ತೋಟದ ಬಾವಿಗೆ ಕಾಡುಕೋಣವೊಂದು ಬಿದ್ದು ಮೃತಪಟ್ಟಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ದೇವಂಗಿ – ಕೆರೆಕೊಪ್ಪ ಸಮೀಪದ ಗುಡ್ಡೆಕೊಪ್ಪ ಗ್ರಾಮದಲ್ಲಿ ಶನಿವಾರ ರಾತ್ರಿ 8 ಗಂಟೆಯ ವೇಳೆಯಲ್ಲಿ
ಕೃಷ್ಣಮೂರ್ತಿ ಎಂಬುವರ ತೋಟದ ಬಾವಿಗೆ ಕಾಡುಕೋಣ ಆಯತಪ್ಪಿ ಬಿದ್ದಿದೆ.
ಬಾವಿಗೆ ಬಿದ್ದ ಶಬ್ದ ಕೇಳಿ ಅಕ್ಕಪಕ್ಕದವರು ತಕ್ಷಣವೇ ಬಂದು ನೋಡಿದಾಗ ದೈತ್ಯಕಾರದ ಕಾಡುಕೋಣ ಎಂಬುದು ತಿಳಿದಿದೆ. ಹಗ್ಗ ಕಟ್ಟಿ ಎಳೆಯಲು ಪ್ರಯತ್ನ ಪಟ್ಟರು ಸಹ ಅಷ್ಟರಲ್ಲೇ ಅದು ಸಾವನ್ನಪ್ಪಿದೆ.
ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೂ ಇಲ್ಲಿಯವರೆಗೆ ಯಾರು ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
