“ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು” ಎಂಬ ತತ್ವಪದದಂತೆ ಶಿವಮೊಗ್ಗದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಇದೇ ಆಗಸ್ಟ್-30 ರಂದು ಭಾನುವಾರ ಸವ೯ ಜಾತಿ-ಜನಾಂಗಗಳ ವಿಧುರ-ವಿಧವೆ ಪುನರ್ವಿವಾಹ ಹಾಗು ಪ್ರಥಮ ವಿವಾಹ ಆಸಕ್ತರ ಸಮಾಲೋಚನೆ ಸಮಾವೇಶ ಜರುಗಲಿದೆ.
ಇದೊಂದು ಮಾನವೀಯ ಸಂಬಂಧ ಹಾಗು ಸಾಮಾಜಿಕ ಕಳಕಳಿಯ ಪ್ರಯತ್ನವಾಗಿದ್ದು ನಾಡಿನ ನಾನಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಅಂದು ಬೆಳಿಗ್ಗೆ 10 ಗಂಟೆಗೆ ವಿವಿಧೆಡೆಗಳಿಂದ ವಿಧುರ-ವಿಧವೆ ಹಾಗು ಪರಿತ್ಯಕ್ತರು ಭಾಗವಹಿಸಲಿದ್ದಾರೆ.
ಪ್ರಸ್ತುತ ಆಗಸ್ಟ್ ತಿಂಗಳ ಸಮಾವೇಶಕ್ಕೆ ಈಗಾಗಲೇ ಅಡ್ವಾನ್ಸ್ ಆಗಿ ಹೆಸರು ನೊಂದಾಯಿಸಿರುವವರು ಶ್ರೀಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಒಂದನೆ ಮಹಡಿ, ಜಿಲ್ಲಾ ಸಕಾ೯ರಿ ನಿವೃತ್ತ ನೌಕರರ ಸಂಘದ ಕಟ್ಟಡ, ಪ್ರೆಸ್ ಕ್ಲಬ್ ಎದುರು, ಆರ್.ಟಿ.ಒ. ಆಫೀಸ್ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಶಿವಮೊಗ್ಗ. ಇಲ್ಲಿ ಆರ್. ಟಿ. ನಟರಾಜ್ ಮೊಬೈಲ್ 9448143165/ರೂಪ 9448127813/ ಸುನೀತ 7022413161 ಇವರಿಂದ ಮಾಹಿತಿ ಪಡೆದು ಕಾಯ೯ಕ್ರಮದಲ್ಲಿ ಭಾಗವಹಿಸಬಹುದು, ಹೆಸರು ನೊಂದಾಯಿಸಲು ಕೊನೆ ದಿನ ಆಗಸ್ಟ್-20
ವಿಶೇಷ ಸೂಚನೆ : ಹಿಂದಿನ ತಿಂಗಳುಗಳಲ್ಲಿ ಕಾಯ೯ಕ್ರಮಕ್ಕೆ ಆಗಮಿಸಿದ್ದ ಅಭ್ಯರ್ಥಿಗಳು ಪುನಃ ಸಭಾಂಗಣದ ಒಳಗಡೆ ಪ್ರವೇಶಿಸಲು ರಸೀದಿ ಜೊತೆ ಬರಬೇಕಾಗಿ ವಿನಂತಿ.
ಆಗಸ್ಟ್ 30. ವಿದುರ- ವಿಧವೆ,ಪರಿತ್ಯಕ್ತೆಯರ ಸಮಾವೇಶ
Date:
