Shivamogga News ನಿಸ್ವಾರ್ಥ ಕೆಲಸಕ್ಕೆ ದೀರ್ಘಕಾಲ ಸಮರ್ಪಿಸಿಕೊಳ್ಳುವ ಮನೋಭಾವವುಳ್ಳ ವ್ಯಕ್ತಿಯೇ ಸ್ವಯಂಸೇವಕ. ಸ್ವಯಂಸೇವಕ ನಿರ್ಮಾಣಗೊಳ್ಳಲು ಇರುವ ಕಾರ್ಯಪದ್ಧತಿಯೇ ನಿತ್ಯಶಾಖೆ. ಪ್ರಸ್ತುತ ಸಂಘ ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿದೆ. ೧೯೪೦ರಲ್ಲಿ ದೇಶದ ಪ್ರಾಂತಗಳನ್ನು ತಲುಪಿತು. ೧೯೮೦ರ ದಶಕದಲ್ಲಿ ದೇಶದ ಎಲ್ಲಾ ಜಿಲ್ಲೆಗಳಿಗೆ ತಲುಪಿತು. ೧೯೯೬ರ ವೇಳಗೆ ಸಂಘ ಎಲ್ಲಾ ತಾಲೂಕು ತಲುಪಿ ೨೦೨೬ರಲ್ಲಿ ವಾರ್ಡ್ಗಳಿಗೆ ತಲುಪಿದೆ ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಭಾನುವಾರ ರಾಷ್ಟಿçÃಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ನಿಮಿತ್ತ ಆಯೋಜಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘವನ್ನು ಮುನ್ನಡೆಸುತ್ತಿರುವುದು ಸಮಾಜವೇ. ಸಂಘ ಸಮಾಜದಲ್ಲಿ ಒಂದು ಸಂಘಟನೆಯಲ್ಲ, ಸಮಾಜವನ್ನೇ ಸಂಘಟಿಸುವುದು ಸಂಘದ ಉz್ದೆÃಶ. ಹಾಗಾಗಿ ಸಂಘ ಸಮಾಜದ ಸಂಘಟನೆಯಾಗಿದೆ. ಮಾತೃಭೂಮಿ, ಹಿಂದುತ್ವ, ಹಿಂದೂ ರಾಷ್ಟçವೆಂಬ ಮೂಲ ವಿಚಾರ ಇಟ್ಟುಕೊಂಡು ರಾಷ್ಟç ಭಾವ ನಿರ್ಮಾಣವನ್ನು ಸಂಘ ಮಾಡುತ್ತಿದೆ ಎಂದರು.
ವ್ಯಕ್ತಿಯಲ್ಲಿ ಪ್ರಕಟಗೊಳ್ಳುವ ಲಕ್ಷಣವನ್ನು ವ್ಯಕ್ತಿತ್ವ, ನಾಯಕನ ಲಕ್ಷಣವನ್ನು ನಾಯಕತ್ವ, ನೇತಾರನ ಲಕ್ಷಣವನ್ನು ನೇತೃತ್ವ, ಮನುಷ್ಯನ ಸ್ವಭಾವವನ್ನು ಮನುಷ್ಯತ್ವ ಎನ್ನುತ್ತೇವೆ ಅಂತೆಯೇ ಹಿಂದುವಿನ ಜೀವನದಲ್ಲಿ ಅಭಿವ್ಯಕ್ತಗೊಳ್ಳುವ ಗುಣಲಕ್ಷಣಗಳ ಪ್ರಕಟೀಕರಣವೇ ಹಿಂದುತ್ವ. ವಿವೇಕಾನಂದರು ಬಳಸಿದ ಹಿಂದು ಶಬ್ದ ರಾಷ್ಟಿçÃಯ ಪದವಾಚಕ. ಹಾಗಾಗಿ ನಮ್ಮ ರಾಷ್ಟಿçÃಯತೆ ಹಿಂದುತ್ವ. ಭಾರತದಲ್ಲಿರುವ ಪ್ರತಿಯೊಬ್ಬರೂ ಹಿಂದುಗಳೇ ಎಂದರು.
ಸಮಾನ ಆಚಾರ, ಸಮಾನ ವಿಚಾರ, ಸಮಾನ ಸಂಸ್ಕೃತಿಯ ರಾಷ್ಟç ಜೀವನ ನಡೆಸುತ್ತಿz್ದÉÃವೆ. ಇಡೀ ದೇಶದಲ್ಲಿ ಸಾಂಸ್ಕೃತಿಕ ಏಕತೆಯಿದೆ. ಇವೆಲ್ಲವನ್ನು ಒಳಗೊಂಡ ರಾಷ್ಟಿçÃಯತೆಯೇ ಹಿಂದುತ್ವ. ಅದು ಪ್ರತಿಯೊಬ್ಬನಲ್ಲೂ ಪ್ರಕಟೀಕರಣಗೊಳ್ಳಬೇಕು. ಅದನ್ನೇ ಸಂಘ ಮಾಡುತ್ತಿದೆ ಎಂದÀÄ ಹೇಳಿದರು.
ಅನ್ಯದೇಶಗಳಿಗೆ ತುಲನೆ ಮಾಡಿದಾಗ ಭಾರತಕ್ಕೆ ಪಾರಂಪರಿಕ ಇತಿಹಾಸದ ಅವಲೋಕನ ಇದೆ. ಕಾಲಕಾಲಕ್ಕೆ ನಡೆದ ಆಕ್ರಮಣಗಳನ್ನು ಯಶಸ್ವಿಯಾಗಿ ಪ್ರತಿರೋಧಿಸಿದ ಪರಂಪರೆ ನಮ್ಮದು. ಬಹಳ ದೀರ್ಘಕಾಲ ಆಕ್ರಮಣಗಳನ್ನು ಎದುರಿಸಿದ ನಾಗರಿಕತೆ ನಮ್ಮದು. ಸುಮಾರು ೨೦೦೦ ವರ್ಷಗಳ ಸತತ ಆಕ್ರಮಣ ದೇಶದ ಮೇಲೆ ಆಗಿದೆ. ಅದನ್ನು ಅತ್ಯಂತ ಸಮರ್ಥವಾಗಿ ತಡೆದಿz್ದÉÃವೆ ಎಂದರು.
೧೮೯೩ರ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ ನಂತರ ರಾಷ್ಟಿçÃಯ ಚಿಂತನೆಯ ಹೊಸ ಅಲೆ ದೇಶದಲ್ಲಿ ಮೊಳಗುತ್ತಾ ಬಂದಿತು. ಲೋಕಮಾನ್ಯ ತಿಲಕರ ನಿಧನದ ನಂತರ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕಿನಲ್ಲಿ ಬರುವ ಕುರುಹು ಕಂಡಿತು. ಸ್ವಾತಂತ್ರ್ಯ ಪ್ರಾಪ್ತಿಯ ಮುಂಚಿನ ಮತ್ತು ನಂತರದ ದಿನಗಳ ಬಗ್ಗೆ ಚಿಂತಿಸಿದವರಲ್ಲಿ ಕೇಶವ ಬಲಿರಾಮ ಹೆಡಗೇವಾರ್ ಓರ್ವರು. ೧೯೨೧ರಲ್ಲಿ ಕ್ರಾಂತಿಕಾರರಾಗಿ ಸ್ವಾತಂತ್ರ್ಯ ಹೋರಾಟದ ಕಾರ್ಯಕ್ರಮಗಳನ್ನು ಸಂಘಟಿಸಿದರು. ಅಸಹಕಾರ ಚಳವಳಿಯ ಸಂದರ್ಭದಲ್ಲಿ ಬಂಧನಕ್ಕೊಳಗಾದರು. ಸಶಕ್ತ, ಸರ್ವಾಂಗೀಣ ವಿಕಾಸ ಹಾಗೂ ಸುಭದ್ರ, ಸಂಘಟಿತ ಭಾರತದ ಕನಸು ಕಂಡರು ಎಂದರು.
ಬ್ರಿಟೀಷರನ್ನು ಭಾರತದಿಂದ ಓಡಿಸುವುದರ ಜೊತೆಗೆ ಸ್ವಾತಂತ್ರ್ಯ ನಂತರದ ಭಾರತವನ್ನು ಕಟ್ಟುವ ಜನಸಾಮಾನ್ಯರ ಆಂದೋಲನದ ಚಿಂತನೆ ಡಾಕ್ಟರ್ ಜೀ ಅವರಲ್ಲಿ ತಳೆದು ೧೯೨೫ರ ವಿಜಯದಶಮಿಯಂದು ಪ್ರಾರಂಭವಾಯಿತು. ಆರ್ಎಸ್ಎಸ್. ಪ್ರಸ್ತುತ ೧೦೦ ವರ್ಷ ಕ್ರಮಿಸಿ ಬಂದಿz್ದÉÃವೆ. ವ್ಯಂಗ್ಯ, ತತ್ಸಾರ, ವಿರೋಧ ಹಂತಗಳನ್ನು ಸಂಘ ಎದುರಿಸಿ ಸಮಾಜ ಸ್ವೀಕೃತಿಯ ಹಂತದಲ್ಲಿz್ದÉÃವೆ ಎಂದರು.
Shivamogga News ಮಹಿಳೆಯರು ರಾಷ್ಟçದ ವಿಕಾಸದ ಪ್ರಕ್ರಿಯೆಯಲ್ಲಿ ಹೆಗಲು ಜೋಡಿಸುವ ಉz್ದÉÃಶದಿಂದ ೧೯೩೬ರಲ್ಲಿ ರಾಷ್ಟಿçÃಯ ಸೇವಿಕಾ ಸಮಿತಿ, ವಿದ್ಯಾರ್ಥಿಗಳಲ್ಲಿ ರಾಷ್ಟಿçÃಯ ದೃಷ್ಟಿಕೋನ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸಲು ೧೯೪೯ರಲ್ಲಿ ಅಖಿಲ ಭಾರತೀಯ ಪರಿಷತ್, ಬುಡಕಟ್ಟು ಕಲ್ಯಾಣದ ಚಿಂತನೆಯಿAದ ೧೯೫೨ರಲ್ಲಿ ವನವಾಸಿ ಕಲ್ಯಾಣ, ಶ್ರಮಿಕರ ಒಗ್ಗೂಡಿಸಲು ೧೯೫೫ರಲ್ಲಿ ಭಾರತೀಯ ಮಜ್ದೂರ್ ಸಂಘ, ಕೃಷಿಕರಿಗೆ ಭಾರತೀಯ ಕಿಸಾನ್ ಸಂಘ, ಧಾರ್ಮಿಕ ಕ್ಷೇತ್ರದ ಏಕತೆಗಾಗಿ ೧೯೬೪ರಲ್ಲಿ ವಿಶ್ವ ಹಿಂದೂ ಪರಿಷತ್, ಕಲಾವಿದರ ಸಂಘಟನೆಗೆ ಸಂಸ್ಕಾರ ಭಾರತಿ, ಹಾಗೆಯೇ ಸಂಸ್ಕೃತ ಭಾರತಿ, ವಿಜ್ಞಾನ ಭಾರತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ನಂತಹ ವಿವಿಧ ಕ್ಷೇತ್ರಗಳ ಸಂಘಟನೆಗಳು ರಚನೆಗೊಂಡಿವೆ. ಸುಮಾರು ೫೦ ಸಂಘಟನೆ ಮೂಲಕ ಸಮಾಜ ಜಾಗರಣ ಕಾರ್ಯ ನಡೆಯುತ್ತಿದೆ ಎಂದÀÄ ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಆರ್ಎಸ್ಎಸ್ ಶಿವಮೊಗ್ಗ ಜಿಲ್ಲಾ ಕಾರ್ಯವಾಹ ಚೇತನ, ಸಂಪೂರ್ಣ ಹಿಂದೂ ಸಮಾಜವನ್ನು ಸಂಘಟಿಸುವ ಉz್ದÉÃಶದಿಂದ ಸಂಘ ಪ್ರಾರಂಭವಾಗಿದೆ. ಶುದ್ಧ, ಸಾತ್ವಿಕ, ಪ್ರೇಮದಿಂದ ಸಮಾಜ ಸಂಘಟಿಸುವ ಕೆಲಸವನ್ನು ೧೦೦ ವರ್ಷದಿಂದ ಸಂಘ ಮಾಡುತ್ತಿದೆ. ಧರ್ಮ ಸಂರಕ್ಷಣೆಯ ಮೂಲಕ ಸಂಘಟಿತ ಕಾರ್ಯಶಕ್ತಿಯ ಮೂಲಕ ಈ ರಾಷ್ಟçವನ್ನು ಪರಮವೈಭವ ಸ್ಥಿತಿಗೆ ಕೊಂಡೊಯ್ಯಲು ಆರ್ಎಸ್ಎಸ್ ಕೆಲಸ ಮಾಡುತ್ತಿದೆ ಎಂದÀÄ ಹೇಳಿದರು.
ಈ ಸಂದರ್ಭದಲ್ಲಿ ಆರ್ಎಸ್ಎಸ್ನ ಶಿವಮೊಗ್ಗ ಜಿಲ್ಲಾ ಸಂಘಚಾಲಕ ಬಿ.ಎ.ರಂಗನಾಥ್, ದಕ್ಷಿಣ ಮಧ್ಯ ಕ್ಷೇತ್ರೀಯ ಸಹ ಬೌದ್ಧಿಕ್ ಪ್ರಮುಖ್ ಗೋವಿಂದ್ ಜೀ, ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್, ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್, ವಿಭಾಗ ಸಹಕಾರ್ಯವಾಹ ಮಧುಕರ್, ವಿಭಾಗ ಪ್ರಚಾರಕ ಭರತ್ರಾಜ್, ವಿಭಾಗ ಪ್ರಚಾರ ಪ್ರಮುಖ್ ದುರ್ಗಾಪ್ರಸಾದ್ ಇನ್ನಿತರರಿದ್ದರು.
ಉತ್ತರಕ್ಕಾಗಿ ನಿತ್ಯಶಾಖೆಗೆ ಬನ್ನಿ…
ಸಂಘ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತದೆ. ಸಂಘದಲ್ಲಿ ಪ್ರಶ್ನೋತ್ತರ ಎಂಬುದು ಅವಿಭಾಜ್ಯ ಅಂಗ. ಸಂಘದ ನಿತ್ಯಶಾಖೆಗೆ ಬಂದರೆ ಉತ್ತರ ಕಂಡಿತ ದೊರಕುತ್ತದೆ. ಮಾಧ್ಯಮದ ಬಳಿ ಉತ್ತರ ಸಿಗಲ್ಲ. ಬ್ರಿಟೀಷರ ವಿರುದ್ಧ ಹೋರಾಡಿದ ತಂಡ ಸಂಘವನ್ನು ಪ್ರಾರಂಭಿಸಿದ್ದು. ಭಾರತದ ಸಂಪೂರ್ಣ ಸ್ವಾತಂತ್ರ್ಯ ಸಂಘದ ಧ್ಯೇಯೋz್ದÉÃಶಗಳಲ್ಲಿ ಒಂದಾಗಿತ್ತು, ಅದು ಸಂಘದ ಪ್ರಾರ್ಥನೆಯಲ್ಲಿತ್ತು. ಸ್ವಾತಂತ್ರ್ಯ ನಂತರ ರಾಷ್ಟçದ ಸರ್ವಾಂಗೀಣ ಉನ್ನತಿ ಸೇರಿದೆ. ದೇಶದಲ್ಲಿ ಪೂರ್ಣ ಸ್ವರಾಜ್ಯದ ಘೋಷಣೆಯದಾಗ ಸಂಘದ ಶಾಖೆಗಳಲ್ಲಿ ಆಚರಿಸಲಾಯಿತು.
ಸಂಘ ಸಂವಿಧಾನದತ್ತ, ಪಾರದರ್ಶಕ …
ಬ್ರಿಟೀಷರ ಕಾಲದಲ್ಲಿ ನೊಂದಣಿ ಚರ್ಚೆ ಇರಲಿಲ್ಲ, ೧೯೪೭ರಲ್ಲಿ ಸ್ವಾತಂತ್ರ್ಯ ಬಂದು ೧೯೫೦ರಲ್ಲಿ ಗಣರಾಜ್ಯ ದೇಶವಾಗಿ ರೂಪುಗೊಂಡು ನಮ್ಮದೇ ಸಂವಿಧಾನ ಅಸ್ತಿತ್ವಕ್ಕೆ ಬಂದಿತು. ಸಂವಿಧಾನದ ವಿಧಿ ೧೯ ಸ್ವಾತಂತ್ರ್ಯದ ಬಗ್ಗೆ ತಿಳಿಸುತ್ತದೆ. ಅದರ ಪರಿಚ್ಛೇದ ೧೯(೧)(ಎ) ಅಭಿವ್ಯಕ್ತಿ ಸ್ವಾತಂತ್ರ್ಯ, (ಬಿ) ಒಟ್ಟು ಸೇರುವುದು, (ಸಿ) ಒಕ್ಕೂಟ ರಚನೆಯ ಬಗ್ಗೆ ತಿಳಿಸುತ್ತದೆ. ೧೯(೧) (ಸಿ) ಒಕ್ಕೂಟ ರಚಿಸಬಹುದು ಎಂದು ತಿಳಿಸಿದೆ ಅದಕ್ಕೆ ನೊಂದಣಿ ಕಡ್ಡಾಯವೆಂದಿಲ್ಲ. ಹಾಗಾಗಿ ಅದರ ಆಧಾರದಲ್ಲಿ ಸಂಘ ನಡೆದುಕೊಂಡು ಬಂದಿದೆ. ಸಂವಿಧಾನದತ್ತ, ಪಾರದರ್ಶಕವಾಗಿ ಸಂಘವಿದೆ.
