Thursday, September 10, 2026
Thursday, September 10, 2026

ಇಂದಿನ ಕವಿತೆ… ಕವಿ: ಡಾ. ರವಿ. ಎಮ್. ಸಿದ್ಲಿಪುರ

Date:

ಯಾರೋ ಗೀಚಿದ ಹಳೆಯ ನಕ್ಷೆಯಲಿ
ನೆಲದ ಒಡಲು ಸೀಳಿ ಹೋಗಿದೆ,
ತನ್ನ ಸೀಮೆಯ ದಾಟದಂತೆ ಗಾಳಿಗೆ
ಸಂಪ್ರದಾಯದ ಬೇಲಿ ಬಿದ್ದಿದೆ.

ಒಂದೇ ಮಣ್ಣಿನಲಿ ಮೊಳೆತ ಎರಡು ಕುಡಿಗಳು
ಬಣ್ಣ ಬೆರೆಸಿ ಅರಳಲೆಂದು ಹಂಬಲಿಸಿದರೆ,
ತಾಯಿ ಬೇರೇ ಸರ್ಪವಾಗಿ ಎದೆಯುಬ್ಬಿಸಿ
ಹಸಿರು ಉಸಿರನ್ನೇ ಹಿಸುಕಿ ನಕ್ಕಿದೆ.

ಬಿಳಿ ಬಟ್ಟೆಯ ಮಡಿಕೆ ಮಲಿನವಾಗಬಾರದೆಂದು
ಕೆಂಪು ರಕ್ತವನ್ನೇ ಸುರಿದು ತೊಳೆದವರು,
ಮರ್ಯಾದೆಯ ಮುರುಕು ಪೇಟದ ಅಡಿಯಲ್ಲಿ
ತಮ್ಮದೇ ಕುಡಿಯ ಹೆಣವ ಹೂತಿಟ್ಟರು.

ಮನೆಯ ಹಜಾರದಲ್ಲಿ ಈಗ ನೀರವ ಮೌನ
ಸಿಂಹಾಸನವೇರಿ ವಿಜೃಂಭಿಸುತ್ತಿದೆ,
ಗೌರವದ ಹಳೆಯ ಗೋಡೆಗಳ ಮೇಲೆ
ಕಂದಮ್ಮಗಳ ಆರ್ತನಾದ ಚಿತ್ರವಾಗಿ ಉಳಿದಿದೆ.

ಜಾತಿಯ ಜೇಡರಬಲೆಯಲ್ಲಿ ಸಿಲುಕಿದ ಕನಸು
ರೆಕ್ಕೆ ಬಡಿದು ಬಡಿದು ಸುಸ್ತಾಗಿದೆ,
ಪ್ರೀತಿ ಸತ್ತ ಸಮಾಧಿಯ ಮೇಲೆ ನಿಂತು
ಜಗವಿದು ಇನ್ನೂ ‘ಗೌರವ’ದ ಪಾಠ ಓದಿದೆ..

ಡಾ. ರವಿ ಎಂ. ಸಿದ್ಲಿಪುರ, ಇವರು ಶಿವಮೊಗ್ಗೆಯವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ., ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಮತ್ತು ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಸಂಶೋಧನೆಗೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರ ಲೇಖನಗಳು ವಿವಿಧ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಪರ್ಯಾಯ’, ‘ವಿಮರ್ಶೆ ಓದು’ ಮತ್ತು ‘ಶಾಸನ ಓದು’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವವಿರುವ ಇವರು, ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...