Thursday, June 18, 2026
Thursday, June 18, 2026

ಶಿಕ್ಷಕರೇ..ಮನಬಿಚ್ಚಿ ಪಾಠ ಬೋಧಿಸಿ- ಡಾ.ಕೆ.ಶ್ರೀಪತಿ ಭಟ್ ಹಳಗುಂದ

Date:

“ನಾವುಗಳು ಬೋಧಿಸುವ ಪ್ರತೀ ವಿದ್ಯಾರ್ಥಿಯೂ ಈ ದೇಶದ ರಾಷ್ಟ್ರಪತಿಯಾಗುವ ಯೋಗವಿದೆ ಎಂದು ತಿಳಿದು ಬೋಧನೆ ಮಾಡಬೇಕು ಇದು ನಿಮ್ಮಂತಹ ಶಿಕ್ಷಕರಾಗುವವರಿಗೆ ಮಾತ್ರ ಸಾಧ್ಯ ಎಂದು ತಿಳಿಯಬೇಕು. ಯಾರ ಹೃದಯ ಮುಚ್ಚಿಕೊಂಡೆ ಇರುತ್ತದೆಯೋ ಅವರಿಗೆ ಪ್ರಪಂಚವೂ ಮುಚ್ಚಿರುತ್ತದೆ.

ತೆರೆಯಿರಿ ನಿಮ್ಮ ಮನಸ್ಸನ್ನು. ಮನಬಿಚ್ಚಿ ವಿದ್ಯಾರ್ಥಿಗಳಿಗೆ ಬೋಧಿಸಬೇಕು. ಶಿಕ್ಷಕರಿಗೆ ಡ್ರೆಸ್ ಕೋಡ್ ಬೇಕೇ ಬೇಕು. ನೋಡಿದ ತಕ್ಷಣ ವಿದ್ಯಾರ್ಥಿಗಳಿಗೆ ಈತ ಶಿಕ್ಷಕ ಎಂದು ಕಾಣಬೇಕು. ಶಿಕ್ಷಣವನ್ನು ನಾವು ದಿನನಿತ್ಯ ಬೇಡಬೇಕು. ಅದು ಓದಿನ ಮೂಲಕ, ಬೋಧನೆಯ ಮೂಲಕ, ಸಾಹಿತ್ಯದ ಮೂಲಕ ಮನವರಿಕೆ ಮಾಡಿಕೊಂಡಾಗ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯ. ಇದೂ ಒಂದು ನಿಮ್ಮ ದೊಡ್ಡ ಸಾಧನೆ. ನಿಮ್ಮ ಜೀವನದ ತುಂಬಾ ಓದುತ್ತಿರಬೇಕು. ಗೋಪಾಳಕೃಷ್ಣ ಅಡಿಗ, ದ.ರಾ. ಬೇಂದ್ರೆ, ಚಂದ್ರಶೇಖರ ಕಂಬಾರ, ಶಿವರಾಮ ಕಾರಂತ, ಪಂಪ, ರನ್ನ, ಕುಮಾರವ್ಯಾಸ ಇವರುಗಳ ಸಾಹಿತ್ಯವನ್ನು ಅರಗಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದಾಗ ಮಾತ್ರ ಒಳ್ಳೆಯ ಶಿಕ್ಷಕನಾಗಲು ಸಾಧ್ಯ. ತಮ್ಮ ವೃತ್ತಿ ಜೀವನವನ್ನು ಗೌರವಿಸಿ, ಸಂತೋಷಪಡಿ. ಉತ್ತಮ ಶಿಕ್ಷಕರಾಗಿ ಪಾಠ ಮಾಡಿ, ಶಬ್ದ, ವ್ಯಾಕರಣ, ಕವನ, ಕವಿತೆ, ನಾಟಕಗಳನ್ನು ಮನದಟ್ಟಾಗಿ ವಿದ್ಯಾರ್ಥಿಗಳಿಗೆ ಬೋಧಿಸಿ, ಅವರುಗಳು ತಮ್ಮ ಜೀವಮಾನದುದ್ದಕ್ಕೂ ನೆನಪಿಡುತ್ತಾರೆ. ಈ ಕಾಲೇಜಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ರೇಣುಕಪ್ಪ ಗೌಡ, ಪ್ರಭುಸ್ವಾಮಿ ಮಠ್, ಇಂತಹ ಕನ್ನಡ ಶಿಕ್ಷಕರು ಸದಾ ನೆನಪಾಗುತ್ತಾರೆ. ಅವರುಗಳ ಪ್ರೇರಣೆಯಿಂದ ಈಗ ನಾನು ಬೋಧಿಸಿರುವ ಸಾವಿರಾರು ವಿದ್ಯಾರ್ಥಿಗಳು ನನ್ನ ನೆನಪನ್ನು ಮಾಡಿಕೊಳ್ಳುತ್ತಾರೆ. ಎಲ್ಲರೂ ಇತಿಹಾಸವನ್ನು ಓದಬೇಕು. ಇತಿಹಾಸವನ್ನು ಓದದವ ಇತಿಹಾಸವನ್ನು ನಿರ್ಮಿಸಲಾರ ಎಂಬುದನ್ನು ತಿಳಿಯಿರಿ. ಉತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ಈ ದೇಶದ ಆಸ್ತಿಯನ್ನಾಗಿ ಮಾಡುವ ಹೊಣೆ ನಿಮ್ಮ ಮೇಲಿದೆ. ನಿಮ್ಮ ಭವಿಷ್ಯ ಉಜ್ವಲವಾಗಿಲಿ, ಜೀವಂತವಾಗಿರಲಿ ಎಂದು ಎಂದು ಡಾ. ಕೆ. ಶ್ರೀಪತಿ, ಹಳಗುಂದ, ಮುಖ್ಯಸ್ಥರು, ಕನ್ನಡ ವಿಭಾಗ, ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ, ಇವರು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನವು ನಡೆಸುತ್ತಿರುವ ಡಾ. ಜಿ.ಎ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯದ 2025-27ನೇ ಸಾಲಿನ ವಿದ್ಯಾರ್ಥಿ ವೇದಿಕೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಮೊದಲು ಪ್ರಾರ್ಥನೆ ಚಿದಂಬರ ಮತ್ತು ಸಂಗಡಿಗರು ಮಾಡಿದರು. ಡಾ. ಶಿಲ್ಪ ವಿ.ಎನ್., ಪ್ರಾಚಾರ್ಯರು, ಡಾ. ಜಿ.ಎ. ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯ ಇವರು ಸರ್ವರನ್ನೂ ಸ್ವಾಗತಿಸಿದರು. ಪ್ರಥಮ ವರ್ಷದ ಕು. ಚಿನ್ಮಯ್ ವಿದ್ಯಾರ್ಥಿ
ಕಾರ್ಯದರ್ಶಿ, ಕು. ಅನುಷಾ ಎನ್.ಎಲ್, ಸಹ-ಕಾರ್ಯದರ್ಶಿ ವಿದ್ಯಾರ್ಥಿ ವೇದಿಕೆ ವಾರ್ಷಿಕ ಕ್ರಿಯಾ ಯೋಜನೆಯ ವರದಿಯನ್ನು ಓದಿದರು. ಕು. ಅಂಕಿತಾ, ಸಹ-ಕಾರ್ಯದರ್ಶಿ ಇವರು ಉದ್ಘಾಟಕರ ಪರಿಚಯ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಎಂ.ಡಿ.ಎಫ್.ನ ಅಧ್ಯಕ್ಷರಾದ ಬಿ.ಆರ್. ಜಯಂತ್ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಹೆಚ್.ಎಂ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಡಿ.ಎಫ್., ಕೆ.ಎಂ. ಸೂರ್ಯನಾರಾಯಣ, ಉಪಾಧ್ಯಕ್ಷರು ಎಂ.ಡಿ.ಎಫ್., ಕೆ. ವೆಂಕಟೇಶ್, ಕವಲಕೋಡು, ಕೋಶಾಧ್ಯಕ್ಷರು ಎಂ.ಡಿ.ಎಫ್., ನಾಗೇಂದ್ರ, ವಿದ್ಯಾರ್ಥಿ ವೇದಿಕೆಯ ಕಾರ್ಯದರ್ಶಿ ಇವರುಗಳು ಉಪಸ್ಥಿತರಿದ್ದರು. ಕಿರಣ ಜಿ.ಎಂ. ದ್ವಿತೀಯ ವರ್ಷದ ಬಿ.ಇಡಿ ವಿದ್ಯಾರ್ಥಿ ಇವರು ಸರ್ವರಿಗೂ ವಂದನಾರ್ಪಣೆ ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...