೂಕ್ರೇನ್ ಸಮರಾಂಗಣವಾಗಿದ್ದು, ಸಾಕಷ್ಟು ನಾಶನಷ್ಟಗಳನ್ನು ಅನುಭವಿಸಿದೆ.

ಆದರೆ ಅದರ ನಿಖರ ಚಿತ್ರಣ ಇನ್ನೂ ಜಗತ್ತಿಗೆ ಲಭ್ಯವಾಗಿಲ್ಲ ಎಂಬುದು ವಾಸ್ತವ.

ಎರಡನೇ ವಿಶ್ವ ಯುದ್ಧದ ನಂತರದಲ್ಲಿ ಯುರೋಪ್ ಖಂಡದಲ್ಲಿ ನಡೆಯುತ್ತಿರುವ ಅತಿದೊಡ್ಡ ಕದನ ಇದಾಗಿದ್ದು, ತಿಂಗಳು ಕಳೆದರೂ ತೀವ್ರತೆ ಹೆಚ್ಚುತ್ತಿದೆ. ಇದು ಜಗತ್ತಿನ ಕಳವಳವನ್ನು ಹೆಚ್ಚು ಮಾಡಿದೆ. ಉಭಯ ರಾಷ್ಟ್ರಗಳ ನಡುವಿನ ಶಾಂತಿಮಾತುಕತೆ ನಾಲ್ಕಾರು ಸುತ್ತುಗಳನ್ನು ಕಂಡಿದೆಯಾದರೂ ಫಲ ಕಂಡಿಲ್ಲ.

ಯುದ್ಧ ನಿರತ ರಷ್ಯಾ ಮೇಲೆ ಅಮೆರಿಕ ಮತ್ತು ನ್ಯಾಟೋ ಮಿತ್ರ ರಾಷ್ಟ್ರಗಳು ವಿವಿಧ ನಿರ್ಬಂಧಗಳನ್ನು ಹೇರಿವೆ.

ಆ ಮೂಲಕ ಯುದ್ಧ ತೀವ್ರತೆ ಕಡಿಮೆ ಮಾಡುವ ಪ್ರಯತ್ನ ನಡೆಸಿವೆ. ಆದರೆ, ಇದಾವುದೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ನಿಲುವನ್ನು ಬದಲಾಯಿಸುವಲ್ಲಿ ಸಫಲವಾಗಿಲ್ಲ. ಯೂಕ್ರೇನ್​ಗೆ ಅಮೆರಿಕ ಮತ್ತು ನ್ಯಾಟೋ ಮಿತ್ರರಾಷ್ಟ್ರಗಳು ಸೇನಾ ಮತ್ತು ಇತರೆ ನೆರವುಗಳನ್ನು ಪೂರೈಸುತ್ತಿದ್ದು, ರಷ್ಯಾಕ್ಕೆ ತಡೆಯೊಡ್ಡುವುದಕ್ಕೆ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ನಡೆಸಿವೆ ಎಂದು ತಿಳಿದುಬಂದಿದೆ.

ರಷ್ಯಾ-ಯೂಕ್ರೇನ್ ನಾಗರಿಕರು ಈ ಯುದ್ಧದ ಕಾರಣ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಷ್ಯಾ ಮೇಲೆ ಉಕ್ರೇನ್ ದಾಳಿ ನಡೆಸಿದ ವರದಿ ಬಂದಿಲ್ಲ. ಆದರೂ, ತೃತೀಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧದ ಕಾರಣ ರಷ್ಯಾ ಜನರ ಬದುಕು ತಲ್ಲಣಗೊಂಡಿದೆ. ಉಕ್ರೇನ್ ನಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೇ ಭೀತಿಯಿಂದ 35 ಲಕ್ಷಕ್ಕೂ ಹೆಚ್ಚು ಜನ ನೆರೆ ರಾಷ್ಟ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಅಮೆರಿಕ ಮತ್ತು ನ್ಯಾಟೋ ರಾಷ್ಟ್ರಗಳ ಹಿತಕ್ಕೆ ಪೂರಕವಾಗಿ ನಡೆಯುತ್ತಿರುವ ಯೂಕ್ರೇನ್​ನ ರಾಜಧಾನಿ ಕಿಯೆವ್ ವಶಪಡಿಸಿಕೊಂಡು ಸರ್ಕಾರ ಪತನಗೊಳಿಸುವ ರಷ್ಯಾ ಸರ್ಕಾರದ ಪ್ರಯತ್ನಕ್ಕೆ ಇನ್ನೂ ನಿರೀಕ್ಷಿತ ಫಲ ಸಿಕ್ಕಿಲ್ಲ. ರಷ್ಯಾ ಪರ ಸರ್ಕಾರವನ್ನು ಅಲ್ಲಿ ಸ್ಥಾಪಿಸಿ, ನ್ಯಾಟೋ ರಾಷ್ಟ್ರಗಳು ತನ್ನ ರಾಷ್ಟ್ರದ ಸುತ್ತ ಇರುವುದನ್ನು ತಪ್ಪಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...