ಸಂಶೋಧನಾ ಬರಹ;
ದಿಲೀಪ್ ನಾಡಿಗ್. ಶಿವಮೊಗ್ಗ
ಕರ್ನಾಟಕದ ಗ್ರಾಮೀಣ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ಅನೇಕ ಹಳ್ಳಿಗಳು ಮಹತ್ವದ ಪಾತ್ರವಹಿಸಿವೆ. ಅಂತಹ ಹಳ್ಳಿಗಳಲ್ಲಿ ಹುರಳಿಹಳ್ಳಿ ಒಂದು. ಇದು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಪ್ರಾಚೀನ ಹಳ್ಳಿ.
ಈ ಹಳ್ಳಿಯ ಇತಿಹಾಸವು ಪ್ರಾಚೀನ ಕಾಲದ ಆಡಳಿತ, ಕೃಷಿ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯೊಂದಿಗೆ ಸಂಬಂಧ ಹೊಂದಿದೆ.
“ಹುರಳಿಹಳ್ಳಿ” ಎಂಬ ಹೆಸರಿನ ಮೂಲವನ್ನು ಸ್ಥಳೀಯ ಸಂಪ್ರದಾಯಗಳು ಮತ್ತು ಕೃಷಿ ಜೀವನಶೈಲಿಯೊಂದಿಗೆ ಸಂಬಂಧಿಸಲಾಗಿದೆ. “ಹುರಳಿ” (ಕುದುರೆಗಡಲೆ) ಎಂಬ ಬೆಳೆ ಈ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದುದರಿಂದ ಈ ಪ್ರದೇಶಕ್ಕೆ “ಹುರಳಿ + ಹಳ್ಳಿ” ಎಂಬ ಹೆಸರು ಬರಲು ಕಾರಣವಾಯಿತು.
ಇದು ಕೃಷಿ ಆಧಾರಿತ ಜೀವನದ ಸೂಚಕವಾಗಿದೆ.
ಈ ಪ್ರದೇಶದ ಪ್ರಾಚೀನ ಇತಿಹಾಸದತ್ತ ದೃಷ್ಟಿಹರಿಸೋಣ.
ಈ ಭಾಗವು ಪ್ರಾಚೀನ ಕಾಲದಲ್ಲಿ ಕದಂಬ, ಗಂಗ, ರಾಷ್ಟ್ರಕೂಟ ಮತ್ತು ಹೊಯ್ಸಳರ ಆಡಳಿತಕ್ಕೆ ಒಳಪಟ್ಟಿತ್ತು. ಈ ರಾಜಮನೆತನದ ಕಾಲದಲ್ಲಿ ಈ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣ, ಕೃಷಿ ಅಭಿವೃದ್ಧಿ ಮತ್ತು ಗ್ರಾಮ ವ್ಯವಸ್ಥೆ ಬಲವಾಗಿತ್ತು.
ಈ ಪ್ರದೇಶದ ಸುತ್ತಮುತ್ತ ಹಲವಾರು ಶಾಸನಗಳು ಮತ್ತು ದೇವಾಲಯ ಅವಶೇಷಗಳು ದೊರೆತಿರುವುದು ಈ ಭಾಗದ ಪುರಾತನತೆಯನ್ನು ಸೂಚಿಸುತ್ತದೆ.
ಕೆಲವು ಶಾಸನಗಳಲ್ಲಿ ಗ್ರಾಮಗಳ ದಾನ, ದೇವಾಲಯಗಳಿಗೆ ನೀಡಿದ ಭೂಮಿಗಳು ಮತ್ತು ಸ್ಥಳೀಯ ಆಡಳಿತದ ಮಾಹಿತಿ ದೊರಕುತ್ತದೆ.
ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ
ಹುರಳಿಹಳ್ಳಿಯಲ್ಲಿ ಪುರಾತನ ಶೈವ ಮತ್ತು ವೈಷ್ಣವ ದೇವಾಲಯಗಳ ಕುರುಹುಗಳನ್ನು ಕಾಣಬಹುದು.

ಈ ದೇವಾಲಯಗಳಲ್ಲಿ ಮಧ್ಯಯುಗೀನ ಕರ್ನಾಟಕದ ವಾಸ್ತುಶಿಲ್ಪದ ಕುರುಹುಗಳನ್ನು ಕಾಣಬಹುದು.
ಹುರಳಿಹಳ್ಳಿ ಒಂದು ಸಾಮಾನ್ಯ ಹಳ್ಳಿಯಷ್ಟೇ ಅಲ್ಲ; ಅದು ಕರ್ನಾಟಕದ ಗ್ರಾಮೀಣ ಇತಿಹಾಸ, ಕೃಷಿ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುವ ಒಂದು ಪ್ರಮುಖ ಸ್ಥಳವಾಗಿದೆ.
ಇಂತಹ ವೈಶಿಷ್ಟ್ಯ ಪೂರ್ಣ ಹೆಸರು ಹೊಂದಿರುವ
ಹುರುಳಿಹಳ್ಳಿಯು ಭದ್ರಾ ನದಿಯ ದಡದಲ್ಲಿರುವ ಉಂಬಳಿಬೈಲು(ಪ್ರಾಚೀನ ಹೆಸರು ಕದಂಬದ ಹಳ್ಳಿ) ಗ್ರಾಮದ ಕಾಡಂಚಿನಲ್ಲಿದ್ದು ಇಲ್ಲಿ ಹೊಯ್ಸಳರ ವೀರಬಲ್ಲಾಳನ ಕಾಲದಲ್ಲಿ ಕದಂಬದೇವ, ದೇವಿಯ ಆರಾಧನೆಯು ನಡೆಯುತ್ತಿದ್ದ ಕುರುಹುಗಳು ಶಾಸನಗಳ ಮೂಲಕ ಕಾಣಸಿಗುತ್ತವೆ.

ಇಂತಹ ಒಂದು ಅಪರೂಪದ 12-13 ನೇ ಶತಮಾನಕ್ಕೆ ಸೇರಿದ ಶಾಸನವೊಂದನ್ನು ಹುರಳಿಹಳ್ಳಿ ಗ್ರಾಮಸ್ಥರ, ಯುವಕರ ಸಹಾಯದಿಂದ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆಯ ಅಧ್ಯಕ್ಷರು ಡಾ. ಎಸ್.ಜಿ ಸಾಮಕ್, ಕಾರ್ಯದರ್ಶಿ ದಿಲೀಪ್ ನಾಡಿಗ್ ಪತ್ತೆ ಹಚ್ಚಿದ್ದು ಇವರೊಂದಿಗೆ ವೇದಿಕೆಯ ಸದಸ್ಯರಾದ ಶ್ರೀ ಆದಿತ್ಯಪ್ರಸಾದರು ಸಹಾಯವನ್ನು ನೀಡಿದ್ದಾರೆ.
