Thursday, July 30, 2026
Thursday, July 30, 2026

ದೇಹದ ರಕ್ತದೊತ್ತಡ ನಿಯಂತ್ರಣ, ನಿದ್ರಾಹೀನತೆ ದೂರಮಾಡಲು ಯೋಗ ಸಹಕಾರಿ- ಹಾಲಯ್ಯ ವಿರಕ್ತಮಠ

Date:

ಧ್ಯಾನ ಯೋಗ ಪ್ರಾಣಾಯಾಮಗಳು ಮನಸ್ಸಿನ ಆತಂಕ ಹಾಗೂ ಭಯವನ್ನು ದೂರ ಮಾಡುವುದಲ್ಲದೆ ನಮ್ಮ ಕೆಲಸದಲ್ಲಿ ಗಮನ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಆಂತರಿಕ ಪ್ರಶಾಂತತೆಯನ್ನ ನೀಡುತ್ತದೆ ಎಂದು ಯೋಗ ಪ್ರಾಣಾಯಾಮ ಧ್ಯಾನದ ವಿಶೇಷ ತರಬೇತುದಾರರಾದ ಶ್ರೀಯುತ ಹಾಲಯ್ಯ ವಿರಕ್ತಮಠ ಅಭಿಮತ ಪಡಿಸಿದರು ಅವರು ಶ್ರೀ ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಹಮ್ಮಿಕೊಳ್ಳಲಾದ ವಿಶೇಷ ಯೋಗ ಧ್ಯಾನ ಪ್ರಾಣಾಯಾಮದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು. ನಮ್ಮ ದೇಹದಲ್ಲಿ ಇರುವ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ನಿದ್ರಾಹೀನತೆಯನ್ನು ದೂರ ಮಾಡಲು ಹಾಗೂ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯೋಗ ಪ್ರಾಣಾಯಾಮ ಧ್ಯಾನ ಬಹಳ ವಿಶೇಷವಾದ ಪಾತ್ರವನ್ನು ವಹಿಸಿವೆ ಹಾಗೆ ಇವುಗಳನ್ನು ಕ್ರಮಬದ್ಧವಾಗಿ ಮಾಡಬೇಕು ಮತ್ತು ಯೋಗ ಪ್ರಾಣಾಯಾಮ ಧ್ಯಾನ ಮಾಡುವವರು ದೀರ್ಘಾಯುಷ್ಯವುಳ್ಳವರಾಗುತ್ತಾರೆ ಸಾಕಷ್ಟು ಕಾಯಿಲೆಗಳು ನಮ್ಮ ದೇಹದಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಮಾಯವಾಗುತ್ತವೆ ಹಾಗೆ ನಮ್ಮ ಆತ್ಮವಿಶ್ವಾಸ ಮತ್ತು ದೈಹಿಕ ಹಾಗೂ ಮಾನಸಿಕ ಸದೃಢತೆ ಉಂಟಾಗುತ್ತದೆ ಚಿಕ್ಕ ಮಕ್ಕಳಿಂದ ವಯೋ ವೃದ್ಧರವರೆಗೂ ಯೋಗ ಪ್ರಾಣಾಯಾಮ ಧ್ಯಾನ ಪರಿಪೂರ್ಣವಾದ ಆರೋಗ್ಯ ನೀಡುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ನುಡಿದರು. ಇದೇ ಸಂದರ್ಭದಲ್ಲಿ ಹಿರಿಯ ಯೋಗ ಶಿಕ್ಷಕರಾದ ಜಿಎಸ್ ಓಂಕಾರವರು ಮಾತನಾಡುತ್ತಾ ಶಿವಗಂಗಾ ಯೋಗ ಸಂಸ್ಥೆ ನಗರದ 42 ಕಡೆ ಉಚಿತವಾಗಿ ಪ್ರತಿನಿತ್ಯ ಯೋಗ ಪ್ರಾಣಾಯಾಮ ಧ್ಯಾನ ಹಾಗೂ ಸಂಸ್ಕಾರದ ತರಗತಿಗಳನ್ನು ನಡೆಸುತ್ತಿದ್ದು ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು ಮತ್ತೋರ್ವ ಯೋಗ ಶಿಕ್ಷಕರಾದ ಹರೀಶ್ ಅವರು ಮಾತನಾಡುತ್ತಾ ಸಾಕಷ್ಟು ನಮ್ಮ ಆಂತರಿಕ ಕಾಯಿಲೆಗಳು ಸಮಸ್ಯೆಗಳು ಯೋಗದಲ್ಲಿ ಪರಿಹಾರವನ್ನು ಕಂಡುಕೊಂಡವರು ಸಾಕಷ್ಟು ಜನರಿದ್ದಾರೆ ಇಂದು ಪ್ರಪಂಚದ ಸಾಕಷ್ಟು ದೇಶಗಳಲ್ಲಿ ಯೋಗವನ್ನು ಒಪ್ಪಿ ಅಭ್ಯಾಸ ಮಾಡುತ್ತಿದ್ದಾರೆ ಪ್ರಪಂಚಕ್ಕೆ ಯೋಗವನ್ನು ಕೊಟ್ಟಂತಹ ನಮ್ಮ ಭಾರತ ದೇಶ ವಿಶೇಷ ಸ್ಥಾನಮಾನ ಗಳಿಸಿದೆ ಎಂದು ನುಡಿದರು. ಶಿಬಿರದಲ್ಲಿ ರೋಟರಿ ಜಿ ವಿಜಯಕುಮಾರ್
ಕಾಟನ್ ಜಗದೀಶ್. ಸುಬ್ರಮಣಿ. ಮಹೇಶ್. ನರಸೂಜಿ ರಾವ್. ಶಂಕರ್. ದೀಪಕ್. ಶಶಿಧರ್. ಶಿವಕುಮಾರ್. ಅರುಣ್ ಹಾಗೂ ಉಷಾ.. ಲತಾ. ಸುಜಾತ.ಸೌಮ್ಯ.. ವಸುಂದರಾ.. ಶೈಲಜಾ ಹಾಗೂ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಇಂದು ,ಗುರು ಪೂರ್ಣಿಮೆ” ಗುರುವಿನಿಂ ಗುರಿಯುಂ…”ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

Klive Special Article "ಗುರುಬ್ರಹ್ಮ ಗುರುವಿಷ್ಣು ಗುರುದೇವೋಮಹೇಶ್ವರ/ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀಗುರುವೇ...

Sagara Gangothri College of Education ಕುವೆಂಪು ವಿವಿ ಮಾನ್ಯತೆ ಇಲ್ಲ: ಸಾಗರದ ಬಿಎಡ್.ಕಾಲೇಜಿನ ವಿದ್ಯಾರ್ಥಿವೃಂದದ ಪ್ರತಿಭಟನೆ

Sagara Gangothri College of Education ಸಾಗರದ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ...