ಹಸಿರು ಉಸಿರು- ಪರಿಸರ ಜಾಗೃತಿ ನಿಟ್ಟಿನಲ್ಲಿ ಗೋಪಾಳದ ಬ್ರಾಹ್ಮಣ ಸೇವಾ ಸಂಘ(ರಿ)ವತಿಯಿಂದ ಚಾಲುಕ್ಯನಗರ ಸುರಭಿ ಸಮುದಾಯ ಭವನ ಹಾಗು ಶ್ರೀಬಲಮುರಿ ವಿಜಯ ಗಣಪತಿ ದೇವಸ್ಥಾನ ಸುತ್ತಮುತ್ತ ಗಿಡಗಳನ್ನು ನೆಡುವ ವನಮಹೋತ್ಸವ ಆಚರಿಸಲಾಯಿತು.
ಸಂಘದ ಸದಸ್ಯರು ವಿವಿಧ ಜಾತಿಯ ಗಿಡಗಳನ್ನು ನೆಟ್ಟರು, ವಿವಿಧ ಕಡೆಗಳಲ್ಲಿ ಹಸಿರನ್ನು ಬೆಳಸುವ ಸಂಕಲ್ಪವನ್ನು ಸಂದರ್ಭದಲ್ಲಿ ಕೈಗೊಳ್ಳಲಾಯಿತು.
ಸಂಘದ ಅಧ್ಯಕ್ಷ ಸುರೇಶ್ ಉಮರಾಣಿ, ನಿಕಟಪೂರ್ವಅಧ್ಯಕ್ಷ ಎ.ಶಿವರಾಮಭಟ್, ಕಾರ್ಯದರ್ಶಿ ಶ್ರೀಧರಮೂರ್ತಿ, ಖಜಾಂಚಿ ಬಾಲಾಜಿರಾವ್, ನಿರ್ದೇಶಕರಾದ ಎನ್,ಆರ್,ವೆಂಕಟೇಶ್, ಉಮೇಶ್ ಬಾಪಟ್ ನೇತೃತ್ವ ವಹಿಸಿದ್ದರು.
