Thursday, August 6, 2026
Thursday, August 6, 2026

ಕೆಎಸ್ಸಿಎ ಅಕಾಡೆಮಿ ಸಮರ್ ಕ್ಯಾಂಪ್ ಉದ್ಘಾಟನೆ

Date:

ಶಿವಮೊಗ್ಗದ KSCA ನವುಲೆ ಸ್ಟೇಡಿಯಂನಲ್ಲಿ ನಡೆದ KSCA ಅಕಾಡೆಮಿ ಸಮರ್ ಕ್ಯಾಂಪ್ ಉದ್ಘಾಟನಾ ಸಮಾರಂಭ ನಡೆಯಿತು.
ಈ ಕಾರ್ಯಕ್ರಮವನ್ನು ಶ್ರೀ ನಿಖಿಲ್ ಬಿ., ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಉದ್ಘಾಟಿಸಿದರು. ಅವರ ಗೌರವಾನ್ವಿತ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಈ ಸಮಾರಂಭದಲ್ಲಿ ಶ್ರೀ ಅವಿನಾಶ್ ವೈದ್ಯ, ಶ್ರೀ ಆರ್. ಪಿ. ನಾಗರಾಜ್, ಮಾಜಿ ವಲಯ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕಾಮತ್ ಎನ್., ಶ್ರೀ ಎಸ್. ಎಸ್. ಸುಕುಮಾರ್ ಪಟೇಲ್, ಮಾಜಿ ವಲಯ ಸಂಚಾಲಕರಾದ ಡಿ. ಆರ್ . ನಾಗರಾಜ್, ಶ್ರೀ ಸದಾನಂದ ಹೆಚ್.ಎಸ್., ಹಾಗೂ KSCA ಪದಾಧಿಕಾರಿಗಳು, ತರಬೇತುದಾರರು, ಪೋಷಕರು, ಕ್ಲಬ್ ಕಾರ್ಯದರ್ಶಿಗಳು, ಜೀವಮಾನ ಸದಸ್ಯರು, ಆಟಗಾರರು ಮತ್ತು ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಗಿ, ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟನೆ ನೆರವೇರಿತು. ನಂತರ ಹಸಿರು ಅಭಿಯಾನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಅಂಡರ್-14 ಬಾಲಕರು, ಅಂಡರ್-16 ಬಾಲಕರು, ಅಂಡರ್-19 ಬಾಲಕರು, ಅಂಡರ್-15 ಬಾಲಕಿಯರು ಹಾಗೂ ಅಂಡರ್-19 ಮಹಿಳಾ ವಿಭಾಗಗಳ ಸಮರ್ ಕ್ಯಾಂಪ್‌ಗಳಿಗೆ ಚಾಲನೆ ನೀಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jog Falls ಪ್ರತೀ ಶನಿವಾರ & ಭಾನುವಾರ ರಸ್ತೆ ಸಾರಿಗೆ ನಿಗಮದಿಂದಸಿಗಂದೂರು- ಜೋಗ ಪ್ರವಾಸಿ ಪ್ಯಾಕೇಜ್ ಘೋಷಣೆ.

Jog Falls ಪ್ರಸ್ತುತ ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ವಿಶ್ವವಿಖ್ಯಾತ ಜೋಗ್‌ಫಾಲ್ಸ್...

Shivamogga News ಥಣ್ಣಗಾಗುತ್ತಿರುವ ಸಚಿವಾಕಾಂಕ್ಷಿತನ..…ಶಿವಕೌಶಲ

Shivamogga News ರಾಜಕೀಯದಲ್ಲಿ ಸ್ಥಿರತೆ ಯಾವತ್ತಿಗೂ ನಿರೀಕ್ಷಿಸಲಾಗದು ಎಂಬ ಮುತ್ಸದ್ದಿಗಳ ಮಾತಿದೆ....