Keladi Shivappanayaka University of Agricultural ಇಲ್ಲಿನ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಹಿರಿಯ ವಿಜ್ಞಾನಿ ಡಾ. ಎಂ. ವಿ. ಧನಂಜಯ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ.ಡಾ. ಧನಂಜಯ ಅವರ ಪ್ರಮುಖ ಸಾಧನೆಗಳು
ಡಾ. ಧನಂಜಯ ಅವರು ತೋಟಗಾರಿಕಾ ಕ್ಷೇತ್ರದ ವಿವಿಧ 18 ನೂತನ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ದೇಶದ ಮೊದಲ ಕಾಂಡ ಕೊಳೆ ರೋಗ ನಿರೋಧಕ ಸೋರೆಕಾಯಿ ತಳಿ ಅರ್ಕಾ ಶ್ರೇಯಸ್, ಅತಿ ಹೆಚ್ಚು ಇಳುವರಿ ನೀಡುವ ಗುಲಾಬಿ ತಳಿ ಅರ್ಕಾ ಸವಿ ಹಾಗೂ ಗುಲಾಬಿ ಚಹಾದ ತಳಿ ಅರ್ಕಾ ಪರಿಮಳ ಪ್ರಮುಖವಾಗಿವೆ. ಇವರ ನೇತೃತ್ವದಲ್ಲಿ ₹29 ಕೋಟಿ ಮೌಲ್ಯದ ಸಂಶೋಧನಾ ಯೋಜನೆಗಳು ಅನುಷ್ಠಾನಗೊಂಡಿದ್ದು, 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.ಭಾರತ ಸರ್ಕಾರದ ಬೆಸ್ಟ್-Keladi Shivappanayaka University of Agricultural ಹಾರ್ಟ್ ತಂತ್ರಜ್ಞಾನ ವ್ಯವಹಾರ ಇನ್ಯುಬೇಟರ್ ಸಿಇಒ ಆಗಿ ಡಾ. ಧನಂಜಯ ಅವರು ಕಾರ್ಯನಿರ್ವಹಿಸಿದ್ದಾರೆ. 100ಕ್ಕೂ ಹೆಚ್ಚು ಕೃಷಿ ನವೋದ್ಯಮಗಳಿಗೆ ಬೆಂಬಲ ನೀಡಿದ್ದಾರೆ. ಅಲ್ಲದೆ, ತರಕಾರಿ ಬೀಜ ಘಟಕದ ನೋಡಲ್ ಅಧಿಕಾರಿಯಾಗಿ ಆನ್ಲೈನ್ ಬೀಜ ಪೋರ್ಟಲ್ ಮತ್ತು ಬೀಜ ವಿತರಣಾ ಯಂತ್ರಗಳ ಮೂಲಕ ಸಾರ್ವಜನಿಕ ಬೀಜ ವಿತರಣಾ ವ್ಯವಸ್ಥೆಯನ್ನು ಆಧುನೀಕರಿಸಿದ ಹೆಗ್ಗಳಿಕೆ ಹೊಂದಿದಾರೆ.
Keladi Shivappanayaka University of Agricultural ಡಾ.ಧನಂಜಯ, ಇರುವಕ್ಕಿ ಕೃಷಿ ವಿವಿಯ ನೂತನ ಕುಲಪತಿ. ರಾಜ್ಯಪಾಲರ ನೇಮಕಾತಿ ಆದೇಶ.
Date:
