Thursday, September 10, 2026
Thursday, September 10, 2026

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಶ್ರೀಮತಿ ಚನ್ನಮ್ಮ ನಿಧನ

Date:

ಮಾಜಿ ಪ್ರಧಾನಿ ,ರಾಜ್ಯದ ಹಿರಿಯ ರಾಜಕಾರಣಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚನ್ನಮ್ಮನವರು ನಿಧನರಾಗಿದ್ದಾರೆ.
ವಯೋಸಹಜ ಉಸಿರಾಟದ ತೊಂದರೆಯಿಂದಾಗಿ ಅವರನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು . ವೈದ್ಯಕೀಯ ನೆರವಿಗೆ ಪ್ರತಿಸ್ಪಂದಿಸದೆ ಶ್ರೀಮತಿ ಚನ್ನಮ್ಮನವರು ಅಸು ನೀಗಿದರು.
ಅವರಿಗೆ 89 ವರ್ಷ ವಯಸ್ಸಾಗಿತ್ತು.

ಕರ್ನಾಟಕದ ಪ್ರಥಮ ರಾಜಕಾರಣಿ ಹಿರಿಯ ದೇವೇಗೌಡರು ಯಾವುದೇ ಅಧಿಕಾರ,
ಪ್ರತಿಷ್ಠಿತ ಸ್ಥಾಮಾನಗಳನ್ನ ಹೊಂದಿದ್ದರೂ ಶ್ರೀಮತಿ ಚನ್ನಮ್ಮನವರು ತಮ್ಮ ಸರಳತನದಿಂದಲೇ ಬಾಳುವೆ ಮಾಡಿದವರಾಗಿದ್ದರು.
ಉನ್ನತ ಹುದ್ದೆಗೆ ಬರುವ ಮುಂಚಿನದಿನಗಳಲ್ಲಿ
ಗುತ್ತಿಗೆದಾರರರಾಗಿದ್ದ ದೇವೇಗೌಡರಿಗೆ ನೈತಿಕ ಬೆಂಬಲವಾಗಿ ನಿಂತಿದ್ದರು. ಆರು ಮಕ್ಕಳತಾಯಿ, ತುಂಬು ಕುಟುಂಬದಲ್ಲಿ ಮಕ್ಕಳೆಲ್ಲರಿಗೂ ಸಮನಾದ ಮಮತೆ ತೋರಿಸಿ ಬೆಳೆಸಿದರು.
ಸಾಮಾಜಿಕವಾಗಿ ಎಲ್ಲೂ ಪ್ರತಿಷ್ಠೆ ಪ್ರದರ್ಶನಗೈಯದೇ ಎಲೆಮರೆಯಕಾಯಂತಿದ್ದರು. ರಾಜ್ಯದ ಹಲವಾರು ರಾಜಕಾರಣಿಗಳಿಗೆ ಅವರು ಉಣ್ಣಲಿಕ್ಕಿದ “ತಾಯಿ” ಯೂ ಆಗಿದ್ದರು.ಮನೆಗೆ ಬಂದವರಿಗೆ ಆಶನವಿಕ್ಕುವ ಅವರ ಸ್ವಭಾವ ಮಾದರಿಯಾಗಿತ್ತು.

ಚನ್ನಮ್ಮನವರ ನಿಧನದ ಸುದ್ದಿ ತಿಳಿದ ಕೂಡಲೇ ದೇವೇಗೌಡರ ಮತ್ತು ಚನ್ನಮ್ಮನವರ ಅಭಿಮಾನಿಗಳು ಅವರ ಅಂತಿಮ ದರ್ಶನಕ್ಕೆ ಆಗಮಿಸಿ ಶ್ರದ್ಧಾಂಜಲಿ‌ ಅರ್ಪಿಸಿದರು.
ಕೈಲಾಸವಾಸಿಗಳಾದ ಚನ್ನಮ್ಮನವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಜುಲೈ20 ರಂದು ನಡೆಯಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...