Friday, June 12, 2026
Friday, June 12, 2026

ಕಂಬಿಯ ಹಿಂದಿದ್ದರೂ ಸ್ವಚ್ಛತಾ ಜಾಗೃತಿ ಗೀತೆ ಬರೆದು ಹಾಡಿದ ಕಲಾವಿದ ಮನಸ್ಸುಗಳು

Date:

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕಸ ತುಂಬುವ ವಾಹನಗಳಲ್ಲಿ ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಚ್ಛತಾ ಜಾಗೃತಿ ಗೀತೆಗಳನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದ ಸಜಾ ಬಂದಿಯಾದ ಚಂದ್ರ ಹೆಮ್ಮಾಡಿ ಇವರು 06 ಗೀತೆಗಳ ಸಾಹಿತ್ಯ ಸಂಯೋಜಿಸಿದ್ದು, 06 ಜನ ಬಂದಿಗಳು 06 ವಿಶಿಷ್ಟ ಸ್ವಚ್ಛತಾ ಗೀತೆಗಳ ಗಾಯನದ ಧ್ವನಿಮುದ್ರಿಕೆಯನ್ನು ಸಿದ್ಧಪಡಿಸಿ ಮುದ್ರಿಸಿರುತ್ತಾರೆ.
ಚಂದ್ರ ಹೆಮ್ಮಾಡಿಯವರಿಂದ ಕಸ ಎಸಿಯೋರು ಯಾರವೋ, ದಾದಾಪೀರ್‌ಯವರಿಂದ ಸ್ವಚ್ಛತೆಯೇ ಸೇವೆಯು ಎಂದ ಗಾಂಧಿ ತಾತನ, ತಿಮ್ಮಪ್ಪನವರಿಂದ ಕಸದ ಗಾಡಿ ಬಂತು ನೋಡಿ, ತಿಪ್ಪೇಸ್ವಾಮಿಯವರಿಂದ ಬನ್ನೀರಣ್ಣಾ ಬನ್ನೀರಕ್ಕಾ, ಆನಂದನವರಿAದ ಹಸಿಯಾಗಲಿ ಒಣ ಕಸವಾಗಲೀ, ಅನಿಲ್ ಕುಮಾರ್‌ನರಿಂದ ಕೇಳೋ ತಮ್ಮ ಕೇಳೋ ಅಣ್ಣಾ ಎಂಬ ಈ 6 ಸ್ವಚ್ಛತಾ ಜಾಗೃತಿ ಗೀತೆಗಳನ್ನು ಹಾಡಿದ್ದು, ಈ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮತ್ತು ಜಾಗೃತಿ ಮೂಡಿಬರುವ ಸದಾಶಯವನ್ನು ಹೊಂದಲಾಗಿದೆ. ಈ ಹಾಡುಗಳಲ್ಲಿ ಸ್ವಚ್ಛತೆ ಕಾಪಾಡುವುದು, ಸಮರ್ಪಕ ವಿಧಾನದಲ್ಲಿ ಕಸ ವಿಲೇವಾರಿ ಮಾಡುವುದು, ಹಸಿಕಸ ಮತ್ತು ಒಣಕಸ ಬೇರ್ಪಡಿಸುವಿಕೆ, “ಕಸದಿಂದ ರಸ” ಮಾದರಿಯಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿ, ಬಯೋಗ್ಯಾಸ್ ಉತ್ಪಾದನ ಮೂಲಕ ಉದ್ಯೋಗ ಮತ್ತು ಆದಾಯವನ್ನು ಸಂಪಾದಿಸುವುದು. ಆರೋಗ್ಯ ರಕ್ಷಣೆ ಮತ್ತು ಪರಿಸರ ನೈರ್ಮಲ್ಯದ ಅರಿವು ಮೂಡಿಸುವುದು ಸೇರಿದಂತೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸ್ವಚ್ಛತೆಯೇ ಮೂಲ ತಳಹದಿ ಎಂಬ ಸಂದೇಶಗಳನ್ನು ಅಳವಡಿಸಲಾಗಿರುತ್ತದೆ.
ಈ ಬಂದಿಗಳ ಹಾಡುಗಳು ಜೂ.11 ರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ತುಂಬುವ ವಾಹನಗಳಲ್ಲಿ ಬಿತ್ತರಗೊಳ್ಳುತ್ತಿವೆ. ಬಂದಿಗಳ ಮನಃಪರಿವರ್ತನ ಮತ್ತು ಸುಧಾರಣಾ ಕಾರ್ಯಕ್ರಮಗಳಲ್ಲಿ ಈ ರೀತಿಯ ವಿಭಿನ್ನ ಹಾಗೂ ವಿನೂತನ ಕಾರ್ಯಕ್ರಮ ನಮ್ಮ ರಾಜ್ಯದಲ್ಲಿ ಪ್ರಪ್ರಥಮವಾಗಿದೆ ಎಂದು ಕಾರಾಗೃಹ ಮುಖ್ಯ ಅಧೀಕ್ಷಕರು ಪ್ರಕಟಣೆಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of School Education ಹೆಚ್ಚಿನ ಶುಲ್ಕ ವಸೂಲಿಮಾಡುವ ಖಾಸಗಿ ಶಾಲೆ-ಸಂಸ್ಥೆಗಳ ವಿರುದ್ಧ ಕ್ರಮ : ಮಂಜುನಾಥ ಸ್ವಾಮಿ

Department of School Education ಸರ್ಕಾರ ನಿಗಧಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ...

Election Commission of India ಬೆಂಗಳೂರಿನಲ್ಲಿ “ತಂತ್ರಜ್ಞಾನ ಚಾಲಿತ ಮತದಾರರ ನೋಂದಣಿ ” ಒಂದು ದಿನದ ಕಾರ್ಯಾಗಾರ

Election Commission of India ಭಾರತದ ಚುನಾವಣಾ ಆಯೋಗವು, ಭಾರತೀಯ ಅಂತರಾಷ್ಟ್ರೀಯ...