Monday, August 17, 2026
Monday, August 17, 2026

Breaking News ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ.

Date:

Breaking News ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ .
ಪ್ರಧಾನಿ ಮೋದಿಗೆ ಪತ್ರ ರವಾನಿಸಿ ಈ ವಿಷಯವನ್ನ. ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಒಕ್ಕಣಿಕೆಯಲ್ಲಿ
“ಕಳೆದ 10 ದಿನಗಳು ತಮಗೆ ವೈಯಕ್ತಿಕವಾಗಿ ತೀವ್ರ ನೋವುಂಟುಮಾಡಿವೆ ಎಂದಿರುವ ಅವರು, ಯಾವುದೇ ವಿದ್ಯಾರ್ಥಿಯ ಭವಿಷ್ಯವು “ಕಾನೂನು ತೊಡಕುಗಳಲ್ಲಿ ಸಿಲುಕಿಕೊಳ್ಳುವುದನ್ನು” ತಾವು ಬಯಸುವುದಿಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ಡಿಪ್ಕೆ, “ನಾವು ಯಶಸ್ವಿಯಾಗಿದ್ದೇವೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ” ಎಂದು ಹೇಳಿದ್ದಾರೆ

ಸಿಜೆಪಿ ಮತ್ತು ಸರ್ಕಾರದ ನಡುವೆ ಮೂರನೇ ಸುತ್ತಿನ ಮಾತುಕತೆ ನಡೆಯುತ್ತಿರುವಾಗಲೇ ಈ ರಾಜೀನಾಮೆ ಪ್ರಕಟವಾಗಿದೆ; ಧರ್ಮೇಂದ್ರ ಪ್ರಧಾನ್ ಅವರ ನಿರ್ಗಮನವೇ ಈ ಚಳುವಳಿಯ ಪ್ರಮುಖ ಹಾಗೂ ರಾಜಿ ಮಾಡಿಕೊಳ್ಳಲಾಗದ ಬೇಡಿಕೆಯಾಗಿತ್ತು.

Breaking News ಕೇಂದ್ರ ಮಂತ್ರಿಮಂಡಲದಿಂದ
ಧರ್ಮೇಂದ್ರ ಪ್ರಧಾನ್
ಅವರನ್ನು ಸಂಪುಟದಿಂದ ಕಿತ್ತುಹಾಕಿ ಎಂಬುದೇ ವಿಪಕ್ಷನಾಯಕ ರಾಹುಲ್ ಗಾಂಧಿ ಆಗ್ರಹವೂ ಆಗಿತ್ತು.
ಒಂದೊಂದೇ ಕ್ರಮಗಳಿಂದ ವಿದ್ಯಾರ್ಥಿ ಚಳವಳಿಯ ಕಾವು ತಣ್ಣಗಾಗುತ್ತದೆಯೆ ಎಂದು ಕಾದು ನೋಡಬೇಕಿದೆ. ಏಕೆಂದರೆ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿರುವ ಪ್ರತಿಭಟನೆ ಹಿಂದಿನ ಶಕ್ತಿಗಳು ಬೇರೆಯೇ ಆದ ತಂತ್ರ ಹೂಡುತ್ತವೆಯೋ ನೋಡಬೇಕಿದೆ.
ಏನೇ ಆಗಲಿ ನೀಟ್ ಪರೀಕ್ಷೆಯಲ್ಲಿ ನಿರಾಶರಾಗಿ ಅಸು ನೀಗಿದ ವಿದ್ಯಾರ್ಥಿಗಳಿಗೆ ತಕ್ಕ ಪರಿಹಾರ ನೀಡಬೇಕು. ನೀಟ್ ಮುಂಬರುವ ವರ್ಷಗಳಲ್ಲಿ ಸಮಗ್ರ ಪರಿಷ್ಕರಣೆಗೊಳ್ಳಬೇಕು.
ಆಗಲೇ ಚಳವಳಿಗೆ ಸರ್ಕಾರ ಪೂರ್ಣ ಸ್ಪಂದಿಸಿದಂತಾಗುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಮುಖ ಧ್ಯೇಯವೇ ದೇಶಪ್ರೇಮ- ಶಕುಂತಳಾ ಚಂದ್ರಶೇಖರ್

Bharat Scouts and Guides ನಮ್ಮ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಭಾರತ್...

Chamber of commerce Shivamogga ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಜಾಗತಿಕವಾಗಿ ಗಂಭೀರ ಸಮಸ್ಯೆಯಾಗಿದೆ: ಆರ್.ಮನೋಹರ್

Chamber of commerce Shivamogga ಶಿವಮೊಗ್ಗ ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್...

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...