ದಿನಾಂಕ : 27/06/2026 ರಂದು ನಮ್ಮ ಡಾ. ಜಿ ಎ ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ವಸ್ಥ ಮನ – ಸಮೃದ್ಧ ಜೀವನ ಎಂಬ ವಿಷಯದ ಕುರಿತು ಸಾಗರದ ಸುಮುಖ ಸ್ಪೆಷಾಲಿಟಿ ಅಸ್ಪತ್ರೆಯ ಸಂದರ್ಶಕ ಮನೋವೈದ್ಯರಾದ ಡಾ. ನಿರುಪಮಾ ನಾಗರಾಜ್ ರವರು ಉಪನ್ಯಾಸ ನೀಡಿದರು. ಭಾವನೆ, ಕೋಪ, ಒತ್ತಡಗಳು ರೋಗಗಳಲ್ಲ, ಅದರೆ ರೋಗದ ಮೂಲಗಳಾಗುತ್ತವೆ. ಶಿಕ್ಷಕರು, ವಿದ್ಯಾರ್ಥಿಗಳು ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ಅವುಗಳನ್ನು ನಕಾರಾತ್ಮಕವಾಗಿ ಸ್ವೀಕರಿಸುವುದರ ಬದಲು ಪರಿಹಾರಾತ್ಮಕವಾಗಿ ಅಲೊಚನೆ ಮಾಡುವುದು ನಮ್ಮ ಆರೋಗ್ಯದ ರಕ್ಷಣೆಗೆ ಸಹಾಯ ಮಾಡುತ್ತದೆ. ಮೊಬೈಲ್ /ತಂತ್ರಜ್ಞಾನ ಬಳಕೆಯಿಂದ
ಮಕ್ಕಳ ಏಕಾಗ್ರತೆಯು ತುಂಬಾ ಕಡಿಮೆಯಾಗುತ್ತಿದೆ. ಸಮಸ್ಯೆಗಳಿಗೆ ಪ್ರೋತ್ಸಾಹ, ಮಾರ್ಗದರ್ಶನ, ಕೌಟುಂಬಿಕ ಸಂಗತಿಗಳ ಅದ್ಯಯನಗಳು ತುಂಬಾ ಅಗತ್ಯ. ಇವುಗಳನ್ನು ಜೋಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಮತ್ತು ಪ್ರಗತಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯವರು, ಸಹಶಿಕ್ಷಕರು, ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಭಾವನೆ, ಕೋಪ, ಒತ್ತಡಗಳು ರೋಗವಲ್ಲ ಆದರೆ ಅವು ರೋಗದ ಮೂಲಗಳು- ಡಾ.ನಿರುಪಮಾ ನಾಗರಾಜ್
Date:
