Wednesday, June 24, 2026
Wednesday, June 24, 2026

Keelambi ತೋಟ ಹೊಲಗದ್ದೆಗಳ ಕೆಲಸಕ್ಕೆ ” RANCHER SUV 5.1 ” ಯಂತ್ರ ಲೋಕಾರ್ಪಣೆ : ಕೀಳಂಬಿ ಅಗ್ರಿಟೆಕ್ ಸಾಧನೆ

Date:

Keelambi ಕೃಷಿಕರು‌ ಈಗ ಆಧುನಿಕವಾಗಿ ಯೋಚಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೃಷಿಗೆ ಫೂರಕ ಯಂತ್ರೋಪಕರಣಗಳ ಅವಶ್ಯಕತೆಯಿದೆ. ಶಿವಮೊಗ್ಗದ
ಪ್ರತಿಷ್ಠಿತ ಕಂಪನಿ ಕೀಳಂಬಿ ಅಗ್ರಿಟೆಕ್ ಇಂಥದೊಂದು ಯಂತ್ರವನ್ನ
ಆವಿಷ್ಕರಿಸಿದೆ.

ಜಮೀನು,ಗದ್ದೆ ತೋಟಗಳಲ್ಲಿ ಮಣ್ಣು,ಗೊಬ್ಬರ, ಬೀಜ, ಕೃಷಿಯ ಸಣ್ಣಪುಟ್ಟ ಪರಿಕರಗಳ ಒಳಾಂಗಣ ಸಾಗಾಣೆ ಈಗ ಅಗತ್ಯವಾಗಿದೆ. ಈ ಶ್ರಮದಾಯಕ ಕೆಲಸಗಳನ್ನ ನಿರ್ವಹಿಸಲು ಕೀಳಂಬಿ ಅಗ್ರಿ ಟೆಕ್
ಒಂದು”ರೋಬೋ ಯಂತ್ರ”ವನ್ನ
ಮಾರುಕಟ್ಟೆಗೆ ಪರಿಚಯಿಸಿದೆ.

ವಿಶೇಷವೆಂದರೆ ಪೆಟ್ರೋಲ್ ಡಿಸೆಲ್ ತುಂಬಿಸಲು ಬಂಕ್ ಗಳಿಗೆ ಅಲೆದಾಡಬೇಕಿಲ್ಲ.. ಕೇವಲ ವಿದ್ಯುತ್ ನಿಂದ ಚಾರ್ಜ್ ಮಾಡುವ ಯಂತ್ರ.

ತಾ. 22 -6-26 ರ ಸೋಮವಾರ ಶಿವಮೊಗ್ಗ ಜಿಲ್ಲೆಯ ಸೂಗೂರಿನಲ್ಲಿ
ಯಂತ್ರದ ಅನಾವರಣ ಮತ್ತು ಪ್ರಾತ್ಯಕ್ಷಿಕೆಯ ನೇರ ಪ್ರಸಾರ
ನಡೆಯಿತು.

Keelambi ರೋಬೋಯಂತ್ರದ ಬಗ್ಗೆ ಕೀಳಂಬಿ ಅಗ್ರಿ ಟೆಕ್ ನ ವ್ಯವಸ್ಥಾಪಕ‌ನಿರ್ದೇಶಕ ರಾಜೇಶ್ ಕೀಳಂಬಿ ಅವರು ಮಾತನಾಡಿದರು.
“ಕೃಷಿಕರ ಅಗತ್ಯ ಮತ್ತು
ಮಾರುಕಟ್ಟೆಯ ಬೇಡಿಕೆ ಆಧರಿಸಿ
ಈ ಯಂತ್ರವನ್ನು
ಅಭಿವೃದ್ಧಿ ಪಡಿಸಲಾಗಿದೆ. ಕೃಷಿಕ್ಷೇತ್ರದ
ಕಾರ್ಯವನ್ನು ಮತ್ತಷ್ಟು ಸುಲಭ ಹಾಗೂ ಪರಿಣಾಮಕಾರಿಯಾಗಿಸುವ
ಸಲುವಾಗಿ ರೈತಸ್ನೇಹಿ‌ ಉತ್ಪನ್ನವನ್ನ ಅಭಿವೃದ್ಧಿಪಡಿಸಿದ್ದೇವೆ ‘ ಎಂದು ಹೇಳಿದರು.

ನಂತರ ಪ್ರಾತ್ಯಕ್ಷಿಕೆ-ಪ್ರದರ್ಶನ ನಡೆಸಲಾಯಿತು. ಈ ಯಂತ್ರದ ಬಹು-ವಿಶೇಷತೆಗಳಾದ ಭಾರಹೊರುವ ಸಾಮರ್ಥ್ಯ, ಬೆಳೆಗಳಿಗೆ ಔಷಧ ಸಿಂಪರಣೆ ಮತ್ತು ಕಳೆ ಕತ್ತರಿಸುವ ಯಂತ್ರಗಳನ್ನ ಜೋಡಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು.

ಸೂಗೂರು ಮತ್ತು ಸುತ್ತಮುತ್ತಲ ರೈತಬಾಂಧವರು ಈ ಯಂತ್ರದ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ಪನ್ನದ ಬೆಲೆ ಮತ್ತು ಇತರೆ ಮಾಹಿತಿಗಳನ್ನ ರೈತರಿಗೆ ತಿಳಿಸಲಾಯಿತು. ಅಷ್ಟೇ ಅಲ್ಲದೆ ಖರೀದಿಸುವವರಿಗೆ ವಿಶೇಷ ಆಫರ್ ಗಳನ್ನ ಘೋಷಿಸಲಾಯಿತು.

ಸೂಗೂರಿನಲ್ಲಿ ಇಂಥದೊಂದು ಕೃಷಿಗೆ ನೆರವಾಗುವ ಯಂತ್ರ ಮಾರುಕಟ್ಟೆಗೆ ಬಂದ ಬಗ್ಗೆ ರೈತವರ್ಗ ಅತ್ಯಂತ ಹರ್ಷ ವ್ಯಕ್ತಪಡಿಸಿತು..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bhadravati Social Welfare Department ಪ್ರೋತ್ಸಾಹಧನ ಪಡೆಯಲು ಆನ್ ಲೈನ್ ಅರ್ಜಿ ಆಹ್ವಾನ. ಭದ್ರಾವತಿ ಸಮಾಜ ಕಲ್ಯಾಣ ಇಲಾಖೆ ಮಾಹಿತಿ.

Bhadravati Social Welfare Department ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ...

Sri Jayachamarajendra Government ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಗೆ ಅರಿವಳಿಕೆ ತಜ್ಞರ ನೇಮಕಾತಿಗೆ ನೇರ ಸಂದರ್ಶನ.

Sri Jayachamarajendra Government ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಶಿವಮೊಗ್ಗ ಜಿಲ್ಲಾ ಆರೋಗ್ಯ...

S.N. Channabasappa ಅರ್ಹ ಬಡವರ ಬಿ.ಪಿ.ಎಲ್.ಕಾರ್ಡ್ ರದ್ದತಿಯಿಂದ ಜನಸಾಮಾನ್ಯರ ಬದುಕು ದುಸ್ತರ- ಎಸ್.ಎನ್.ಚನ್ನಬಸಪ್ಪ.

S.N. Channabasappa ಅರ್ಹ ಬಡವರ ಬಿಪಿಎಲ್ ಕಾರ್ಡ್ ರದ್ದತಿಯಿಂದ ಜನಸಾಮಾನ್ಯರ ಬದುಕು...

B.Y. Raghavendra ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ: ರಾಜ್ಯಪಾಲರಿಗೆ ಸಂಸದ ರಾಘವೇಂದ್ರ ಮನವಿ ಅರ್ಪಣೆ.

B.Y. Raghavendra ಹೈಕೋರ್ಟ್ ಸರ್ಕ್ಯೂಟ್ ಪೀಠಕ್ಕೆ ಶಿವಮೊಗ್ಗ ಎಲ್ಲ ರೀತಿಯಲ್ಲೂ ಅರ್ಹವಾಗಿದೆ; ರಾಜ್ಯಪಾಲರ...