2026-27 ನೇ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಹಾಗೂ ತರೀಕೆರೆ ತಾಲ್ಲೂಕು ಭಾಗದ ಭದ್ರಾ ಮೇಲ್ದಂಡೆ ಯೋಜನಾ ವ್ಯಾಪ್ತಿಯ ಕಾರ್ಯನಿರತ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಕೃಷಿ ಯಂತ್ರೋಪಕರಣಗಳ ವಿತರಣೆ ಹಾಗೂ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದ. ಸನ್ಮಾನ್ಯ ಶ್ರೀ. ಕೆ.ಜೆ. ಜಾರ್ಜ್ ಮಾನ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು ಕನಾರ್ಟಕ ಸರ್ಕಾರ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಯೋಜನ ವ್ಯಾಪ್ತಿಯ ಕಾರ್ಯನಿರತ ಸಹಕಾರ ಸಂಘಗಳಿಗೆ ಕೃಷಿ ಚಟುವಟಿಕೆಗಳಿಗೆ ಉಪಯೋಗವಾಗುವ ಕೃಷಿ ಯಂತ್ರೋಪಕರಣಗಳನ್ನು ಡಾII ಕೆ.ಪಿ. ಅಂಶುಮಂತ್ ಮಾನ್ಯ ಅಧ್ಯಕ್ಷರು ಭದ್ರಾ ಕಾಡಾ ಶಿವಮೊಗ್ಗ ರವರ ಅಧ್ಯಕ್ಷತೆಯಲ್ಲಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಶ್ರೀ. ಶ್ರೀನಿವಾಸ ಶಾಸಕರು ತರೀಕರೆ ವಿಧಾನಸಭಾ ಕ್ಷೇತ್ರ. ಶ್ರೀ. ಶಿವಾನಂದ್ ಅಧ್ಯಕ್ಷರು ಗ್ಯಾರಂಟಿ ಯೋಜನೆ ಸಮಿತಿ ಚಿಕ್ಕಮಗಳೂರು. ಶ್ರೀಮತಿ ಕೀರ್ತನ ಹೆಚ್. ಎಸ್. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿಕ್ಕಮಗಳೂರು. ಶ್ರೀ. ಜಿತೇಂದ್ರ ಕುಮಾರ್ ಅಧೀಕ್ಷಕ ಪೊಲೀಸ್ ಚಿಕ್ಕಮಗಳೂರು, ಸತೀಶ್ ಆರ್. ಆಡಳಿತಾಧಿಕಾರಿಗಳು, ಶ್ರೀ. ಪ್ರಶಾಂತ್ ಕೆ. ಭೂ ಅಭಿವೃದ್ದಿ ಅಧಿಕಾರಿ (ತಾಂತ್ರಿಕ), ಉಪಆಡಳಿತಾಧಿಕಾರಿ, ಶ್ರೀ. ಶ್ರೀನಿವಾಸ್ ಚಿಂತಾಲ್ ಭೂ ಅಭಿವೃದ್ದಿ ಅಧಿಕಾರಿ (ಕೃಷಿ), ಶ್ರೀ. ಡಾ|| ನಾಗೇಶ್ ಡೊಂಗ್ರೆ, ಭೂ ಅಭಿವೃದ್ದಿ ಅಧಿಕಾರಿ (ಸಹಕಾರ), ಶ್ರೀ. ಜಿ.ಎಸ್. ಪಟೇಲ್. ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು, ಅಚ್ಚುಕಟ್ಟು ರೈತರು ಉಪಸ್ಥಿತರಿದ್ದರು
ಭದ್ರಾ ಮೇಲ್ದಂಡೆ ಯೋಜನೆ: ಕಾರ್ಯನಿರತ ನೀರು ಬಳಕೆದಾರರ ಸಂಘಗಳ ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ.ಜಾರ್ಜ್
Date:
