Wednesday, September 16, 2026
Wednesday, September 16, 2026

ಎಲ್ಲಾ ಯುವಜನರೂ ಸ್ವಪ್ರೇರಣೆಯಿಂದ ರಕ್ತನೀಡಿ, ಪವಿತ್ರ ರಕ್ತದಾನಿಗಳಾಗಿ- ಡಿ.ಆರ್.ಸಂದೀಪ್.

Date:

ರಕ್ತದಾನ ಶ್ರೇಷ್ಠದಾನ ರಕ್ತದಾನ ಪವಿತ್ರದಾನ ರಕ್ತದಾನಕ್ಕಿಂತ ಬೇರೆ ದಾನ ಮತ್ತೊಂದಿಲ್ಲ ಎಂದು ಶಂಕರ್ ನಾರಾಯಣ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ನ ಅಭಿಯಂತರರಾದ ಸಂದೀಪ್ ಡಿಆರ್ ನುಡಿದರು. ಅವರು ಜೋಗದ ಶಂಕರ್ ನಾರಾಯಣ ಕನ್ಸ್ಟ್ರಕ್ಷನ್ ಪ್ರವೇಟ್ ಲಿಮಿಟೆಡ್ ಶಿವಮೊಗ್ಗ ರೆಡ್ ರಕ್ತ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಚಾಲನೆ ನೀಡಿ ಮಾತನಾಡಿದರು. ಇಂದು ಸಕಾಲದಲ್ಲಿ ರಕ್ತ ಸಿಗದೇ ಸಾಕಷ್ಟು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಯುವ ಯುವತಿಯರು ಮುಂದೆ ಬಂದು ರಕ್ತದಾನ ಮಾಡಿ ಪವಿತ್ರ ರಕ್ತದಾನಿಗಳಾಗಬೇಕೆಂದು ಕರೆ ನೀಡಿದರು 120 ಬಾರಿ ರಕ್ತದಾನ ಮಾಡಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಧರಣೇಂದ್ರ ದಿನಕರ್ ಅವರು ರಕ್ತದಾನದಿಂದ ದೀರ್ಘಾಯುಷ್ಯವುಳ್ಳವರಾಗಬಹುದು ಹಾಗೂ ಸದಾ ಆರೋಗ್ಯವಂತರಾಗಿ ಬದುಕಬಹುದು ಹಾಗೆ ಪ್ರತಿನಿತ್ಯ ನಾವು ಲವಲವಿಕೆಯಿಂದ ಇರಲು ಸಾಧ್ಯ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಅಭಿಯಂತರರಾದ ಉಮಾಪತಿ ಅವರು ಮಾತನಾಡುತ್ತಾ ಇಂದು ಮೂಢನಂಬಿಕೆಯಿಂದ ಸಾಕಷ್ಟು ಜನ ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ ರಕ್ತದಾನ ಮಾಡುವುದರಿಂದ ಲಾಭವೇ ಹೆಚ್ಚು ಹೊರೆತು ನಮಗೆ ಯಾರಿಗೂ ನಷ್ಟವಾಗುವುದಿಲ್ಲ ನಮ್ಮ ದೇಹ ಮನಸ್ಸು ಸದಾ ಸದೃಢವಾಗಿರುತ್ತದೆ ಎಂದು ಕರೆ ನೀಡಿದರು. ಮತ್ತೊಬ್ಬ ಮುಖ್ಯ ಅತಿಥಿಗಳಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಗದೀಶ್ ಅವರು ಮಾತನಾಡುತ್ತಾ ಈ ದಿನ ಸಾಕಷ್ಟು ಜನ ಹೊರ ರಾಜ್ಯದ ಕಾರ್ಮಿಕರು ರಕ್ತದಾನ ಮಾಡುವುದರ ಮುಖಾಂತರ ಮಾನವೀಯತೆಯನ್ನು ಮೆರೆದಿದ್ದಾರೆ ಸದೃಢವಾದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ರಕ್ತದಾನ ಒಂದು ಶ್ರೇಷ್ಠ ಕಾರ್ಯವಾಗಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮ್ಯಾನೇಜರ್ ಸುರೇಶ್. ಶೃತಿ ಎಸ್ ಕೆ. ಶಿವಮೊಗ್ಗ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕಿನ ಪದಾಧಿಕಾರಿಗಳು. ರಕ್ತದಾನಿಗಳು ಉಪಸ್ಥಿತರಿದ್ದು 60ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ದಾನಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...