Sunday, August 2, 2026
Sunday, August 2, 2026

Klive Special Article ಅಕ್ಷಯ ಫಲಗಳ ಸಂಕೇತ,ಅಕ್ಷಯ ತೃತೀಯ

Date:

ಲೇ: ಎನ್.ಜಯಭೀಮ್ ಜೊಯ್ಸ್. ಶಿವಮೊಗ್ಗ.

Klive Special Article ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ
ದಿನ ಬರುವ ತೃತೀಯ ತಿಥಿಯನ್ನು “ಅಕ್ಷಯತೃತೀಯ”ಎಂದು ಕರೆಯಲಾಗುತ್ತದೆ.
ಅಕ್ಷಯ ತೃತೀಯ ವನ್ನು ಶುಭದ ಸಂಕೇತದ
ದಿನವನ್ನಾಗಿ ಪರಿಗಣಿಸಲಾಗಿದೆ.
ಇಂದಿನ ದಿನ ಮಾಡುವಯಾವುದೇಶುಭಕೆಲಸಗಳು
ಯಾವುದೇ ಅಡಚಣೆಯಿಲ್ಲದೇಸಿದ್ಧಿಯಾಗುವುವು ಎಂಬ ನಂಬಿಕೆ ಇದೆ.
ಈ ದಿನದಂದು ವಿವಾಹವಾಗುವ ದಂಪತಿಗಳ ದಾಂಪತ್ಯ ಹೆಚ್ಚು ಅನ್ಯೋನ್ಯತೆಯಿಂದಕೂಡಿರುತ್ತದೆ ಎಂಬುದು ಜನಜನಿತವಾಗಿದೆ.
ಹಿಂದೂ ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಈ ದಿನ ವೇದವ್ಯಾಸರು ವಿಘ್ನನಿವಾರಕನಾದ ಗಣೇಶನಿಂದ ಮಹಾಭಾರತ ವನ್ನು ಬರೆಸಿದರೆಂತ ಪ್ರತೀತಿಇದೆ.ಹಲವರನಂಬಿಕೆಯಪ್ರಕಾರಇಂದು
ಚಿನ್ನ,ಬೆಳ್ಳಿಅಥವಇತರೆಯಾವುದೇಅಮೂಲ್ಯವಾದವಸ್ತುಗಳನ್ನುಖರೀದಿಸಿದರೆಸಂಪತ್ತು”ಅಕ್ಷಯ”ವಾಗುತ್ತದೆಂಬ ನಂಬಿಕೆ ಬೇರೂರಿದೆ. ಬೆಳ್ಳಿ,ಬಂಗಾರವನ್ನು ಕೊಂಡುಕೊಳ್ಳವುದರಿಂದ ಮಾತ್ರವೇ ಸಂಪತ್ತು ಅಕ್ಷಯವಾಗುತ್ತೆ ಎಂತ ಯಾಕೆ ತಿಳಿದುಕೊಳ್ಳಬೇಕು?.ಈ ದಿನ ಒಳ್ಳೆಯ ಪುಸ್ತಕ ಗಳನ್ನುಖರೀದಿಮಾಡಿಜ್ಞಾನಸಂಪತ್ತನ್ನೂಹೆಚ್ಚುಮಾಡಿಕೊಳ್ಳಬಹುದಾಗಿದೆ
.ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡು
ವುದರಿಂದಲೂಪುಣ್ಯವನ್ನುಸಂಚಯಮಾಡಿಕೊಳ್ಳಬಹುದು.
ದೇಹ ಸಂಪತ್ತಿರುವವರು ಸಹಾಯದ ಅಗತ್ಯ
ವಿರುವವರಿಗೆ ಕೈಲಾದ ಸಹಾಯವನ್ನುಮಾಡಿ ಮನಸ್ಸಂತೋಷವನ್ನು”ಅಕ್ಷಯ”ಮಾಡಿಕೊಳ್ಳ
ಬಹುದು.
ತಾವು ಆರಾಧಿಸುವದೇವರಿಗೆಭಕ್ತಿಯಿಂದಪ್ರಾರ್ಥನೆ
ಮಾಡಿಕೊಂಡರೆ ದೇವರು ಕರುಣೆಯನ್ನು ಅಕ್ಷಯ
ವಾಗಿಅನುಗ್ರಹಿಸುತ್ತಾನೆಂದುತಿಳಿದುಕೊಂಡರೆ ಅಕ್ಷಯ ತೃತೀಯದ ದಿನಕ್ಕೆ ಹೆಚ್ಚಿನ ಮಹತ್ವ ಬರುತ್ತದೆ.
ಪಾಂಡವರಿಗೂಅಕ್ಷಯತೃತೀಯದಿನಕ್ಕೂನಂಟಿದೆ.ಪಾಂಡವರು ಸೂರ್ಯದೇವರಿಂದ ಅಕ್ಷಯ
ಪಾತ್ರೆಪಡೆದದಿನ.
ಕೃಷ್ಣ-ಸುಧಾಮರುಗುರುಕುಲದಲ್ಲಿಒಟ್ಟಿಗೇಕಲಿತವರು.ಅವರಿಬ್ಬರೂ ಆತ್ಮೀಯ ಗೆಳೆಯರಾಗಿದ್ದರು.ಅವರಿಬ್ಬರ ಸ್ನೇಹ ಎಷ್ಟು ಗಾಡವಾಗಿತ್ತೆಂಬುದನ್ನು ನಾವೆಲ್ಲರೂ ಕೇಳಿದ್ದೇವೆ.
Klive Special Article ತೀವ್ರ ಬಡತನ ಅನುಭವಿಸುತ್ತಿದ್ದ ಸುಧಾಮನಿಗೆ ಅವನ ಹೆಂಡತಿ ಸ್ನೇಹಿತ ಶ್ರೀಕೃಷ್ಣನ ಬಳಿಗೆ ಹೋಗಿ ಏನಾದರೂ ಕೆಲಸ ಸಿಗುವುದೇನೋ, ಕೇಳಿಕೊಂಡು ಬರಲು ಕಳಿಸುತ್ತಾಳೆ.
ಸ್ನೇಹಿತನನ್ನುನೋಡಲುಬರಿಗೈಯಲ್ಲಿಹೋಗಲಾರದೇ,ಮನೆಯಲ್ಲಿ ಇದ್ದ ಒಂದು ಹಿಡಿಅವಲಕ್ಕಿಯನ್ನೇ ಒಂದು ಬಟ್ಟೆಯಲ್ಲಿ ಗಂಟುಕಟ್ಟಿಕೊಂಡು ಕೈಯಲ್ಲಿ ಹಿಡಿದುಕೊಂಡುಹೋಗುತ್ತಾನೆ.ಶ್ರೀಕೃಷ್ಣನುಸುಧಾಮನನ್ನುನೋಡಿದಕೂಡಲೇಬಂದು ಪ್ರೀತಿಯಿಂದ ಆಲಿಂಗನ ಮಾಡುತ್ತಾನೆ.ಸುಧಾಮನ ಕೈಯಲ್ಲಿರುವ ಅವಲಕ್ಕಿ ಗಂಟನ್ನು ತಾನೇ ಬಿಚ್ಚಿತಿಂದು ಬಹಳ
ಸಂತೋಷಪಡುತ್ತಾನೆ.
ಬಹಳ ದಿನಗಳ ಬಳಿಕ ಭೆಟ್ಟಿಯಾದ ಸ್ನೇಹಿತರು ಒಟ್ಟಿಗೇ ಕಾಲಕಳೆಯುತ್ತಾರೆ.ಸುಧಾಮನು ಶ್ರೀಕೃಷ್ಣನಿಂದ ಬೀಳ್ಕೊಂಡು ಮನೆಗೆ ಹಿಂದಿರುಗಿ
ಬರುವಾಗಲೇ ಶ್ರೀಕೃಷ್ಣನ ಅನುಗ್ರಹದಿಂದ ಅವನ ಬಡತನ ನಿವಾರಣೆಯಾಗಿರುತ್ತದೆ.ಇದು ನಡೆದದ್ದೂ ಅಕ್ಷಯತೃತೀಯ ದಿನದಂದೇ.
ಶ್ರೀಮನ್ನಾರಾಯಣನುನೆಲೆಸಿರುವಬದರೀಕ್ಷೇತ್ರದಲ್ಲಿ ಅಕ್ಷಯತೃತೀಯದಂದುಯಾತ್ರಾರ್ಥಿಗಳಿಗೆ ಪ್ರವೇಶಮಾಡಲು ದ್ವಾರವನ್ನುತೆಗೆಯುವದಿವಸವೂ ಹೌದು.
ಶ್ರೀಶಂಕರಭಗವತ್ಪಾದಕರು”ಶ್ರೀಕನಕಧಾರಸ್ತೋತ್ರ”ವನ್ನು ರಚಿಸಿದ್ದೂ ಅಕ್ಷಯತೃತೀಯ ದಿನವೇ ಆಗಿರುತ್ತೆ.
ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮೊಳಗಿಸಿದ ಜಗಜ್ಯೋತಿ ಬಸವಣ್ಣನವರು ಜನಿಸಿದ್ದೂ ಸಹ ಈ ದಿನವೇ ಆಗಿದೆ.
ಈ ದಿನದಂದು ಪೂಜೆ,ಜಪ,ತಪ,ಹವನ ಹೋಮಗಳನ್ನುನೆರವೇರಿಸುವುದರಿಂದದೊರೆಯುವ ಪುಣ್ಯ ಅಕ್ಷಯವಾಗುತ್ತದೆಂಬ ನಂಬಿಕೆ ಇದೆ.
ಈ ದಿನ ಒಂದು ಪಟ್ಟು ದಾನ ಮಾಡಿದರೆಅದರ ಹತ್ತು ಪಟ್ಟು ಫಲ ಬರುವುದೆಂದುತಿಳಿದವರು ಹೇಳುತ್ತಾರೆ.ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ “ಅನ್ನದಾನ”.ಈದಿನಅನ್ನದಾನ ಮಾಡುವದರಿಂದ ಬಹಳ ಪುಣ್ಯಲಭಿಸುತ್ತದೆ ಎಂಬ ಪ್ರತೀತಿ ಇದೆ.ತಾವು ಕಲಿತಿರುವ ವಿದ್ಯೆಯನ್ನು ,ವಿದ್ಯಾರ್ಥಿಗಳಿಗೆ ಯಾವುದೇ ಫಲಾಪೇಕ್ಷೆಯನ್ನು ಬಯಸದೇಹೇಳಿಕೊಡುವವಿದ್ಯೆಯೂ”ವಿದ್ಯಾದಾನ”ವೆನಿಸುತ್ತದೆ.ಇದರಿಂದಲೂಪುಣ್ಯಸಂಚಯನವಾಗುತ್ತದೆ.
ಸಂಕಷ್ಟದಸಂದರ್ಭದಲ್ಲಿ ತಮ್ಮಕೈಲಾಗುವಸೇವೆ
ಯನ್ನುಕಷ್ಟದಲ್ಲಿರುವ ಬಂಧುಗಳಿಗೆ ಮಾಡಿದರೆ
ಅಕ್ಷಯತೃತೀಯ ದಿನದ ಆಚರಣೆ ಅರ್ಥಪೂರ್ಣವಾಗುವುದರಲ್ಲಿ ಸಂದೇಹವಿಲ್ಲ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...