ನ್ಯೂಸ್ 18 ನೆಟ್ ವರ್ಕ್ ಮತ್ತು Ad6 advertising ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 4ರ ಶನಿವಾರದಂದು ಶಿವಮೊಗ್ಗದ ಪೊಲೀಸ್ ಸಭಾಭವನದಲ್ಲಿ ನಡೆದ ವಿದ್ಯಾ ಸಂಗಮ ಕಾರ್ಯಕ್ರಮದಲ್ಲಿ ಎಂಡಿಎಫ್ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ರಾಜ್ಯದ ನಾನಾ ಭಾಗಗಳಿಂದ ಸುಮಾರು 35ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು. ವಿವಿಧ ಪದವಿಗಳ , ಉನ್ನತ ಶಿಕ್ಷಣದ ಸಂಸ್ಥೆಗಳು ಪ್ರತಿನಿಧಿಗಳು ಭಾಗವಹಿಸಿ ಸ್ನಾತಕೋತ್ತರ ಪದವಿ ಶಿಕ್ಷಣದ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನದ ವಿದ್ಯಾರ್ಥಿಗಳಿಗೆ ಸಿಇಟಿ ಮಾಕ್ ಟೆಸ್ಟ್ ನಡೆಸಲಾಯಿತು. ಎಲ್ ಬಿ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಹಾಲಿ ಎಂ ಡಿ ಎಫ್ ನಿರ್ದೇಶಕರಾಗಿರುವ ನ್ಯೂಸ್ 18 ನೆಟ್ವರ್ಕ್ ನ ಎಡಿಟೋರಿಯಲ್ ಚೀಫ್ ದಕ್ಷಿಣ ಭಾರತದ ಮುಖ್ಯಸ್ಥ ಡಿ.ಪಿ.ಸತೀಶ್ , ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ ಎಚ್ ಎಮ್ ಶಿವಕುಮಾರ್ ಹಾಗೂ ಇತರ ಪದಾಧಿಕಾರಿಗಳು ಮತ್ತು ಕಾಲೇಜಿನ ಪ್ರಾಚಾರ್ಯರಾದ ಡಾ ಜಗದೀಶ್ ಎಂ ಭಂಡಾರಿ ಅವರುಗಳ ಮಾರ್ಗದರ್ಶನದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನ್ಯೂ ಸ್ 18 ಜಿಲ್ಲಾ ವರದಿಗಾರ ವಿನಯ್ ಪುರದಾಳು ಉಪನ್ಯಾಸಕ ವರ್ಗದ ಶ್ರೀಮತಿ ರೇಖಾ ಜಿ, ಕುಮಾರಿ ಶಾರಿಕಾ ಮತ್ತು ಅನುಷಾ ಭಾಗವಹಿಸಿದ್ದರು.
ಶಿವಮೊಗ್ಗದಲ್ಲಿ ವಿಶಿಷ್ಟವಾಗಿ ನಡೆದ ವಿದ್ಯಾ ಸಂಗಮ
Date:
