Wednesday, August 5, 2026
Wednesday, August 5, 2026

ಸಾಮೂಹಿಕ ಮಾಧ್ಯಮಗಳು ಸಾಮಾಜಿಕ ಸುವ್ಯವಸ್ಥೆಗೂ ಸಾಧನವಾಗಬೇಕು- ಡಾ.ಹೆಚ್.ಬಿ.ಮಂಜುನಾಥ್.

Date:

ಸಮೂಹ ಮಾಧ್ಯಮಗಳು ಕೇವಲ ಮಾಹಿತಿ ಮನರಂಜನೆಗೆ ಬಳಕೆಯಾಗದೆ ಸಾಮಾಜಿಕ ಸುವ್ಯವಸ್ಥೆಗೆ ಸಾಧನವಾಗಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಆಶಯ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಸಮಾಜಶಾಸ್ತ್ರ ಉಪನ್ಯಾಸಕರುಗಳಿಗಾಗಿ ಏರ್ಪಾಡಾಗಿದ್ದ ಪುನಶ್ಚೇತನ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ‘ಸಾಮಾಜಿಕ ವ್ಯವಸ್ಥೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ’ ಎಂಬ ವಿಷಯವಾಗಿ ಮಾತನಾಡುತ್ತಾ ವ್ಯಕ್ತಿ ಗುಂಪು ಹಾಗೂ ಸಂಸ್ಥೆಗಳ ನಡುವಿನ ರಚನಾತ್ಮಕ ಸಂಬಂಧಗಳಿಂದ ಆಗುವ ಜಾಲಕ್ಕೆ ಸಮೂಹ ಮಾಧ್ಯಮಗಳು ಪೂರಕವಾಗಿ ಸ್ಪಂದಿಸಬೇಕಿದೆ, ಇದು ಸಮಾಜದ ಸುಸಂಘಟಿತ ಕಾರ್ಯನಿರ್ವಹಣೆಗೆ ಅವಶ್ಯ, ಈ ಪ್ರಕ್ರಿಯೆಯಲ್ಲಿ ಅನೂಚಾನವಾಗಿ ಬಂದ ನಂಬಿಕೆಗಳು ರೂಢಿಗಳಿಗೆ ಘಾಸಿಯಾಗದಂತೆ ನಾಗರೀಕತೆ ಸಂಸ್ಕೃತಿ ಹಾಗೂ ಸಂಸ್ಕಾರಗಳ ಮಹತ್ವವನ್ನು ಮನದಟ್ಟು ಮಾಡುವ ಮೂಲಕ ಕುಟುಂಬ ಸಮುದಾಯ ಊರು ಗ್ರಾಮ ನಗರ ದೇಶ ಪ್ರಪಂಚ ಹಂತದವರೆಗೂ ವ್ಯವಸ್ಥೆಯ ಸುಧಾರಣೆಯಲ್ಲಿ ಸಮೂಹ ಮಾಧ್ಯಮಗಳ ಬಳಕೆಯಾಗಬೇಕಿದೆ ಎಂಬುದನ್ನು ಅಂಕಿ ಅಂಶ ಹಾಗೂ ಉದಾಹರಣೆಗಳ ಸಹಿತ ವಿವರಿಸುತ್ತಾ ಈ ನಿಟ್ಟಿನಲ್ಲಿ ಸಮಾಜ ಶಾಸ್ತ್ರ ಉಪನ್ಯಾಸಕರುಗಳು ವಿಶೇಷವಾಗಿ ಸ್ವಯಂ ಸಿದ್ಧಗೊಂಡು ಪಠ್ಯೇತರವಾಗಿ ವಿದ್ಯಾರ್ಥಿಗಳಿಗೆ ತಿಳಿಸುವ ಕುರಿತಾಗಿಯೂ ವಿವರಿಸಿದರು.

ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಏರ್ಪಾಡಾಗಿದ್ದ ಪುನಶ್ಚೇತನ ಕಾರ್ಯಾಗಾರದ ಸಂಚಾಲಕ ಜಿ ಎಂ ಸಂಗಮೇಶ್ವರಪ್ಪ ಉಪಸ್ಥಿತಿಯಲ್ಲಿ ಉಪನ್ಯಾಸಕ ಪಾಲಾಕ್ಷಿ ಸ್ವಾಗತ ಕೋರುತ್ತಾ ಪರಿಚಯ ಭಾಷಣ ಮಾಡಿದರು. ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಆಗಮಿಸಿದ್ದ ಸರ್ಕಾರಿ ಪದವಿಪೂರ್ವ ಕಾಲೇಜು ಸಮಾಜಶಾಸ್ತ್ರ ಉಪನ್ಯಾಸಕರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga ಮುಂದಿನ 61 ವಾರಗಳಿಗೆ ಜಾನುವಾರುಗಳ ಅಗತ್ಯ ಮೇವಿಗೆ ಕೊರತೆಯಿಲ್ಲ : ಪ್ರಭುಲಿಂಗ ಕವಳಿಕಟ್ಟಿ

DC Shivamogga ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಗಸ್ಟ್...

DC Shivamogga “ಭಾರತ್ ಜೋಡೋ” ಯೋಜನೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ: ಪ್ರಭುಲಿಂಗ ಕವಳಿಕಟ್ಟಿ

DC Shivamogga ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ-ಸಾಮಾಜಿಕ...

B.Y. Raghavendra ಕೇಂದ್ರದ ಅಟಲ್ ಪಿಂಚಣಿ ಯೋಜನೆಗೆಶಿವಮೊಗ್ಗ ಜಿಲ್ಲೆಯಲ್ಲಿ ಗಮನಾರ್ಹ ಸ್ಪಂದನ- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೂ ವೃದ್ಧಾಪ್ಯದಲ್ಲಿ ಆರ್ಥಿಕ...