Tuesday, August 25, 2026
Tuesday, August 25, 2026

Rotary Shivamogga ರೋಟರಿ, ಕೇವಲ ಶ್ರೀಮಂತರ ಸಂಸ್ಥೆಯಲ್ಲ.ಈಗ ಆ ಅಪವಾದ ಹೋಗಿದೆ. ಇದರ ಸದಸ್ಯರು ಹೃದಯ ಶ್ರೀಮಂತಿಕೆಯವರು: ವಸಂತ ಹೋಬಳಿದಾರ್

Date:

Rotary Shivamogga ರೋಟರಿ ಶಿವಮೊಗ್ಗ ಪೂರ್ವದ 2026 ಮತ್ತು 27 ನೇ ಸಾಲಿನ ನೂತನ ಪದಾಧಿಕಾರಿಗಳ ಸಮಾರಂಭ ಶುಕ್ರವಾರ ಸಾಗರ ರಸ್ತೆಯಲ್ಲಿ ನ ಶಿವಮೊಗ್ಗ ಅರೆಕಾನಟ್ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್ ನಡೆಯಿತು.
ಅಧ್ಯಕ್ಷರಾಗಿ ಡಿ ಕೆ ಶೇಷಗಿರಿ,
, ಕಾರ್ಯದರ್ಶಿಯಾಗಿ ಮನೋಹರ ಆರ್,ಉಪಾಧ್ಯಕ್ಷ ರಾಗಿ ವಿಜಯ ಕುಮಾರ್ ಜಿ ಅಧಿಕಾರ ಸ್ವೀಕರಿಸಿದರು.

ಇವರಿಗೆ ಚುನಾಯಿತ ಜಿಲ್ಲಾ ಗವರ್ನರ್, ವಸಂತ್ ಹೋಬಳಿ ದಾರ್ ಪದಗ್ರಹಣ ಅಧಿಕಾರಿಗಳಾಗಿ ಪ್ರಮಾಣವಚನ ಬೋಧಿಸಿದರು.

ಹಿಂದಿನ ಅಧ್ಯಕ್ಷರಾದ ಡಿ ಕಿಶೋರ್ ಕುಮಾರ್ ಕಾರ್ಯದರ್ಶಿಯಾದ ಧನಂಜಯ ಬಿ ಆರ್ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಸಂತ್ ಹೋಬಳಿದಾರ್
, ರೋಟರಿ ಎಂದರೆ ಬೆಳಕು. ಇದು ಕೇವಲ ಶ್ರೀಮಂತರ ಸಂಸ್ಥೆಯಲ್ಲ, ಆ ಅಪವಾದ ಈಗ ಹೋಗಿದೆ. ಇಲ್ಲಿರುವ ಸದಸ್ಯರು ಹೃದಯ ಶ್ರೀಮಂತಿಕೆ ಹೊಂದಿದ್ದಾರೆ.
ಒಳ್ಳೆಯ ಕೆಲಸ ಮಾಡಿ ಸೇವೆಯನ್ನು ಅಪ್ಪಿ ಕೊಳ್ಳಿ.ಯುವಕರಿಗೆ ಮಾರ್ಗದರ್ಶನ ಮಾಡಿ ನಾಯಕತ್ವ ಕಲಿಸಿ
ಮತ್ತಷ್ಟು ಸಮಾಜ ಸೇವೆ ಮಾಡಿ ಎಂದು ಕರೆ ನೀಡಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅದ್ಯಕ್ಷ ಡಿ ಕೆ ಶೇಷಗಿರಿ , ರೋಟರಿ ಸೇವೆಗೆ ಹೆಸರು ಮಾಡಿದೆ. ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡುವ ಹಂಬಲ ಇದೆ. ಸ್ವಚ್ಛತೆ, ಪರಿಸರ,ಆರೋಗ್ಯ, ಶಿಕ್ಷಣ ಕ್ಕೆ ಹೆಚ್ಚು ಒತ್ತು ಕೊಡುವೆ. ವ ಶಾಶ್ವತ ಕಾರ್ಯಕ್ರಮಗಳನ್ನು ಕೂಡ ಮಾಡುವ ಯೋಜನೆಗಳಿದ್ದು, ನನ್ನ ಹೊಸ ತಂಡದೊಂದಿಗೆ ಪ್ರಾಮಾಣಿಕವಾಗಿ, ಸಮಾಜಮುಖಿಯಾಗಿ ಸೇವೆ ಮಾಡುವೆ,ಇದು ಸೇವೆಯ ಹಬ್ಬವಾಗಲಿದೆ ಎಂದರು.
ಲೆಫ್ಟಿನೆಂಟ್‌ ಮಹೇಶ್ ಆಲೇ ಮನೆ ಮಾತಾನಾಡಿ
ಸೇವೆ ಶಾಶ್ವತವಾಗಿ ರ ಬೇಕು.
ಯೋಜನೆಗಳನ್ನು ರೂಪಿಸಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಹೆಚ್ಚು ಸದ್ಯಸರಾನ್ನಾಗಿ ಮಾಡಿ…
ಮಹಿಳೆಯರಿಗೆ ಆದ್ಯತೆ ಕೊಡಿ ಎಂದರು.
ಅಸಿಸ್ಟೆಂಟ್ ಗವರ್ನರ್ ನಾಗರಾಜ್ ಎಸ್ ಮಾತಾನಾಡಿ
ರೋಟರಿ ಬೆಳೆಯಲು ಎಲ್ಲರ ಸಹಕಾರ ಬೇಕು.ದೇಣಿಗೆ ಹೆಚ್ಚಾಗ ಬೇಕು,ನಾವು ಮಾಡುವ ಕೆಲಸಗಳು ಶಾಶ್ವತ ಪರಿಹಾರ ನೀಡುವಂತಾಗ ಬೇಕು,ಸೇವೆಯಿಂದ ತೃಪ್ತಿ ಸಾದ್ಯ..
ಜಿಲ್ಲಾ ಶಾಶ್ವತ ಕಾರ್ಯಕ್ರಮ ಕ್ಕೂ ಆದ್ಯತೆ ಕೊಡಿ ಎಂದರು.

ಕಾರ್ಯಕ್ರಮ ದಲ್ಲಿ ನಿಕಟ ಪೂರ್ವ ಅದ್ಯಕ್ಷ ಕಿಶೋರ್ ಕುಮಾರ್, ನೂತನ ಕಾರ್ಯದರ್ಶಿ ಮನೋಹರ್, ನಿಕಟ ಪೂರ್ವ, ಕಾರ್ಯದರ್ಶಿ,ಧನಂಜಯ ಬಿ ಆರ್ ,ಉಪಾಧ್ಯಕ್ಷ ವಿಜಯಕುಮಾರ್ ಜಿ. ಮುಂತಾದವರು
ಮಾತಾನಾಡಿದರು.

ಇದೇ ಸಂದರ್ಭದಲ್ಲಿ
ಹೊಸ ಸದಸ್ಯರಿಗೆ ಗೌರವಿಸಲಾಯಿತು.
ಮತ್ತು ರೋಟರಿಯಲ್ಲಿ ಸೇವೆ ಮಾಡಿವದರನ್ನು,ದೇಣಿಗೆ ನೀಡಿದವರನ್ನು ಅಭಿನಂದಿಸಲಾಯಿತು.
ಹಾಗು ರಘರಾಜ್ ಅವರು ಭಾಸ್ಕರ ಬುಲೆಟಿನ್ ಬಿಡುಗಡೆ ಮಾಡಿದರು.
ಕಾರ್ಯಕ್ರಮ ದಲ್ಲಿ ಶಶಿಕಾಂತ್ ನಾಡಿಗ್,ಆಕ್ರುತ್ ಕೆ.
ಮಂಜುನಾಥ್ ಕದಂಬ್ ಸುನೀಲ್ ಕುಮಾರ್,ಆಕಾಶ್ ,ಕ್ಲಬ್ ಎಡಿಟರ್ ರಘುನಾಥ್ ಹೆಚ್ ಕೆ ಸೇರಿದಂತೆ ಸುಮಾರು ಮುವತ್ತು ಕ್ಕೂ ಹೆಚ್ಚು ಪದಾಧಿಕಾರಿಗಳು ಹಾಜರಿದ್ದರು.
ಡಾ.ಗುಡದಪ್ಪ ಕಸಬಿ,ಸಾದ್ವಿ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಬೈಂದೂರು ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ₹86 ಕೋಟಿ ಪ್ರಸ್ತಾವನೆ: ಸಂಸದ ಬಿ.ವೈ.ರಾಘವೇಂದ್ರ ಭೇಟಿ

B.Y. Raghavendra ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು...

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...