Wednesday, June 17, 2026
Wednesday, June 17, 2026

KSRTC ಶಿವಮೊಗ್ಗದ ಸಾರಿಗೆ ಬಸ್ ಡಿಪೋ ಹಿಂಭಾಗವಿಶಾಲ ಜಾಗದಲ್ಲಿ ಉದ್ಯಾನವನ ನಿರ್ಮಿಸಲು ಮನವಿ

Date:

KSRTC ನಗರದ ಕೆಎಸ್‌ಆರ್‌ಟಿಸಿ ಡಿಪ್ಪೋ ಹಿಂಭಾಗ ಉದ್ಯಾನವನಕ್ಕೆಂದೆ ಮೀಸಲಿಟ್ಟಿರುವ ೨ವರೆ ಎಕರೆ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಉದ್ಯಾನವನ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಇಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತು.
ನಗರದ ವಾರ್ಡ್ ನಂ. ೨೭ರಲ್ಲಿ ಮಂಜುನಾಥ ಬಡಾವಣೆಯಲ್ಲಿ ಪಾಲಿಕೆಗೆ ಸೇರಿದ ಸುಮಾರು ೨ವರೆ ಎಕರೆ ಜಾಗದಲ್ಲಿ ಸುತ್ತಲೂ ಪೆನ್ಸಿಂಗ್ ಮಾಡಿ ಉದ್ಯಾನವನ ನಿರ್ಮಿಸಲು ಕಾಯ್ದಿರಿಸಲಾಗಿದೆ. ಆದರೆ ಉದ್ಯಾನವನ ನಿರ್ಮಿಸಲು ವಿಳಂಬ ಮಾಡಲಾಗುತ್ತಿದೆ.
ಮಂಜುನಾಥ ಬಡಾವಣೆ, ಮಿಳ್ಳಗಟ್ಟ, ಬುದ್ಧನಗರ, ಅಣ್ಣಾನಗರ, ಆನಂದರಾವ್ ಬಡಾವಣೆ ಭಾಗದಲ್ಲಿ ಒಂದೂ ಉದ್ಯಾನವನವಿಲ್ಲ. ಇದರಿಂದ ಈ ಭಾಗಗಳ ಹಿರಿಯ ನಾಗರೀಕರು, ಮಕ್ಕಳು ಹಾಗೂ ಮಹಿಳೆಯರು ವಾಯು ವಿಹಾರ, ವ್ಯಾಯಾಮ ಮಕ್ಕಳ ಆಟಿಕೆಗಳು ಇತ್ಯಾದಿಗಳಿಗೆ ಅವಕಾಶವಿಲ್ಲದಂತಾಗಿದೆ.
KSRTC ಪ್ರಸ್ತುತ ಪಾಲಿಕೆ ಮೀಸಲಿಟ್ಟಿರುವ ೨ವರೆ ಜಾಗದಲ್ಲಿ ಉದ್ಯಾನವನ ನಿರ್ಮಿಸುವ ಮೂಲಕ ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ಕೋರಲಾಗಿದೆ.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಟ್ರಸ್ಟ್‌ನ ಪ್ರಮುಖರಾದ ಕಲ್ಲೂರು ಮೇಘರಾಜ್, ಮಂಜಪ್ಪಗೌಡ, ಎಂ. ಸಂಗಯ್ಯ, ಶಿವಣ್ಣ, ರಾಮಣ್ಣ, ಹಾಲೇಶ್ ಆರ್, ಹಿರಿಯಣ್ಣಗೌಡ, ಗುರುನಾಥ್, ವಿಜಯ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ವೃದ್ಧಾಪ್ಯದ ಲಕ್ಷಣಗಳನ್ನ ಮುಂದೂಡುವಲ್ಲಿ ಯೋಗಾಭ್ಯಾಸವೇ ಏಕೈಕ ಮಾರ್ಗ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಮನುಷ್ಯನ ಆಯುಷ್ಯ ಕ್ಷೀಣಿಸಿದಂತೆ ವಯೋಸಹಜ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾಗುವ...

Chamber Of Commerce Shivamogga ಮಹಿಳಾ ಉದ್ಯಮಿಗಳಿಗೆ ಮಾದರಿ ಸಾಹಸಿ ಡಾ.ಬಿ.ವಿ.ಲಕ್ಷ್ಮೀದೇವಿ : ಬಿ.ಗೋಪಿನಾಥ್

Chamber Of Commerce Shivamogga ಆಹಾರ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುತ್ತಿರುವ...