Thursday, September 10, 2026
Thursday, September 10, 2026

Dr. Besagarahalli Ramanna Foundation ಕುಪ್ಪಳಿಯಲ್ಲಿ ಸಾಹಿತ್ಯ ಕಮ್ಮಟ-೨೦೨೫. ಅರ್ಜಿ ಸಲ್ಲಿಕೆಗೆ ಕೊನೇ ದಿನ

Date:

Dr. Besagarahalli Ramanna Foundation ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಜೊತೆಯಲ್ಲಿ ಆಯೋಜಿಸಿರುವ ‘ಸಾಹಿತ್ಯ ಕಮ್ಮಟ – ೨೦೨೫’ ಕ್ಕೆ ಅರ್ಜಿ ಸಲ್ಲಿಸಲು ಇಂದು ಕಡೆಯ ದಿನ. ಭಾಗವಹಿಸಲು ಇಚ್ಚಿಸುವ ಎಲ್ಲರಿಗೂ ಅರ್ಜಿ ಸಲ್ಲಿಸುವುದು ಕಡ್ಡಾಯ. ಆಯ್ಕೆಗೊಂಡವರಿಗೆ ಇಮೇಲ್ ಮೂಲಕ ತಿಳಿಸಲಾಗುವುದು.

ಈ ಬಾರಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕುರಿತಾಗಿ ಚರ್ಚೆ, ಸಂವಾದಗಳು ನಡೆಯಲಿವೆ. ಹಿರಿಯರಾದ ಡಾ. ಕೆ.ವಿ. ನಾರಾಯಣ ಅವರು ಕಮ್ಮಟ ನಿರ್ದೇಶಕರಾಗಿದ್ದಾರೆ. ಜೊತೆಯಲ್ಲಿ ಓ ಎಲ್ ನಾಗಭೂಷಣಸ್ವಾಮಿ, ಕೆ.ವೈ. ನಾರಾಯಣಸ್ವಾಮಿ, ಕೆ. ಪುಟ್ಟಸ್ವಾಮಿ, ಮೇಟಿ ಮಲ್ಲಿಕಾರ್ಜುನ, ವಿಕ್ರಂ ವಿಸಾಜಿ, ಬಿ ಎಲ್ ರಾಜು, ಆರ್ ಶಿವಪ್ಪ, ಬಿ ಎಂ ಪುಟ್ಟಯ್ಯ, ಸಬಿತಾ ಬನ್ನಾಡಿ, ಗೀತಾ ವಸಂತ ಮುಂತಾದ ಬರಹಗಾರರು ಸಂವಾದಗಳನ್ನು ಮುನ್ನಡೆಸುವರು.

  • ಕುಪ್ಪಳಿಯಲ್ಲಿ ನವಂಬರ್ 14, 15, 16 ಮೂರು ದಿನಗಳ ಕಮ್ಮಟ ನಡೆಯಲಿದ್ದು. ಮೂರೂ ದಿನಗಳ ಕಾಲ ಭಾಗವಹಿಸುವಿಕೆ ಕಡ್ಡಾಯ.
  • ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉಚಿತವಾದ ಊಟ ಮತ್ತು ಸರಳವಾದ ವಸತಿ ವ್ಯವಸ್ಥೆ ಇರುತ್ತದೆ. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
  • ಅರ್ಜಿಸಲ್ಲಿಸದೇ, ಆಯ್ಕೆಗೊಳ್ಳದೇ ನೇರ ಪ್ರವೇಶವಿಲ್ಲ.
  • 60 ಮಂದಿಗೆ ಮಾತ್ರ ಅವಕಾಶ. ಅದರಲ್ಲಿ 30 ಸೀಟುಗಳು ಹೆಣ್ಣುಮಕ್ಕಳಿಗೆ ಮೀಸಲು.

ಆಸಕ್ತರು ನಿಮ್ಮ‌ ಹೆಸರು, ವಯಸ್ಸು, ಉದ್ಯೋಗ, ವಿಳಾಸ ಮತ್ತು ಆಸಕ್ತಿಗಳ ವಿವರಗಳುಳ್ಳ ಅರ್ಜಿಯನ್ನು email ಮಾಡಬಹುದು. Email : drbrtrust@gmail.com

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...