ಬೇಸೂರು ಅಣು ವಿದ್ಯುತ್ ಸ್ಥಾವರ ಹೋರಾಟ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿದರು.
ನಮ್ಮ ಭಾಗದಲ್ಲಿ ರೈತರು 2-3 ಸರಿ ಹೋರಾಟ ಮಾಡಿದ್ದಾರೆ.
ಯಾರು ಗಾಬರಿಯಾಗುವ ಪ್ರಶ್ನೆ ಇಲ್ಲ.
ಯೋಜನೆ ಸಂಬಂಧ ಯಾವುದೇ ಆದೇಶ ಆಗಿಲ್ಲ.
5 ಜಿಲ್ಲೆಯಂತೆ ನಮ್ಮ ಜಿಲ್ಲೆಯಲ್ಲಿ ಮಾಹಿತಿ ಕೇಳಿದ್ದಾರೆ
ವಿಮಾನ ಸರ್ವೆ ಮಾಡಿದ್ದು, ಖನಿಜಗಳ ಶೋಧಕ್ಕಾಗಿ.. ಇದಕ್ಕೆ ಹೆದರುವ ಅಗತ್ಯವಿಲ್ಲ.
ನಾನು, ಸಚಿವರು ಎಲ್ಲರೂ ಇದ್ದೇವೆ. ಭಯ ಪಡುವ ಅಗತ್ಯವಿಲ್ಲ.
ಅಣು ಸ್ಥಾವರ ಅನ್ನೋ ಕಾರಣಕ್ಕೆ ಭಯ ಪಡ್ತಿದ್ದಾರೆ
ಯಾರು ಹೆದರುವ ಅವಶ್ಯಕತೆ ಇಲ್ಲ. ಯೋಜನೆ ಮಾಡಲು ಬಿಡಲ್ಲ.
ಅಂತಹ ಸ್ಥಿತಿ ಬಂದ್ರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಬರ್ತೆನೆ.
ರಾಜೀನಾಮೆ ಕೊಟ್ಟು ಹೋರಾಟ ಮಾಡ್ತೇನೆ ಎಂದ ಬೇಳೂರು.
ಹಸಿರಮಕ್ಕಿ ಸೇತುವೆ ಆದಷ್ಟು ಬೇಗ ಆಗುತ್ತೇ..
ಅದರ ಬಗ್ಗೆ ಮಾತನಾಡುವ ಯೋಗ್ಯತೆ ಹರತಾಳು ಹಾಲಪ್ಪನವರಿಗಿಲ್ಲ…
ಅವರು 5 ವರ್ಷ ಏನು ಮಾಡಿಲ್ಲ. ಸೇತುವೆಯನ್ನೂ ನೋಡಿಲ್ಲ.
ಆದಷ್ಟು ಬೇಗ ಸಿಎಂ ಕರೆಸಿ, ಉದ್ಘಾಟನೆ ಮಾಡ್ತೇವೆ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
