Friday, July 24, 2026
Friday, July 24, 2026

H.S. Sundaresh ಅಂತರ್ಜಲ ಕಾಪಿಡಲು ಶಿವಮೊಗ್ಗದ ಕೆರೆಗಳ ಅಭಿವೃದ್ಧಿ ನಮ್ಮ ಗುರಿ- ಹೆಚ್.ಎಸ್.ಸುಂದರೇಶ್

Date:

H.S. Sundaresh ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಅವರು ಸಾಗರ ರಸ್ತೆಯ ಶಿವಪ್ಪನಾಯಕ ಕೆರೆಯ ಜೀರ್ಣೋದ್ಧಾರ ಸಂಬಂಧ ಸ್ಥಳ ಪರಿಶೀಲನೆಗೆ ಅಧಿಕಾರಿ ವರ್ಗದವರೊಂದಿಗೆ ಇಂದು, (ತಾ. 17-2-26) ರಂದು ಭೇಟಿ ನೀಡಿದ್ದರು.

ಶಿವಮೊಗ್ಗ ಮತ್ತು ಸುತ್ತಮುತ್ತ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕೆರೆಗಳ ಅಭಿವೃದ್ಧಿ ಪ್ರಸ್ತಾವನೆ ಇದೆ. ಹೀಗಾಗಿ ಸದ್ಯ ಸಾಗರ ರಸ್ತೆಯಲ್ಲಿ ಸಿರಿಮಲ್ಲಿಗೆ ವಸತಿ ಸಂಘಕ್ಕೆ ಹೊಂದಿಕೊಂಡಂತೆ ಇರುವ ಕೆರೆಯ ಅಭಿವೃದ್ಧಿಯ ಯೋಜನೆಯೂ ಸೇರಿದೆ ಎಂದು ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ,ಸಿರಿಮಲ್ಲಿಗೆ ವಸತಿ ಸಂಘದ ಅಧ್ಯಕ್ಷರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಸಿರಿಮಲ್ಲಿಗೆ ವಸತಿ ಸಂಘದ ಜಯಕಮಲ್ ಮತ್ತು ಮಲ್ಲಿಗೆ ನಗರ ಬಡಾವಣೆಗಳ ಪಾರ್ಕ್
ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ಹಂತಕ್ಕೆ ಹೋಗಿದೆ ಎಂದು ಹೇಳಿದರು.
ಆದಷ್ಟು ಶೀಘ್ರ ಕೆರೆ ಮತ್ತು ಪಾರ್ಕ್ ಕಾಮಗಾರಿ ಆರಂಭಿಸಿ, ಈ ಪಾರ್ಕ್ ಮತ್ತು ಕೆರೆ ಅಭಿವೃದ್ಧಿಯಿಂದ ಸುತ್ತಲ ಹತ್ತು ಬಡಾವಣೆಯಲ್ಲಿ ವಾಸಿಸುವ ಸಾರ್ವಜನಿಕರಿಗೆ ವಿನೋದ ವಿಹಾರ ತಾಣವಾಗಿ ಕಂಗೊಳಿಸುವಲ್ಲಿ ಸೂಡಾ ಕೊಡುಗೆಯಾಗಿ ಇಲ್ಲಿ ವಸತಯಿರುವ ಸಮುದಾಯಕ್ಕೆ ನೀಡಲಿ, ಸುಂದರೇಶ್ ಅವರ ಅಧಿಕಾರಾವಧಿಯಲ್ಲೇ ಈ ಜನೋಪಯೋಗಿ ಕಾರ್ಯ ಪೂರ್ಣವಾಗುವಂತಾಗಲಿ ಎಂದು ಸಿರಿಮಲ್ಲಿಗೆ ವಸತಿ ಸಂಘದ ಅಧ್ಯಕ್ಷ ಡಾ.ಸುಧೀಂದ್ರ ಹಾರೈಸಿ ಮಾತನಾಡಿದರು.

H.S. Sundaresh ಸಿರಿಮಲ್ಲಿಗೆ ವಸತಿ ಸಂಘದ ಖಜಾಂಚಿ ಮಹೇಶ್ ಯಲಿಗಾರ್, ಹಿರಿಯ ಸಲಹೆಗಾರರುಗಳಾದ ಡಿ.ಎನ್.ಶ್ರೀಧರ ರಾವ್
ನಾಡಿಗ್ ಮತ್ತು ಶಿವಾಜಿರಾವ್, ಸೂಡಾ ಇಂಜಿನಿಯರ್ ಗಂಗಾಧರ ಸ್ವಾಮಿ ಮುಂತಾದ ಅಧಿಕಾರಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನೀಟ್ ಗೊಂದಲ, ಪ್ರತಿಭಟನೆ : ರಾಷ್ಟ್ರವಿರೋಧಿ ಶಕ್ತಿಗಳ ಕರಾಳ ತಂತ್ರ- ಎಸ್.ಎನ್.ಚನ್ನಬಸಪ್ಪ

S.N. Channabasappa ದೆಹಲಿಯಲ್ಲಿ ಜಿರಳೆ ಪಕ್ಷದ ಹೆಸರಿನಲ್ಲಿ ನಡೆದದ್ದು ವಿದ್ಯಾರ್ಥಿಗಳ ಹೋರಾಟ...

K. J.George ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಹೋಟೆಲ್ ಗಳು, ಆತಿಥ್ಯ ಕೇಂದ್ರಗಳು ಹಂತಹಂತವಾಗಿ ಉನ್ನತೀಕರಣ : ಸಚಿವ ಕೆ.ಜೆ.ಜಾರ್ಜ್

K.J. George ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ,...

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...