Saturday, July 11, 2026
Saturday, July 11, 2026

ಆರ್ಥಿಕ ಹಿಂದುಳಿದ ಕುಟುಂಬದ 11 ನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ವಿದ್ಯಾಧನ್ ‘ ವಿದ್ಯಾರ್ಥಿ ವೇತನ.ಅರ್ಜಿ ಸಲ್ಲಿಕೆಗೆ ಮಾಹಿತಿ.

Date:

ವಿದ್ಯಾಧಾನ್ ಒಂದು ಪಾನ್ ಇಂಡಿಯಾ ವಿದ್ಯಾರ್ಥಿವೇತನವಾಗಿದ್ದು ಇದನ್ನು ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ ವಿತರಿಸಲಾಗುತ್ತಿದೆ. ೧೯೯೯ರಲ್ಲಿ ಶ್ರೀ ಎಸ್.ಡಿ. ಶಿಬುಲಾಲ್ (ಸಹ-ಸಂಸ್ಥಾಪಕರು, ಇನ್ಫೋಸಿಸ್) ಮತ್ತು ಶ್ರೀಮತಿ ಕುಮಾರಿ ಶಿಬುಲಾಲ್ (ವ್ಯವಸ್ಥಾಪಕ ಟ್ರಸ್ಟಿ) ಸ್ಥಾಪಿಸಿದರು. ವಿದ್ಯಾಧಾನ್ ವಿದ್ಯಾರ್ಥಿ ವೇತನವು ಇಲ್ಲಿಯತನಕ ೧೫,೦೦೦ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ. ವಿದ್ಯಾಧಾನ್ ಪ್ರತಿಷ್ಠಾನವು ಕೇರಳ, ಕರ್ನಾಟಕ, ತಮಿಳುನಾಡು, ಪುದುಚೆರಿ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಗೋವಾ, ಒಡಿಶಾ, ದೆಹಲಿ, ಲಡಾಖ್, ಬಿಹಾರ್, ಜಾರ್ಖಂಡ್, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ, ಹರಿಯಾಣ, ಚಂಡೀಗಢ, ರಾಜಸ್ಥಾನ ಮತ್ತು ಮೇಘಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ೧೧ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ವಿದ್ಯಾಧನ್ ವಿದ್ಯಾರ್ಥಿವೇತನ ೨೦೨೬ರ ಅರ್ಜಿಸಲ್ಲಿಕೆ ಈಗ ಪ್ರಾರಂಭವಾಗಿವೆ.
೨೦೨೬ರ ವಿದ್ಯಾರ್ಥಿ ವೇತನದ ಅರ್ಜಿಗಳು ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಲಭ್ಯವಿದೆ.
ವಿದ್ಯಾರ್ಥಿಗಳು ಉಚಿತವಾಗಿ ವಿದ್ಯಾಧಾನ್ ವೆಬ್ಸೈಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು
ವಿಚಾರಣೆಗಾಗಿ: vidyadhan.karnataka@sdfoundationindia.com
ಕರೆಮಾಡಿ: +918068333500 (ಸಹಾಯವಾಣಿ ಸಂಖ್ಯೆ)
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು: www.vidyadhan.org ಅಥವಾ SDF Vidya (ಮೊಬೈಲ್ ಅಪ್ಲಿಕೇಶನ್)
ಕೊನೆಯ ದಿನಾಂಕ: 05 ಜುಲೈ 2026

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Drinking Water Supplier Shivamogga ಶಿವಮೊಗ್ಗ ಕೆ.ಆರ್. ಜಲಶುದ್ಧೀಕರಣ ಘಟಕ ದುರಸ್ತಿ.: ಕುಡಿಯುವ ನೀರು ಸರಬರಾಜಿನಲ್ಲಿ ಅನಿರ್ದಿಷ್ಟ ಅವಧಿ ವ್ಯತ್ಯಯ.

Drinking Water Supplier Shivamogga ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ...

Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.

Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ...