Breaking News ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ .
ಪ್ರಧಾನಿ ಮೋದಿಗೆ ಪತ್ರ ರವಾನಿಸಿ ಈ ವಿಷಯವನ್ನ. ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಒಕ್ಕಣಿಕೆಯಲ್ಲಿ
“ಕಳೆದ 10 ದಿನಗಳು ತಮಗೆ ವೈಯಕ್ತಿಕವಾಗಿ ತೀವ್ರ ನೋವುಂಟುಮಾಡಿವೆ ಎಂದಿರುವ ಅವರು, ಯಾವುದೇ ವಿದ್ಯಾರ್ಥಿಯ ಭವಿಷ್ಯವು “ಕಾನೂನು ತೊಡಕುಗಳಲ್ಲಿ ಸಿಲುಕಿಕೊಳ್ಳುವುದನ್ನು” ತಾವು ಬಯಸುವುದಿಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ಡಿಪ್ಕೆ, “ನಾವು ಯಶಸ್ವಿಯಾಗಿದ್ದೇವೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ” ಎಂದು ಹೇಳಿದ್ದಾರೆ
ಸಿಜೆಪಿ ಮತ್ತು ಸರ್ಕಾರದ ನಡುವೆ ಮೂರನೇ ಸುತ್ತಿನ ಮಾತುಕತೆ ನಡೆಯುತ್ತಿರುವಾಗಲೇ ಈ ರಾಜೀನಾಮೆ ಪ್ರಕಟವಾಗಿದೆ; ಧರ್ಮೇಂದ್ರ ಪ್ರಧಾನ್ ಅವರ ನಿರ್ಗಮನವೇ ಈ ಚಳುವಳಿಯ ಪ್ರಮುಖ ಹಾಗೂ ರಾಜಿ ಮಾಡಿಕೊಳ್ಳಲಾಗದ ಬೇಡಿಕೆಯಾಗಿತ್ತು.
Breaking News ಕೇಂದ್ರ ಮಂತ್ರಿಮಂಡಲದಿಂದ
ಧರ್ಮೇಂದ್ರ ಪ್ರಧಾನ್
ಅವರನ್ನು ಸಂಪುಟದಿಂದ ಕಿತ್ತುಹಾಕಿ ಎಂಬುದೇ ವಿಪಕ್ಷನಾಯಕ ರಾಹುಲ್ ಗಾಂಧಿ ಆಗ್ರಹವೂ ಆಗಿತ್ತು.
ಒಂದೊಂದೇ ಕ್ರಮಗಳಿಂದ ವಿದ್ಯಾರ್ಥಿ ಚಳವಳಿಯ ಕಾವು ತಣ್ಣಗಾಗುತ್ತದೆಯೆ ಎಂದು ಕಾದು ನೋಡಬೇಕಿದೆ. ಏಕೆಂದರೆ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿರುವ ಪ್ರತಿಭಟನೆ ಹಿಂದಿನ ಶಕ್ತಿಗಳು ಬೇರೆಯೇ ಆದ ತಂತ್ರ ಹೂಡುತ್ತವೆಯೋ ನೋಡಬೇಕಿದೆ.
ಏನೇ ಆಗಲಿ ನೀಟ್ ಪರೀಕ್ಷೆಯಲ್ಲಿ ನಿರಾಶರಾಗಿ ಅಸು ನೀಗಿದ ವಿದ್ಯಾರ್ಥಿಗಳಿಗೆ ತಕ್ಕ ಪರಿಹಾರ ನೀಡಬೇಕು. ನೀಟ್ ಮುಂಬರುವ ವರ್ಷಗಳಲ್ಲಿ ಸಮಗ್ರ ಪರಿಷ್ಕರಣೆಗೊಳ್ಳಬೇಕು.
ಆಗಲೇ ಚಳವಳಿಗೆ ಸರ್ಕಾರ ಪೂರ್ಣ ಸ್ಪಂದಿಸಿದಂತಾಗುತ್ತದೆ.
