Klive Special Article ನೊಳಂಬ ಶ್ರೀ ಕಲ್ಲೇಶ್ವರ ದೇವಾಲಯವು ಕರ್ನಾಟಕದ ತುಮಕೂರು ಜಿಲ್ಲೆಯ ಅರಳಗುಪ್ಪೆ ಗ್ರಾಮದಲ್ಲಿದೆ. 9ನೇ ಶತಮಾನದಲ್ಲಿ ನೊಳಂಬರ ಆಳ್ವಿಕೆಯಲ್ಲಿ ನಿರ್ಮಾಣವಾದ ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇದು ತನ್ನ ವಿಶಿಷ್ಟ ನೊಳಂಬ ಮತ್ತು ಪಶ್ಚಿಮ ಗಂಗಾ ವಾಸ್ತುಶಿಲ್ಪ ಶೈಲಿಗಳಿಗೆ ಹೆಸರುವಾಸಿಯಾದ ರಾಜ್ಯ ಸಂರಕ್ಷಿತ ಸ್ಮಾರಕವಾಗಿದೆ.
ವಾಸ್ತುಶಿಲ್ಪದ ವೈಶಿಷ್ಟ್ಯಗಳು
ಸೂಕ್ಷ್ಮ ಕೆತ್ತನೆಯ ಮೇಲ್ಛಾವಣಿಯ ಮಹಾ ಮಂಟಪವು ನೃತ್ಯ ಮಾಡುತ್ತಿರುವ ಶಿವನ ಅದ್ಭುತ ತ್ರಿ-ಆಯಾಮದ (ಮೂರು ಆಯಾಮ, 3 Dimension) ಶಿಲ್ಪವನ್ನು ಹೊಂದಿದೆ. ಇದು ನಾಲ್ಕು ಹಾರುವ ವಿದ್ಯಾಧರರಿಂದ ಸುತ್ತುವರಿದಿದೆ. ಮೇಲ್ಛಾವಣಿಯ ಕೆಲಸವು ನೊಳಂಬರ ಕಾಲದ ಶಿಲ್ಪ ಕಲೆಯಲ್ಲಿ ಒಂದು ಮೇರುಕೃತಿಯಾಗಿದೆ.
ಉಮಾ ಮಹೇಶ್ವರ ಶಿಲ್ಪ: ಈ ದೇವಾಲಯದಲ್ಲಿ ಶಿವನು ತನ್ನ ಸಂಗಾತಿ ಪಾರ್ವತಿಯೊಂದಿಗೆ ಇರುವ ಅಪರೂಪದ ಮತ್ತು ಸುಂದರವಾದ ಉಮಾ ಮಹೇಶ್ವರ ಶಿಲ್ಪವಿದೆ. ಇದು ಸೂಕ್ಷ್ಮವಾದ ಕೆತ್ತನೆಗಳ ವಿವರಗಳನ್ನು ಹೊಂದಿದೆ.
ದೊಡ್ಡ ನಂದಿ ಶಿಲ್ಪ: ಮುಖ್ಯ ಗರ್ಭಗುಡಿಯ ಹೊರಗೆ, ನಂದಿಯ (ಶಿವನ ವಾಹನವಾದ ಗೂಳಿ) ದೊಡ್ಡ, ಸೂಕ್ಷ್ಮವಾಗಿ ಕೆತ್ತಿದ ಪ್ರತಿಮೆಯು ಮತ್ತೊಂದು ಗಮನಾರ್ಹ ಆಕರ್ಷಣೆಯಾಗಿದೆ.
ಅನೇಕ ರಾಜವಂಶಗಳ ಪ್ರಭಾವವನ್ನು ಹೊಂದಿದ್ದರೂ ಪ್ರಧಾನವಾಗಿ ನೊಳಂಬ ಶೈಲಿಯದ್ದಾಗಿದ್ದರೂ, ದೇವಾಲಯವು ಅದರ ಆರಂಭಿಕ ವಿನ್ಯಾಸದಲ್ಲಿ ಪಶ್ಚಿಮ ಗಂಗಾ ಪ್ರಭಾವಗಳನ್ನು ಮತ್ತು ನಂತರದ ಸೇರ್ಪಡೆಗಳಲ್ಲಿ ಹೊಯ್ಸಳ ರಾಜವಂಶದ ಪ್ರಭಾವಗಳನ್ನು ಸಹ ತೋರಿಸುತ್ತದೆ.
Klive Special Article ಕಪ್ಪು ಗ್ರಾನೈಟ್ ಲಿಂಗದ ರೂಪದಲ್ಲಿರುವ ಶಿವ ದೇವಾಲಯವು ,ವಿಸ್ತಾರವಾದ ಕೆರೆಯ ದಡದಲ್ಲಿದ್ದು, ದಡದಲ್ಲಿ ವಸಂತ ಮಂಟಪವೂ ಇದ್ದು ಅದು ಮತ್ತು ರಮಣೀಯ ವಾತಾವರಣಕ್ಕೆ ಸಾಕ್ಷಿಯಾಗಿದೆ.
ಈ ದೇವಾಲಯಗಳ ವಾಸ್ತುಶಿಲ್ಪವು ಗಂಗ-ನೋಳಂಬ ಶೈಲಿಯದು (ಕ್ರಿ.ಶ. 9ನೇ ಶತಮಾನ). ಮುಖ್ಯ ದೇವಾಲಯದ (ಕಲ್ಲೇಶ್ವರ) ಛಾವಣಿಯಲ್ಲಿ ನರ್ತನಮಾಡುವ ಶಿವನ ಶಿಲ್ಪವಿದೆ — ಅವನ ಸುತ್ತಲೂ ವಾದ್ಯಗಾರರು ಮತ್ತು ಎಂಟು ದಿಕ್ಕಿನ ಪಾಲಕರು (ದಿಕ್ಪಾಲರು) ಇದ್ದಾರೆ.

ಕ್ರಿ.ಶ. 895 (ಶಕ 817) ರ ಶಿಲಾಶಾಸನದಲ್ಲಿ ಈ ದೇವಾಲಯವನ್ನು ನೋಳಂಬ ರಾಜನೊಬ್ಬನು, ತನ್ನ ಅಧಿಪತಿ ಪಶ್ಚಿಮ ಗಂಗ ರಾಜ ಎರಡನೇ ರಾಚಮಲ್ಲ (ಆಳ್ವಿಕೆ: 870–907) ಅವರ ಅಧೀನದಲ್ಲಿ ನಿರ್ಮಿಸಿದ್ದಾನೆಂದು ಹೇಳುತ್ತದೆ. ಇದೇ ಶಾಸನದಲ್ಲಿ ಎರಡನೇ ರಾಚಮಲ್ಲ ಸ್ವತಃ ಈ ದೇವಾಲಯ (ಶಾಸನದಲ್ಲಿ ಕಲ್ಲದೇಗುಲ ಎಂದು ಕರೆಯಲ್ಪಟ್ಟಿದೆ) ನಿರ್ಮಾಣಕ್ಕೆ ದಾನ ನೀಡಿರುವುದನ್ನೂ ದಾಖಲಿಸಿದೆ. ದೇವಾಲಯದ ಕೆರೆಯ (ಪುಷ್ಕರಣಿ) ಬಳಿ ಕಂಡುಬರುವ ಇನ್ನೊಂದು ವೀರಗಲ್ಲು (ಹೀರೋ ಸ್ಟೋನ್) ಈ ಪ್ರದೇಶ ಆ ಕಾಲದಲ್ಲಿ ಪಶ್ಚಿಮ ಗಂಗ ವಂಶದ ಆಡಳಿತದೊಳಗೆ ಇತ್ತೆಂಬುದನ್ನು ದೃಢಪಡಿಸುತ್ತದೆ.
ಇತಿಹಾಸಕಾರ ಎಂ.ಎನ್. ಸರ್ಮಾ ಅವರ ಪ್ರಕಾರ, ಪಶ್ಚಿಮ ಗಂಗರು ಮತ್ತು ನೊಳಂಬರು ಸಂಸ್ಕೃತಿ ಹಾಗೂ ಕಲೆಗಳಲ್ಲಿ ಅಪಾರ ಶ್ರದ್ಧೆ, ಅಭಿಮಾನ ಹೊಂದಿದ್ದರು. ಅವರು ಸಾಮಾನ್ಯವಾದ ಶಿಲ್ಪಿ ಮತ್ತು ಸ್ಥಪತಿ ಗಿಲ್ಡುಗಳು (guilds) — ಅಂದರೆ ಒಂದೇ ಶಿಲ್ಪಕಲಾ ಸಂಘಗಳು — ಬಳಸುತ್ತಿದ್ದರು.
ನಂತರದ ಕಾಲದಲ್ಲಿ, ವಿಶೇಷವಾಗಿ ಹೊಯ್ಸಳರ ಕಾಲದಲ್ಲಿ, ದೇವಾಲಯಕ್ಕೆ ಮೂರು ಬದಿಯ ಉಪಮಂದಿರಗಳು ಮತ್ತು ಶಿವನ ವಾಹನವಾದ ನಂದಿಗೆ (ನಂದಿ-ಶಾಲೆ) ಒಂದು ಪ್ರತ್ಯೇಕ ಕಟ್ಟಡ ಸೇರಿಸಲಾಯಿತು ಎಂದು ಕಲಾ ವಿಮರ್ಶಕ ಟಕೆಯೋ ಕಾಮಿಯಾ ಮತ್ತು ಸರ್ಮಾ ಇಬ್ಬರೂ ಹೇಳಿದ್ದಾರೆ.
ದೇವಾಲಯದ ವಿನ್ಯಾಸ ಮತ್ತು ಶಿಲ್ಪಕಲಾ ವೈಶಿಷ್ಟ್ಯಗಳು ಗಮನಿಸಿದರೆ
ಗರ್ಭಗೃಹ (sanctum) ಚೌಕಾಕಾರದ ಪಿರಮಿಡ್ ಆಕಾರದ ಯೋಜನೆಯಾಗಿದೆ.
ಇದರ ಹೊರಭಾಗ ಸರಳವಾದರೂ ಸುಂದರ ಸ್ತಂಭಗಳನ್ನು ಹೊಂದಿದೆ.
ಗರ್ಭಗೃಹ ಮತ್ತು ಮುಂಭಾಗದ ಮುಖಮಂಟಪದ ನಡುವಣ ಭಾಗವನ್ನು ಅಂತರಾಳ ಎಂದೂ ಕರೆಯುತ್ತಾರೆ.
ಮುಖ್ಯ ಸಭಾಭಾಗವಾದ ಮಹಾಮಂಟಪ ಅಥವಾ ನವರಂಗ ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಂಡಿದೆ.
ಗರ್ಭಗೃಹದ ಮೇಲಿನ ಶಿಖರ ಮತ್ತು ಸುಕನಾಸಿ (ಮುಂಭಾಗದ ಗೋಪುರ ಭಾಗ) ನಂತರದ ದುರಸ್ತಿ ಕಾಲದವು, ಆದರೆ ದೇವಾಲಯದ ನೆಲಭಾಗದ ಅಧಿಷ್ಠಾನ ಮೂಲದಾಗಿದೆ.
ಮುಖ್ಯ ಬಾಗಿಲಿನ ದ್ವಾರಶಾಖೆ ಮತ್ತು ಲಲಾಟ (ಲಿಂಟೆಲ್) ಅತ್ಯುತ್ತಮ ಶಿಲ್ಪಗಳನ್ನು ಹೊಂದಿವೆ.
ಬಾಗಿಲಿನ ಎರಡೂ ಬದಿಗಳಲ್ಲಿ ಕುಳಿತಿರುವ ದ್ವಾರಪಾಲಕರು,
ಸುತ್ತುವರಿದ ಲತೆ-ಬಳ್ಳಿಗಳ ಅಲಂಕಾರಗಳು,
ಅವುಗಳಲ್ಲಿ ಯಕ್ಷರು ಮತ್ತು ಯಕ್ಷಿಣಿಯರು (ಸೌಮ್ಯ ಆತ್ಮಶಕ್ತಿಗಳು) ಚಿತ್ರಿಸಲಾಗಿದೆ.
ಬಾಗಿಲಿನ ಮೇಲ್ಭಾಗದಲ್ಲಿ ಗಜಲಕ್ಷ್ಮಿ ದೇವಿಯ ಶಿಲ್ಪವಿದ್ದು, ಆಕೆಯ ಎರಡೂ ಬದಿಯಿಂದ ಆನೆಗಳು ನೀರು ಎರೆಯುತ್ತಿವೆ.
ಈ ಗಜಲಕ್ಷ್ಮಿಯ ಶಿಲ್ಪವು ಶ್ರವಣಬೆಳಗೊಳದ ವಿಂಧ್ಯಗಿರಿಯ “ಅಖಂಡ ಬಾಗಿಲು”ಯ ಶಿಲ್ಪಕ್ಕೆ ಪ್ರೇರಣೆಯಾಗಿರಬಹುದೆನಿಸುತ್ತದೆ.
ಮಹಾಮಂಟಪದ ಮೇಲ್ಭಾಗದ ಅಷ್ಟದಿಕ್ಕುಗಳ ರಕ್ಷಕ ದೇವತೆಗಳ (ಅಷ್ಟ-ದಿಕ್ಪಾಲಕರು) ಚಿತ್ರಪಟಗಳು ಅತ್ಯಂತ ನಾಜೂಕು ಕಲಾಕೌಶಲ ತೋರಿಸುತ್ತವೆ.
ಅವುಗಳಲ್ಲಿ ಚತುರ್ಭುಜ ನಟರಾಜ ಶಿಲ್ಪ, ಹಾಗು ನಾಲ್ಕು ದಂತಗಳ ಆನೆ ಮೇಲೆ ಇಂದ್ರನು ಮತ್ತು ಸಚಿಯು ಕುಳಿತಿರುವ ದೃಶ್ಯ ವಿಶಿಷ್ಟ ಕಲಾತ್ಮಕತೆಯ ದೃಶ್ಯಕಾವ್ಯವಾಗಿದೆ.
ಅರಳಗುಪ್ಪೆಯ ಕಲ್ಲೇಶ್ವರ ದೇವಾಲಯವು ನೊಳಂಬ–ಗಂಗ ಕಾಲದ ಶೈವ ಪರಂಪರೆಯ ಅದ್ಭುತ ಶಿಲ್ಪಕಲೆಯ ಉದಾಹರಣೆಯಾಗಿದೆ..
ಆಧಾರ:
Sarma, I.K. (1992) [1992]. Temples of the Gangas of Karnataka. New Delhi:
Archaeological Survey of India. ISBN 0-19-560686-8.
Kamiya, Takeyo. “Architecture of Indian subcontinent”. Indian Architecture. Gerard da Cunha. Archived from the original on 8 February 2012. Retrieved 27 December 2012.
ನಮ್ಮ ದೇವಾಲಯ, ನಮ್ಮ ಹೆಮ್ಮೆ,
ನಮ್ಮ ಪರಂಪರೆ ಶ್ರೇಷ್ಠ ಪರಂಪರೆ,
ನಮ್ಮ ಇತಿಹಾಸ ಭವ್ಯ ಇತಿಹಾಸ.
ದಿಲೀಪ್ ನಾಡಿಗ್
6361124316
9448148710
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ, (ರಿ), ಶಿವಮೊಗ್ಗ
