Thursday, July 23, 2026
Thursday, July 23, 2026

ಸಮಯೋಚಿತವಾಗಿ ಅಲ್ಪ ಅವಧಿಯಲ್ಲಿ ಕಕ್ಷಿದಾರರಿಗೆ ಬೇಕಾದ ಪರಿಹಾರ ನೀಡುವಲ್ಲಿ ಮಧ್ಯಸ್ಥಿಕೆಯದ್ದು ಪ್ರಮುಖ ಪಾತ್ರ- ನ್ಯಾ. ಕೆ.ಪಿ.ಪ್ರೀತಿ

Date:

ಶಿವಮೊಗ್ಗ ಜಿಲ್ಲೆಯ 35 ಹಾಗೂ ಹಾವೇರಿ ಜಿಲ್ಲೆಯ 15 ನೂತನವಾಗಿ ಆಯ್ಕೆ ಮಾಡಲಾದ ಮಧ್ಯಸ್ಥಿಕೆದಾರರಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಹಾಗೂ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಬೆಂಗಳೂರು ರವರ ಸಹಯೋಗದಲ್ಲಿ ಆಯೋಜಿಸಲಾದ 40 ಗಂಟೆಗಳ ಮಧ್ಯಸ್ಥಿಕೆ ತರಬೇತಿಯ ಕಾರ್ಯಗಾರವನ್ನು ಶಿವಮೊಗ್ಗದ ಡಿ.ಎ.ಆರ್. ಸಭಾಭವನದಲ್ಲಿ ಉದ್ಘಾಟಿಸಲಾಯಿತು. ತರಬೇತಿಯನ್ನು ಉದ್ಘಾಟಿಸಿದ ಶಿವಮೊಗ್ಗ ಜಿಲ್ಲೆಯ ಪ್ರಭಾರ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಎರಡನೆಯ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಕೆ. ಪಿ. ರವರು ಮಾತನಾಡಿ ಸಮಯೋಚಿತವಾಗಿ ಅಲ್ಪ ಅವಧಿಯಲ್ಲಿ ಪಕ್ಷಗಾರರಿಗೆ ಬೇಕಾದ ಪರಿಹಾರವನ್ನು ನೀಡುವಲ್ಲಿ ಮಧ್ಯಸ್ಥಿಕೆಯು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ ಹಾಗೂ ಈ ನಿಟ್ಟಿನಲ್ಲಿ ಸಹಕರಿಸುತ್ತಿರುವ ಎಲ್ಲಾ ನ್ಯಾಯವಾದಿಗಳು ಸಮಾಜದಲ್ಲಿ ಶಾಂತಿ ನೆಲೆಸಲು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಹರ್ಷದಾಯಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಮಧ್ಯಸ್ಥಿಕೆಯು ಪೂರಕವಾದ ವಾತಾವರಣವನ್ನು ಉಭಯ ಪಕ್ಷಗಾರರಲ್ಲಿ ಉಂಟು ಮಾಡಿ ಪಕ್ಷಗಾರರು ತಮಗೆ ಬೇಕಾದ ನ್ಯಾಯವನ್ನು ತ್ವರಿತಗತಿಯಲ್ಲಿ ಪಡೆದುಕೊಳ್ಳುವಂತೆ ಹಾಗೂ ಅನುಕೂಲಕರ ವಾತಾವರಣದಲ್ಲಿ ತಮ್ಮ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆಯು ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಮಧ್ಯಸ್ಥಿಕೆದಾರರಿಗೆ ನೀಡಲಾಗುತ್ತಿರುವ 40 ಗಂಟೆಯ ತರಬೇತಿಯು ತುಂಬಾ ಸಮಯೋಚಿತವಾಗಿದ್ದು ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆದಾರರ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯವಾದ ಪಾತ್ರವನ್ನು ನಿರ್ವಹಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಶ್ರೀಮತಿ ಶೈನಿ ಕೆ.ಎಂ. ರವರು ಮಾತನಾಡಿ ಮಧ್ಯಸ್ಥಿಕೆಯಲ್ಲಿ ನಡೆಯುವ ಮಾತಿನ ಬಗ್ಗೆ ಗೌಪ್ಯತೆ ಬಹಳ ಮುಖ್ಯವಾಗಿದ್ದು ಆ ಪ್ರಕ್ರಿಯೆಯಲ್ಲಿ ಒದಗಿ ಬರುವ ಸಂದರ್ಭಗಳ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ತರಹದ ಸಾಕ್ಷ್ಯವನ್ನು ನೀಡುವಂತಿಲ್ಲ ಎನ್ನುವ ನಿರ್ಬಂಧ ಇರುವ ಕಾರಣ ಉಭಯ ಪಕ್ಷಗಾರರು ಮನಪೂರ್ವಕವಾಗಿ ತಮ್ಮ ವಿವಾದವನ್ನು ಕೇಂದ್ರೀಕರಿಸಿ ಸೂಕ್ತ ಪರಿಹಾರವನ್ನು ಮುಕ್ತ ಮಾತುಕತೆಯ ಮೂಲಕ ಪಡೆದುಕೊಳ್ಳುವ ವೇದಿಕೆಯಾಗಿದೆ ಎಂದು ತಿಳಿಸಿದರು. ಕಳೆದ ವರ್ಷ ಜುಲೈ ತಿಂಗಳಿನಿಂದ ಈ ವರ್ಷದ ಜುಲೈವರೆಗೂ ಶಿವಮೊಗ್ಗದ ಕೌಟುಂಬಿಕ ನ್ಯಾಯಾಲಯದಿಂದ 400ಕ್ಕೂ ಹೆಚ್ಚು ಪ್ರಕರಣಗಳು ಮಧ್ಯಸ್ಥಿಕೆಗೆ ವಹಿಸಿದ್ದು ಅವುಗಳಲ್ಲಿ 180 ದಂಪತಿಗಳು ತಮ್ಮ ವಿವಾದವನ್ನು ಪರಿಹರಿಸಿಕೊಂಡು ಸೂಕ್ತ ನ್ಯಾಯವನ್ನು ಅಲ್ಪ ಅವಧಿಯಲ್ಲಿ ಪಡೆದುಕೊಂಡು ಒಂದಾಗಿ ಮಧ್ಯಸ್ಥಿಕೆಯು ಯಶಸ್ವಿಯಾಗುವ ಮೂಲಕ ಪಕ್ಷಗಾರರಿಗೆ ಸಮಂಜಸ ಮತ್ತು ನ್ಯಾಯಯುತ ಎನಿಸಿರುವ ಪರಿಹಾರವನ್ನು ವಿತರಿಸುವಲ್ಲಿ ಮುಖ್ಯವಾದ ಪಾತ್ರವು ನಿರ್ವಹಿಸಿದೆ ಎಂದು ಉಲ್ಲೇಖಿಸಿ ಮಧ್ಯಸ್ಥಿಕೆ ಪ್ರಕ್ರಿಯೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಆಡಿದ ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂತೋಷ್ ಎಂ. ಎಸ್. ರವರು ಮಧ್ಯಸ್ಥಿಕೆಯಿಂದ ಪಕ್ಷಗಾರರು ತ್ವರಿತಗತಿಯಲ್ಲಿ ತಮಗೆ ಬೇಕಾದ ನ್ಯಾಯವನ್ನು ತಾವೇ ಆಯ್ದುಕೊಳ್ಳುವ ಅದ್ಭುತ ಪ್ರಕ್ರಿಯೆಯಾಗಿದೆ ಮತ್ತು ಪಕ್ಷಗಾರರು ತಮ್ಮ ವಿವಾದವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಹಾಗೂ ನ್ಯಾಯಾಲಯದಿಂದ ಬರಬಹುದಾದ ತೀರ್ಪಿನ ಬಗ್ಗೆ ಅವಲೋಕಿಸಿ ತಮಗೆ ಸೂಕ್ತವೆನಿಸುವ ಪರಿಹಾರವನ್ನು ಆಯ್ಕೆ ಮಾಡಿಕೊಳ್ಳುವ ಅದ್ಭುತ ವಿಧಾನವಾಗಿದೆ ಎಂದು ತಿಳಿಸುತ್ತಾ ಇಂತಹ ಒಂದು ಅದ್ಭುತ ಪ್ರಕ್ರಿಯೆಗೆ ಹಿರಿಯ ಹಾಗೂ ನುರಿತ ವಕೀಲರು ಸ್ವಯಂ ಪ್ರೇರಿತವಾಗಿ ಶಿವಮೊಗ್ಗ ಜಿಲ್ಲೆಯಿಂದ ಹಾಗೂ ಹಾವೇರಿ ಜಿಲ್ಲೆಯಿಂದ ತಮ್ಮ ಹೆಸರುಗಳನ್ನು ನೋಂದಾಯಿಸಿ ಐದು ದಿನಗಳ ಕಾಲ ನಡೆಯುತ್ತಿರುವ ತರಬೇತಿ ಕಾರ್ಯಗಾರಕ್ಕೆ ಅತ್ಯಂತ ಉತ್ಸುಕತೆಯಿಂದ ಪಾಲ್ಗೊಂಡಿರುವುದು ಹರ್ಷದಾಯಕ ಸಂಗತಿ ಆಗಿದೆ ಮತ್ತು ಇಂತಹ ಉತ್ಸಾಹ ಹಾಗೂ ಕುತೂಹಲ ಎಲ್ಲಾ ಮಧ್ಯಸ್ಥಿಕೆದಾರರು ನಿರ್ವಹಿಸುತ್ತಿರುವ ತಮ್ಮ ಕರ್ತವ್ಯದಲ್ಲಿಯೂ ಕೂಡ ನಿರಂತರವಾಗಿ ವ್ಯಕ್ತಪಡಿಸಿ ಪ್ರಕರಣದ ಪಕ್ಷಗಾರರಿಬ್ಬರು ಗೆಲ್ಲುವ ಏಕೈಕ ಸಾಧನವಾಗಿರುವ ಮಧ್ಯಸ್ಥಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮತ್ತು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾಮ್ಯಮತೆಯಿಂದ ಕಾರ್ಯನಿರ್ವಹಿಸಲು ಈ ತರಬೇತಿ ಕಾರ್ಯಗಾರವು ಅನುಕೂಲವಾಗುತ್ತದೆ ಎಂದು ತಿಳಿಸುತ್ತಾ ಬೆಂಗಳೂರಿನ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದಿಂದ ಆಗಮಿಸಿರುವ ಮಧ್ಯಸ್ಥಿಕೆ ತರಬೇತಿದಾರರಾದ ಶ್ರೀಕುಮಾರ್ ಹಾಗೂ ಶ್ರೀ ವಿಜಯಕುಮಾರ್ ರವರನ್ನು ಹಾಗೂ ಎಲ್ಲಾ ಗಣ್ಯರನ್ನು ಮತ್ತು ತರಬೇತಿಗೆ ಆಗಮಿಸಿದ ತರಬೇತುದಾರರನ್ನು ಸ್ವಾಗತಿಸಿದರು.

ಇಂದು ಉದ್ಘಾಟನೆಗೊಂಡ ತರಬೇತಿ ಕಾರ್ಯಗಾರವು ಇಂದಿನಿಂದ ಐದು ದಿನಗಳ ಕಾಲ ಅಂದರೆ ದಿನಾಂಕ 26.07.2026ರ ಸಂಜೆವರೆಗೂ ಶಿವಮೊಗ್ಗದ ಡಿ.ಎ.ಆರ್. ಪೊಲೀಸ್ ಸಭಾಭವನದಲ್ಲಿ ನಿರಂತರವಾಗಿ ನಡೆಯುತ್ತಿದ್ದು ನಾಮ ನಿರ್ದೇಶಿತರಿಗೆ ತರಬೇತಿಯನ್ನು ನೀಡಲಾಗುತ್ತಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ 200 ಕ್ಕೂ ಹೆಚ್ಚು ತರಬೇತಿಯನ್ನು ಪಡೆಯಲು ಇಚ್ಛೆ ವ್ಯಕ್ತಪಡಿಸಿರುವ ವಕೀಲರು ಮುಂದಿನ ದಿನಗಳಲ್ಲಿ ತರಬೇತಿಯನ್ನು ಪಡೆಯಲಿದ್ದಾರೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಮಾಹಿತಿ ನೀಡುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...

Dr. G. Parameshwara ಎಸ್ ಐ ಆರ್ ಪ್ರಕ್ರಿಯೆ: ಜನರಿಗೆ ತೊಂದರೆಯಾಗದಂತೆ ಕ್ರಮ- ಡಾ.ಜಿ.ಪರಮೇಶ್ವರ

Dr. G. Parameshwara ಕೇಂದ್ರ ಸರ್ಕಾರದ ಎಸ್‌ಐಆರ್‌ ಪ್ರಕ್ರಿಯೆಗೆ ಅಗತ್ಯ...