Thursday, July 23, 2026
Thursday, July 23, 2026

JCI Shivamogga Malnad “ನನ್ನ ಆಯ್ಕೆ- ಪ್ಲಾಸ್ಟಿಕ್ ಮುಕ್ತ ಭವಿಷ್ಯ ” ಪರಿಸರ ದಿನದ ವಿಶೇಷಜೆಸಿಐ ಸಂಸ್ಥೆಯಿಂದ” ಸಸ್ಟೈನಬಲ್ ಸಿಪ್ಪಿಂಗ್” ಕಾರ್ಯಕ್ರಮ.

Date:

JCI Shivamogga Malnad ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ನೀರಿನ ಬಾಟಲ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಜೇಸಿಐ ಶಿವಮೊಗ್ಗ ಮಲ್ನಾಡ್ ವತಿಯಿಂದ “ಸಸ್ಟೇನಬಲ್ ಸಿಪ್ಪಿಂಗ್” ಅಭಿಯಾನದಡಿ ಜಾಗೃತಿ ಹಾಗೂ ಸ್ಟೀಲ್ ಬಾಟಲ್ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಸುಮಾರು 50ಕ್ಕೂ ಹೆಚ್ಚು ಆಟೋ ಚಾಲಕರು ಭಾಗವಹಿಸಿದ್ದು, ಅವರ ಉಪಸ್ಥಿತಿಯಲ್ಲಿ ಈ ಯೋಜನೆಗೆ ಸಾಂಕೇತಿಕ ಉದ್ಘಾಟನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ
ಶ್ರೀ ಡಿ. ಎಸ್. ಅರುಣ್, ಮಾನ್ಯ ಶಾಸಕ, ವಿಧಾನ ಪರಿಷತ್ತು, ಶಿವಮೊಗ್ಗ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ
, ಶ್ರೀ ದೇವರಾಜ್ ಟಿ.ವಿ., ವೃತ್ತ ನಿರೀಕ್ಷಕರು, ಸಂಚಾರಿ ಪೊಲೀಸ್, ಶಿವಮೊಗ್ಗ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತುಂಬಿದರು.

ಶ್ರೀಯುತ ಪ್ರಭಾಕರ್ H. S ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ )ಶಿವಮೊಗ್ಗ ಮಹಾನಗರ ಪಾಲಿಕೆ.
ಶ್ರೀ ವಿಕಾಸ ಆರ್
ಹಿರಿಯ ಆರೋಗ್ಯ ನಿರೀಕ್ಷಕರು ಶಿವಮೊಗ್ಗ ಮಹಾನಗರ ಪಾಲಿಕೆ.
ಪ್ರಭುರಾಜ್
ಹಿರಿಯ ಆರೋಗ್ಯ ನಿರೀಕ್ಷಕರು ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ
ಗೌರವಾನ್ವಿತ ಅತಿಥಿಗಳಾಗಿ
ಜೆಎಫ್‌ಎಸ್ ಗೌರೀಶ್ ಭಗವತ್ ಕೆ.ವಿ., ನಿಕಟಪೂರ್ವ ವಲಯಾಧ್ಯಕ್ಷರು, ವಲಯ 24, ಜೆಸಿಐ ಭಾರತ
ಜೆಎಫ್‌ಎಸ್ ಆದರ್ಶ ಸರಾಫ್, ವಲಯ ಉಪಾಧ್ಯಾಧ್ಯಕ್ಷರು, ವಲಯ 24, ಜೆಸಿಐ ಭಾರತ,
ಜೆಸಿ ರೇಖಾ ರಂಗನಾಥ್, ವಲಯಾಧಿಕಾರಿ, ವಲಯ 24, ಜೆಸಿಐ ಭಾರತ ಉಪಸ್ಥಿತರಿದ್ದರು.

ಜೆಸಿ ಘನಶ್ಯಾಮ ಜಿ. ಗಿರಿಮಾಜಿ, ಅಧ್ಯಕ್ಷರು
ಜೆಸಿ ಸುಮಂತ್ ಸಿ.ವಿ., ಕಾರ್ಯದರ್ಶಿ
ಜೆಸಿ ಸುಮಾ ಒಡೆಯರ್, ಲೇಡಿ ಜೆಸಿ ಅಧ್ಯಕ್ಷರು
ಜೆಸಿ ಗಿರೀಶ್ ಒಡೆಯರ್, ಉಪಾಧ್ಯಕ್ಷರು, ಸಾಮಾಜಿಕ ಅಭಿವೃದ್ಧಿ
ಜೆಸಿ ವಿಶ್ವಾಸ ಎಸ್.ಡಿ., ಉಪಾಧ್ಯಕ್ಷರು, ಪಿಆರ್ & ಮಾರ್ಕೆಟಿಂಗ್
ಜೆಸಿ ಶರತ್ ಶಾಸ್ತ್ರಿ, ಯೋಜನಾ ನಿರ್ದೇಶಕರು
ಇವರುಗಳೊಂದಿಗೆ ಎಲ್ಲಾ ಜೆಸಿಐ ಶಿವಮೊಗ್ಗ ಮಲ್ನಾಡ್ ಸದಸ್ಯರು, ಪದಾಧಿಕಾರಿಗಳು ಹಾಗೂ ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.

JCI Shivamogga Malnad ಪ್ಲಾಸ್ಟಿಕ್ ಬಳಕೆ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವುದರ ಜೊತೆಗೆ ಪರಿಸರಕ್ಕೂ ಅಪಾಯಕಾರಿಯಾಗಿದೆ. ಬಿಸಿಲಿನ ಸಮಯದಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳಿಂದ ವಿಷಕಾರಿ ಅಂಶಗಳು ನೀರಿಗೆ ಸೇರುವ ಸಂಭವ ಇರುವುದರಿಂದ ಜನರ ಆರೋಗ್ಯಕ್ಕೂ ಹಾನಿಯಾಗುತ್ತದೆ ಎಂಬುದನ್ನು ಗಣ್ಯರು ತಮ್ಮ ಭಾಷಣಗಳಲ್ಲಿ ತಿಳಿಸಿದರು.

ಈ ಯೋಜನೆಯಡಿ ಹಂತ ಹಂತವಾಗಿ 500ಕ್ಕೂ ಹೆಚ್ಚು ಸ್ಟೀಲ್ ನೀರಿನ ಬಾಟಲ್‌ಗಳನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ. ಈ ಮಹತ್ವದ ಯೋಜನೆಗೆ ಸುಮಾರು ₹1 ಲಕ್ಷಕ್ಕೂ ಅಧಿಕ ವೆಚ್ಚವಾಗಿದ್ದು, ವಿವಿಧ ದಾನಿಗಳ ಸಹಕಾರದಿಂದ ನಿಧಿ ಸಂಗ್ರಹಿಸಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.

ಜೇಸಿಐ ಸಂಸ್ಥೆ ಸದಾ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದು, “ಸಸ್ಟೇನಬಲ್ ಸಿಪ್ಪಿಂಗ್” ಮೂಲಕ ಆರೋಗ್ಯ, ಹಣದ ಉಳಿವು ಹಾಗೂ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆ ಇಟ್ಟಿದೆ.

ಈ ಸಂದರ್ಭದಲ್ಲಿ “ಒಂದು ನಗರ, ಒಂದು ಗುರಿ, ಒಂದು ಒಳ್ಳೆಯ ಅಭ್ಯಾಸ” ಎಂಬ ಸಂದೇಶದೊಂದಿಗೆ ಜನರಲ್ಲಿ ಪ್ಲಾಸ್ಟಿಕ್ ಮುಕ್ತ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಕರೆ ನೀಡಲಾಯಿತು.

“ನನ್ನ ಆಯ್ಕೆ – ಪ್ಲಾಸ್ಟಿಕ್ ಮುಕ್ತ ಭವಿಷ್ಯ” ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನೀಟ್ ಗೊಂದಲ, ಪ್ರತಿಭಟನೆ : ರಾಷ್ಟ್ರವಿರೋಧಿ ಶಕ್ತಿಗಳ ಕರಾಳ ತಂತ್ರ- ಎಸ್.ಎನ್.ಚನ್ನಬಸಪ್ಪ

S.N. Channabasappa ದೆಹಲಿಯಲ್ಲಿ ಜಿರಳೆ ಪಕ್ಷದ ಹೆಸರಿನಲ್ಲಿ ನಡೆದದ್ದು ವಿದ್ಯಾರ್ಥಿಗಳ ಹೋರಾಟ...

K. J.George ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಹೋಟೆಲ್ ಗಳು, ಆತಿಥ್ಯ ಕೇಂದ್ರಗಳು ಹಂತಹಂತವಾಗಿ ಉನ್ನತೀಕರಣ : ಸಚಿವ ಕೆ.ಜೆ.ಜಾರ್ಜ್

K.J. George ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ,...

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...