Friday, July 10, 2026
Friday, July 10, 2026

Keladi Shivappanayaka University of Agricultural ಡಾ.ಧನಂಜಯ, ಇರುವಕ್ಕಿ ಕೃಷಿ ವಿವಿಯ ನೂತನ ಕುಲಪತಿ. ರಾಜ್ಯಪಾಲರ ನೇಮಕಾತಿ ಆದೇಶ.

Date:

Keladi Shivappanayaka University of Agricultural ಇಲ್ಲಿನ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಹಿರಿಯ ವಿಜ್ಞಾನಿ ಡಾ. ಎಂ. ವಿ. ಧನಂಜಯ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ.ಡಾ. ಧನಂಜಯ ಅವರ ಪ್ರಮುಖ ಸಾಧನೆಗಳು
ಡಾ. ಧನಂಜಯ ಅವರು ತೋಟಗಾರಿಕಾ ಕ್ಷೇತ್ರದ ವಿವಿಧ 18 ನೂತನ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ದೇಶದ ಮೊದಲ ಕಾಂಡ ಕೊಳೆ ರೋಗ ನಿರೋಧಕ ಸೋರೆಕಾಯಿ ತಳಿ ಅರ್ಕಾ ಶ್ರೇಯಸ್, ಅತಿ ಹೆಚ್ಚು ಇಳುವರಿ ನೀಡುವ ಗುಲಾಬಿ ತಳಿ ಅರ್ಕಾ ಸವಿ ಹಾಗೂ ಗುಲಾಬಿ ಚಹಾದ ತಳಿ ಅರ್ಕಾ ಪರಿಮಳ ಪ್ರಮುಖವಾಗಿವೆ. ಇವರ ನೇತೃತ್ವದಲ್ಲಿ ₹29 ಕೋಟಿ ಮೌಲ್ಯದ ಸಂಶೋಧನಾ ಯೋಜನೆಗಳು ಅನುಷ್ಠಾನಗೊಂಡಿದ್ದು, 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.ಭಾರತ ಸರ್ಕಾರದ ಬೆಸ್ಟ್‌-Keladi Shivappanayaka University of Agricultural ಹಾರ್ಟ್‌ ತಂತ್ರಜ್ಞಾನ ವ್ಯವಹಾರ ಇನ್ಯುಬೇಟರ್ ಸಿಇಒ ಆಗಿ ಡಾ. ಧನಂಜಯ ಅವರು ಕಾರ್ಯನಿರ್ವಹಿಸಿದ್ದಾರೆ. 100ಕ್ಕೂ ಹೆಚ್ಚು ಕೃಷಿ ನವೋದ್ಯಮಗಳಿಗೆ ಬೆಂಬಲ ನೀಡಿದ್ದಾರೆ. ಅಲ್ಲದೆ, ತರಕಾರಿ ಬೀಜ ಘಟಕದ ನೋಡಲ್ ಅಧಿಕಾರಿಯಾಗಿ ಆನ್‌ಲೈನ್ ಬೀಜ ಪೋರ್ಟಲ್ ಮತ್ತು ಬೀಜ ವಿತರಣಾ ಯಂತ್ರಗಳ ಮೂಲಕ ಸಾರ್ವಜನಿಕ ಬೀಜ ವಿತರಣಾ ವ್ಯವಸ್ಥೆಯನ್ನು ಆಧುನೀಕರಿಸಿದ ಹೆಗ್ಗಳಿಕೆ ಹೊಂದಿದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Drinking Water Supplier Shivamogga ಶಿವಮೊಗ್ಗ ಕೆ.ಆರ್. ಜಲಶುದ್ಧೀಕರಣ ಘಟಕ ದುರಸ್ತಿ.: ಕುಡಿಯುವ ನೀರು ಸರಬರಾಜಿನಲ್ಲಿ ಅನಿರ್ದಿಷ್ಟ ಅವಧಿ ವ್ಯತ್ಯಯ.

Drinking Water Supplier Shivamogga ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ...

Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.

Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ...