Wednesday, August 5, 2026
Wednesday, August 5, 2026

Lions Club ಉಜ್ಜಯಿನಿಪುರ ಆರೋಗ್ಯಕೇಂದ್ರದಲ್ಲಿ ಉಚಿತ ನೇತ್ರ ತಪಾಸಣೆ, 68 ಮಂದಿಗೆ ಉಚಿತ ಕನ್ನಡಕ ವಿತರಣೆ

Date:

Lions Club ಭದ್ರಾವತಿ ಜಿ.ಪಂ., ತಾ.ಪಂ., ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ ಶಿಬಿರವನ್ನು ಭದ್ರಾವತಿಯ ಉಜ್ಜಯಿನಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಶಿಬಿರದಲ್ಲಿ ಭದ್ರಾವತಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದ ಸುಮಾರು 215 ಮಂದಿ ಜನರು ನೇತ್ರ ತಪಾಸಣೆಗೆ ಹಾಜರಾಗಿದ್ದು, ನೇತ್ರ ತಜ್ಞರ ತಂಡದಿಂದ ಸಮಗ್ರ ದೃಷ್ಟಿ ಪರೀಕ್ಷೆ ನಡೆಯಿತು. ತಪಾಸಣೆಯಲ್ಲಿ 58 ಮಂದಿ ರೋಗಿಗಳು ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಅವರಿಗೆ ಶೀಘ್ರದಲ್ಲೇ ಶಿವಮೊಗ್ಗ ಶಂಕರ ಐ ಕೇರ್ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆ ವ್ಯವಸ್ಥೆ ಮಾಡಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದರು. ಜೊತೆಗೆ ದೃಷ್ಟಿದೋಷ ಹೊಂದಿದ್ದ 68 ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದ್ದು, ಇದರಿಂದ ಅವರು ಉತ್ತಮ ದೃಷ್ಟಿ ಹೊಂದಲು ಸಹಾಯವಾಯಿತು. ಲಯನ್ ನಾಗರಾಜ ಶೆಟ್, ಲಯನ್ ದರ್ಶನ ಜಿ.ಪಿ. ಲಯನ್ ನಟರಾಜ್ ಬಿ. ಲಯನ್ ಕಾರ್ತಿಕ್ ಎ.ಎನ್. ಝೆನ್ ಅಧ್ಯಕ್ಷರು ಭಾಗವಹಿಸಿ ಶಿಬಿರದ ಕಾರ್ಯ ವೈಖರಿ ಮೆಚ್ಚಿದರು. ಅಧ್ಯಕ್ಷ ಲಯನ್ ನಾಗರಾಜ ಶೆಟ್ ಅವರು ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ಲಯನ್ಸ್ ಕ್ಲಬ್ ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿ ಮಾತನಾಡಿದರು.

ಲಯನ್ ಕಾರ್ತಿಕ್ ಎ.ಎನ್. ಝೆನ್ ಅಧ್ಯಕ್ಷರು ಅವರು ಉಚಿತ ನೇತ್ರ ಶಿಬಿರಗಳ ಮಹತ್ವ ತಿಳಿಸಿದರು. ಈ ವರ್ಷ ಲಯನ್ಸ್ ಜಿಲ್ಲೆ ೩೧೭ಅ ಯಲ್ಲಿ ೩೦೦೦ ಕ್ಕೂ ಹೆಚ್ಚು ಉಚಿತ ಕನ್ನಡಕಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಘೋಷಿಸಿ ದರು. ಈ ಶಿಬಿರದ ಯಶಸ್ವಿ ಸಂಯೋ ಜನೆಯನ್ನು ಲಯನ್ ನಂದೀಶ್ ಎನ್.ಟಿ. (ಜಿಲ್ಲಾ ಸಂಯೋಜಕ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ, ಜಿಲ್ಲೆ ೩೧೭) ಅವರು ಶಿವಮೊಗ್ಗ ಆಪ್ಟಿಕಲ್ಸ್ ಸಹಯೋಗದೊಂದಿಗೆ ಸಮರ್ಪಕವಾಗಿ ನಿರ್ವಹಿಸಿದರು. ಲಯನ್ ನಂದೀಶ್ ಎನ್.ಟಿ. ಜಿಲ್ಲಾ ಸಂಯೋಜಕರು, ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga “ಭಾರತ್ ಜೋಡೋ” ಯೋಜನೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ: ಪ್ರಭುಲಿಂಗ ಕವಳಿಕಟ್ಟಿ

DC Shivamogga ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ-ಸಾಮಾಜಿಕ...

B.Y. Raghavendra ಕೇಂದ್ರದ ಅಟಲ್ ಪಿಂಚಣಿ ಯೋಜನೆಗೆಶಿವಮೊಗ್ಗ ಜಿಲ್ಲೆಯಲ್ಲಿ ಗಮನಾರ್ಹ ಸ್ಪಂದನ- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೂ ವೃದ್ಧಾಪ್ಯದಲ್ಲಿ ಆರ್ಥಿಕ...

S. N. Channabasappa ಶಿವಮೊಗ್ಗ ಸಾಂಸ್ಕೃತಿಕ ರಾಜಧಾನಿ ಎಂಬ ಪ್ರಸಿದ್ಧಿಗೆ ಇಲ್ಲಿನ ಸಹೃದಯರೇ ಕಾರಣ- ಕಾ.ವೆಂ‌.ಶ್ರೀ.

S. N. Channabasappa "ಶಿವಮೊಗ್ಗ ನಗರದ ಜೀವನಾಡಿ ಹಾಗೂ ಸಮೃದ್ಧಿಯ ಸಂಕೇತವಾಗಿ...